spot_img

ತುಳು ನಾಟಕ “ಬಿರ್ಸೆ” ಶೀಘ್ರ ರಂಗ ಪ್ರದರ್ಶನಕ್ಕೆ! ಮುಡ್ರಾಲು ದೇವಸ್ಥಾನದಲ್ಲಿ ಶುಭ ಮುಹೂರ್ತ

Date:

spot_img

ಬಜಗೋಳಿ: ಪ್ರಸಿದ್ಧ ಕಲಾತ್ಮಕ ಪ್ರತಿಭೆ ಅಭಿಷೇಕ್ ಬಜಗೋಳಿ ಅವರ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ವರ್ಷದ ಹೊಚ್ಚ ಹೊಸ ತುಳು ಹಾಸ್ಯಮಯ ಸಾಮಾಜಿಕ ನಾಟಕ “ಬಿರ್ಸೆ” ಶೀಘ್ರದಲ್ಲೇ ರಂಗೇರಲಿದೆ.

ಈ ನಾಟಕದ ಅಧಿಕೃತ ಶುಭಾರಂಭವಾದ ಮುಹೂರ್ತ ಕಾರ್ಯಕ್ರಮವು ಇದೇ ಬರುವ ಶುಕ್ರವಾರ ಜೂನ್ 4ರಂದು , ಬಜಗೋಳಿ ಶ್ರೀ ಮುಡ್ರಾಲು ದುರ್ಗಾಪರಮೇಶ್ವರಿ ಅಮ್ಮನವರ ಪವಿತ್ರ ಸನ್ನಿಧಿಯಲ್ಲಿ ಜರುಗಲಿದೆ. ನಾಟಕದ ತಂಡ, ಸ್ಥಳೀಯ ಅಭಿಮಾನಿಗಳು ಹಾಗೂ ಕಲಾಪೋಷಕರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಈ ನಾಟಕದಲ್ಲಿ “ಬೊಳ್ಳಿ ಕಲಾವಿದರು” ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.ನಾಟಕದ ಸಮಗ್ರ ನಿರ್ವಹಣೆಯನ್ನು “ಕಾಮಿಡಿ ರಾಜೆ” ಖ್ಯಾತಿಯ ನಾಗರಾಜ್ ಕಾಡುಹೊಳೆಯವರು ನಿರ್ವಹಿಸಲಿದ್ದಾರೆ. ಸಲಹೆ ಸಹಕಾರವನ್ನು ಮಹಾಲಕ್ಷ್ಮಿ ಆರ್ಟ್ಸ್ ಬಜಗೋಳಿಯ ದಿಲೀಪ್ ಡಿ ಕೆ ಹಾಗೂ ಅಕ್ಷತ್ ಮಾಳರವರು ನೀಡಲಿದ್ದಾರೆ.

ತುಳು ನಾಟಕ ಕ್ಷೇತ್ರದಲ್ಲಿ ಹೊಸ ರೀತಿಯ ಕುತೂಹಲ ಭರಿತ ವಿಷಯ ಇರುವ ಕಥೆಯೊಂದಿಗೆ ರೂಪುಗೊಂಡಿರುವ ಈ ವರ್ಷದ ಹೊಚ್ಚ ಹೊಸ ತುಳು ಹಾಸ್ಯಮಯ ಸಾಮಾಜಿಕ ನಾಟಕ “ಬಿರ್ಸೆ”, ಪ್ರೇಕ್ಷಕರಿಗೆ ಹೆಚ್ಚಿನ ಮನೋರಂಜನೆಯನ್ನು ನೀಡಲಿದೆ ಎನ್ನುವ ನಿರೀಕ್ಷೆಯಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಸದ್ಭಾವನಾ ದಿವಸ್

ಇಂದು ದೇಶಾದ್ಯಂತ ಶಾಂತಿ, ಸೌಹಾರ್ದತೆ ಮತ್ತು ರಾಷ್ಟ್ರೀಯ ಏಕತೆಯ ಮಹತ್ವವನ್ನು ಎತ್ತಿ ಹಿಡಿಯುವ ಸದ್ಭಾವನಾ ದಿವಸವನ್ನು ಆಚರಿಸಲಾಗುತ್ತದೆ

1995 ರ ನಂತರದ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಲು ಗಮನ ಸೆಳೆಯುವ ಸೂಚನೆ ಮಂಡಿಸಿ ಯಶಸ್ವಿಯಾದ ವಿ ಪ ಸದಸ್ಯ ಶಶೀಲ್ ಜಿ ನಮೋಶಿ

1995 ರಿಂದ ಪ್ರಾರಂಭವಾದ ಕನ್ನಡ ಮಾಧ್ಯಮದ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಬೇಕು ಎಂದು ಗಮನ ಸೆಳೆಯುವ ಸೂಚನೆ ಮಂಡಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಂದ ಅನುದಾನ ನೀಡುವ ಭರವಸೆ ಪಡೆಯುವಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಯಶಸ್ವಿಯಾದರು.

ಸುಂಟರಗಾಳಿ ಮತ್ತು ಅತಿಯಾದ ಮಳೆಯಿಂದ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಆದ ಹಾನಿಗೆ ತುರ್ತು ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ವಿ ಸುನಿಲ್‌ ಕುಮಾರ್ ಮನವಿ‌

ಸುಂಟರಗಾಳಿ ಮತ್ತು ಅತಿಯಾದ ಮಳೆಯಿಂದ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಆದ ಹಾನಿಗೆ ತುರ್ತು ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ವಿ ಸುನಿಲ್‌ ಕುಮಾರ್ ಮನವಿ‌ ಮಾಡಿದ್ದಾರೆ.

ಹೈಪೊಗ್ಲಿಸಿಮಿಯಾ: ಹಠಾತ್ ರಕ್ತದ ಸಕ್ಕರೆ ಇಳಿಕೆ ಅತ್ಯಂತ ಅಪಾಯಕಾರಿ – ತಜ್ಞರ ಎಚ್ಚರಿಕೆ

ಇದ್ದಕ್ಕಿದ್ದಂತೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಯಮಿತ ಮಟ್ಟಕ್ಕಿಂತಲೂ ಕಡಿಮೆಯಾದರೆ ಅದು ಹೆಚ್ಚು ಅಪಾಯಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು.