spot_img

ತುಳು ನಾಟಕ “ಬಿರ್ಸೆ” ಶೀಘ್ರ ರಂಗ ಪ್ರದರ್ಶನಕ್ಕೆ! ಮುಡ್ರಾಲು ದೇವಸ್ಥಾನದಲ್ಲಿ ಶುಭ ಮುಹೂರ್ತ

Date:

spot_img

ಬಜಗೋಳಿ: ಪ್ರಸಿದ್ಧ ಕಲಾತ್ಮಕ ಪ್ರತಿಭೆ ಅಭಿಷೇಕ್ ಬಜಗೋಳಿ ಅವರ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ವರ್ಷದ ಹೊಚ್ಚ ಹೊಸ ತುಳು ಹಾಸ್ಯಮಯ ಸಾಮಾಜಿಕ ನಾಟಕ “ಬಿರ್ಸೆ” ಶೀಘ್ರದಲ್ಲೇ ರಂಗೇರಲಿದೆ.

ಈ ನಾಟಕದ ಅಧಿಕೃತ ಶುಭಾರಂಭವಾದ ಮುಹೂರ್ತ ಕಾರ್ಯಕ್ರಮವು ಇದೇ ಬರುವ ಶುಕ್ರವಾರ ಜೂನ್ 4ರಂದು , ಬಜಗೋಳಿ ಶ್ರೀ ಮುಡ್ರಾಲು ದುರ್ಗಾಪರಮೇಶ್ವರಿ ಅಮ್ಮನವರ ಪವಿತ್ರ ಸನ್ನಿಧಿಯಲ್ಲಿ ಜರುಗಲಿದೆ. ನಾಟಕದ ತಂಡ, ಸ್ಥಳೀಯ ಅಭಿಮಾನಿಗಳು ಹಾಗೂ ಕಲಾಪೋಷಕರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಈ ನಾಟಕದಲ್ಲಿ “ಬೊಳ್ಳಿ ಕಲಾವಿದರು” ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.ನಾಟಕದ ಸಮಗ್ರ ನಿರ್ವಹಣೆಯನ್ನು “ಕಾಮಿಡಿ ರಾಜೆ” ಖ್ಯಾತಿಯ ನಾಗರಾಜ್ ಕಾಡುಹೊಳೆಯವರು ನಿರ್ವಹಿಸಲಿದ್ದಾರೆ. ಸಲಹೆ ಸಹಕಾರವನ್ನು ಮಹಾಲಕ್ಷ್ಮಿ ಆರ್ಟ್ಸ್ ಬಜಗೋಳಿಯ ದಿಲೀಪ್ ಡಿ ಕೆ ಹಾಗೂ ಅಕ್ಷತ್ ಮಾಳರವರು ನೀಡಲಿದ್ದಾರೆ.

ತುಳು ನಾಟಕ ಕ್ಷೇತ್ರದಲ್ಲಿ ಹೊಸ ರೀತಿಯ ಕುತೂಹಲ ಭರಿತ ವಿಷಯ ಇರುವ ಕಥೆಯೊಂದಿಗೆ ರೂಪುಗೊಂಡಿರುವ ಈ ವರ್ಷದ ಹೊಚ್ಚ ಹೊಸ ತುಳು ಹಾಸ್ಯಮಯ ಸಾಮಾಜಿಕ ನಾಟಕ “ಬಿರ್ಸೆ”, ಪ್ರೇಕ್ಷಕರಿಗೆ ಹೆಚ್ಚಿನ ಮನೋರಂಜನೆಯನ್ನು ನೀಡಲಿದೆ ಎನ್ನುವ ನಿರೀಕ್ಷೆಯಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಾನಸಿಕ ಅಸ್ವಸ್ಥ ಯುವಕನ ರಕ್ಷಣೆ

ಕಸಕಡ್ಡಿ ಹಿಡಿಸೂಡಿ ಗೋಣಿ ಚೀಲದಲ್ಲಿ ತುಂಬಿಕೊಂಡು ಮಳೆಯಲ್ಲಿ ನೆನೆಯುತ್ತಾ ಅಮಾನವೀಯ ರೀತಿಯಲ್ಲಿದ್ದ ಹೊರ ರಾಜ್ಯದ ಮನೋರೋಗಿ ಯುವಕನನ್ನು ಮಂಜೇಶ್ವರ ಸ್ನೇಹಾಲಯ ಆಶ್ರಮಕ್ಕೆ ಪುನರ್ವಸತಿಗೆ ದಾಖಲಿಸಲಾಗಿದೆ.

ಮೊಸರು ಮತ್ತು ಬೆಳ್ಳುಳ್ಳಿ ಒಂದೇ ಬಟ್ಟಲಲ್ಲಿ – ಜೀರ್ಣಕ್ರಿಯೆಯಿಂದ ರೋಗನಿರೋಧಕ ಶಕ್ತಿ ವರೆಗೆ ಅನೇಕ ಆರೋಗ್ಯ ಲಾಭ!

ನಿತ್ಯ ಆಹಾರದಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಮೊಸರು ಮತ್ತು ಬೆಳ್ಳುಳ್ಳಿ ಜೊತೆಯಾಗಿ ಸೇವಿಸಿದರೆ, ಆಯುರ್ವೇದದ ಪ್ರಕಾರ ದೇಹಕ್ಕೆ ಅನೇಕ ರೀತಿಯಲ್ಲಿ ಲಾಭವಾಗುತ್ತದೆ.

ದೀಪಿಕಾ ಪಡುಕೋಣೆ ಹಾಲಿವುಡ್ ವಾಕ್ ಆಫ್ ಫೇಮ್ ಗೌರವಕ್ಕೆ ಭಾಜನೆ – 2026ರ ಪಟ್ಟಿಯಲ್ಲಿ ಭಾರತೀಯ ತಾರೆಗೂ ಸ್ಥಾನ!

ಭಾರತೀಯ ಚಿತ್ರರಂಗದ ಹೆಮ್ಮೆಯ ತಾರೆ ದೀಪಿಕಾ ಪಡುಕೋಣೆ ಇದೀಗ ಜಾಗತಿಕ ಮಟ್ಟದಲ್ಲಿ ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. 2026ರ ಹಾಲಿವುಡ್ ವಾಕ್ ಆಫ್ ಫೇಮ್ – ಮೋಷನ್ ಪಿಕ್ಚರ್ಸ್ ವಿಭಾಗದಲ್ಲಿ ದೀಪಿಕಾಗೆ ಸ್ಟಾರ್ ಗೌರವ ಲಭಿಸುತ್ತಿದೆ.

ಪೊಲೀಸ್ ಅಧಿಕಾರಿಗೆ ಸಿಎಂ ಸಭೆಯಲ್ಲಿ ಅವಮಾನ : ಭರಮನಿ ನಿವೃತ್ತಿ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಬೆಳಗಾವಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಾರ್ವಜನಿಕವಾಗಿ ಅವಮಾನಕ್ಕೊಳಗಾದ ಧಾರವಾಡದ ಎಎಸ್‌ಪಿ ನಾರಾಯಣ ಭರಮನಿ, ತೀವ್ರ ಅಸಹನೆ ವ್ಯಕ್ತಪಡಿಸಿ ಸ್ವಯಂ ನಿವೃತ್ತಿಗೆ ಮನವಿ ಸಲ್ಲಿಸಿದ ಪ್ರಕರಣ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.