
ಕಾರ್ಕಳ/ಇರ್ವತ್ತೂರು: ಶತಮಾನೋತ್ಸವದ ಸಂಭ್ರಮದಲ್ಲಿರುವ ಕೊಳಕೆ ಇರ್ವತ್ತೂರು ಸರಕಾರಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಸಮಾಜ ಸೇವಕ, ಶಾಲಾ ಹಿತೈಷಿ ಶ್ರೀ ಉದಯ ಎಸ್. ಕೋಟ್ಯಾನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಾಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಇವರು, ಶತಮಾನೋತ್ಸವದ ಸಂದರ್ಭದಲ್ಲಿ ಸರಕಾರದಿಂದ ಗರಿಷ್ಠ ಅನುದಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ, ಊರಿನ ಹಾಗೂ ಮುಂಬೈ ದಾನಿಗಳ ಸಹಕಾರದೊಂದಿಗೆ ಶಾಲೆಯ ಚಿತ್ರಣವನ್ನೇ ಬದಲಿಸಿ, ಸುಸಜ್ಜಿತ ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಉಚಿತ ನೋಟ್ಪುಸ್ತಕ ವಿತರಣೆ ಹಾಗೂ ಶಾಲೆಯ ಎಲ್ಲಾ ಚಟುವಟಿಕೆಗಳಿಗೆ ಆರ್ಥಿಕ ಮತ್ತು ಶಾರೀರಿಕ ನೆರವು ನೀಡುತ್ತಾ ಬಂದಿರುವ ಇವರ ಸೇವೆಯನ್ನು ಗುರುತಿಸಿ ಈ ಜವಾಬ್ದಾರಿಯನ್ನು ನೀಡಲಾಗಿದೆ. ಉದಯ ಎಸ್. ಕೋಟ್ಯಾನ್ ಅವರ ಆಯ್ಕೆಗೆ ಶಾಲಾ ಅಭಿವೃದ್ಧಿ ಸಮಿತಿ (SDMC) ಹಾಗೂ ಶಾಲಾ ಆಡಳಿತ ಮಂಡಳಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದೆ.
ಹಳೆ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪಟ್ಟಿ:
- ಗೌರವಾಧ್ಯಕ್ಷರು: ಶ್ರೀ ಐ. ರಮಾನಾಥ್ ಶೆಣೈ, ಶ್ರೀ ಭಾಸ್ಕರ್ ಎಸ್. ಕೋಟ್ಯಾನ್, ಶ್ರೀ ರಮೇಶ್ ಶೆಟ್ಟಿ ಗುರಂತಿಬೆಟ್ಟು.
- ಅಧ್ಯಕ್ಷರು: ಶ್ರೀ ಉದಯ ಎಸ್. ಕೋಟ್ಯಾನ್.
- ಪ್ರಧಾನ ಕಾರ್ಯದರ್ಶಿ: ಶ್ರೀ ಉದಯ ಆಚಾರ್ಯ.
- ಕೋಶಾಧಿಕಾರಿ: ಶ್ರೀ ನಾಗವರ್ಮ ಜೈನ್ (ಜೊತೆ ಕೋಶಾಧಿಕಾರಿ: ಶಿವಾಜಿ).
- ಗೌರವ ಸಲಹೆಗಾರರು: ಶ್ರೀ ಧನರಾಜ್ ಜೈನ್, ಶ್ರೀ ಶೇಖರ್ ಅಂಚನ್, ಶ್ರೀ ಚಂದ್ರರಾಜ ಅತಿಕಾರಿ, ಶ್ರೀ ವಿಜಯ ಕುಮಾರ್, ಶ್ರೀ ಶೇಖರ್ ಕೋಟ್ಯಾನ್, ಶ್ರೀ ಸದಾನಂದ ಪೂಜಾರಿ, ಶ್ರೀ ಗಣೇಶ ಶೆಟ್ಟಿ ಗೋವಾ.
- ಉಪಾಧ್ಯಕ್ಷರು: ಶ್ರೀ ಬಾಲಕೃಷ್ಣ ಶೆಟ್ಟಿ, ಶ್ರೀ ಜಯಕರ ಕೋಟ್ಯಾನ್, ಶ್ರೀ ಪ್ರಸಾದ್ ಶೆಟ್ಟಿ, ಶ್ರೀ ಅಣ್ಣಿ ಎಂ, ಶ್ರೀ ಶಂಕರ ದೇವಾಡಿಗ.
- ಸಂಘಟನಾ ಕಾರ್ಯದರ್ಶಿಗಳು: ಸತೀಶ್ ನಿನ್ನಿಕಲ್ಲು (ಸಂಘಟನಾ), ಚಂದ್ರಹಾಸ್ ಮಡಿವಾಳ (ಜೊತೆ ಸಂಘಟನಾ).
- ಇತರ ಕಾರ್ಯದರ್ಶಿಗಳು: ಅಶ್ವಿನಿ (ಸಹ ಕಾರ್ಯದರ್ಶಿ), ಸುಧೀರ್ ಪೂಜಾರಿ (ಸಾಂಸ್ಕೃತಿಕ), ಪ್ರಸಾದ್ ದೇವಾಡಿಗ (ಕ್ರೀಡೆ), ಶಶಿಕಲಾ (ಮಹಿಳಾ).




































