ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆರ್ವಾಶೆ ಮೈನ್, ಇದರ ಶಾಲಾ ಕೊಠಡಿಗೆ ಟೈಲ್ಸ್ ಅಳವಡಿಸಲು ಅನುದಾನ ಮಂಜೂರು ಮಾಡಲಾಗಿದೆ.
ಎಸ್.ಡಿ.ಎಂ.ಸಿ ಸಮನ್ವಯ ಕೇಂದ್ರ ವೇದಿಕೆ, ಉಡುಪಿ ಜಿಲ್ಲೆ ಇವರ ವತಿಯಿಂದ ನೀಡಲಾಗುವ “ಜಿಲ್ಲಾ ಮಟ್ಟದ ಅತ್ಯುತ್ತಮ ಸರಕಾರಿ ಶಾಲೆ ಮತ್ತು ಶಾಲಾಭಿವೃದ್ಧಿ ಸಮಿತಿ – 2025” ಎಂಬ ಪ್ರಶಸ್ತಿಗೆ ಈ ಶಾಲೆ ಆಯ್ಕೆಯಾಗಿದೆ.
ಖ್ಯಾತ ವೈದ್ಯರಾದ ಡಾ|| ಎಂ. ಎಸ್. ರಾವ್ ರವರು ಮುದ್ರಾಡಿಯ ಎಂ.ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ವರಂಗ ಕೆಲ್ ಟೆಕ್ ಎನರ್ಜಿಸ್ ಲಿಮಿಟೆಡ್ ಅವರು ಮುದ್ರಾಡಿ ಪ್ರೌಢಶಾಲೆಗೆ ಕೊಡಮಾಡಿದ ವಿಜ್ಞಾನ ಪ್ರಯೋಗಾಲಯದ ಪರಿಕರಗಳ ಹಸ್ತಾಂತರ ಕಾರ್ಯಕ್ರಮವನ್ನು ನೆರವೇರಿಸಿದರು.
ರಾಜ್ಯಸಭಾ ಸದಸ್ಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ರಾಜ್ಯಸಭಾ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ ಬೆಳ್ತಂಗಡಿ ತಾಲೂಕಿನ 100 ಶಾಲೆಗಳಿಗೆ ತಲಾ ₹1.46 ಲಕ್ಷ ರೂ. ನಂತೆ ಒಟ್ಟು ₹1.46 ಕೋಟಿ ರೂ. ಮಂಜೂರಾಗಿದೆ