spot_img

ಉಡುಪಿಯಲ್ಲಿ ಡ್ರಗ್ಸ್ ಕಾಲ್ ಸೆಂಟರ್ ಶಂಕೆ – ಎನ್‌ಸಿಬಿ ‘ಆಪರೇಷನ್ ಮೆಡ್ ಮ್ಯಾಕ್ಸ್’ನಲ್ಲಿ ಅಂತರರಾಷ್ಟ್ರೀಯ ಮಾದಕ ಜಾಲ ಬೇಟೆ

Date:

spot_img

ಉಡುಪಿ : ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿತರಣೆ ಜಾಲವೊಂದನ್ನು ಭೇದಿಸುವಲ್ಲಿ ಭಾರತ ಮುನ್ನಡೆ ಸಾಧಿಸಿದ್ದು, Narcotics Control Bureau (NCB) ನಡೆಸಿದ ‘ಆಪರೇಷನ್ ಮೆಡ್ ಮ್ಯಾಕ್ಸ್’ನಲ್ಲಿ ಉಡುಪಿಯೂ ಪ್ರಮುಖ ನಕ್ಷೆಯಲ್ಲಿ ಕಾಣಿಸಿಕೊಂಡಿದೆ.

ಈ ಕಾರ್ಯಾಚರಣೆಯಲ್ಲಿ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ 10ಕ್ಕೂ ಹೆಚ್ಚು ದೇಶಗಳಲ್ಲಿ ಸಕ್ರಿಯವಾಗಿದ್ದ ದೊಡ್ಡ ಮಟ್ಟದ ಡ್ರಗ್ ಸಿಂಡಿಕೇಟ್ ಪತ್ತೆಯಾಗಿದೆ. ಎನ್‌ಸಿಬಿ ನಡೆಸಿದ ಚುರುಕಾದ ಕಾರ್ಯಾಚರಣೆಯಲ್ಲಿ ಈಗಾಗಲೇ 8 ಮಂದಿ ಆರೋಪಿಗಳನ್ನು ಬಂಧಿಸಿ, 5 ಡ್ರಗ್ಸ್‌ ಸರಕನ್ನು ವಶಕ್ಕೆ ಪಡೆಯಲಾಗಿದೆ. ತಮಿಳುನಾಡು ಮೂಲದ ಜಾಯಲ್ ಅಲ್ಫಾ ಎಂಬಾತನು ಉಡುಪಿಯಲ್ಲಿ ಬಂಧಿತನಾಗಿದ್ದು, ಈತನಿಂದಲೇ ಉಡುಪಿಯಲ್ಲಿ ಡ್ರಗ್ಸ್ ಕಾಲ್ ಸೆಂಟರ್ ಇರುವ ಶಂಕೆ ಬಲಗೊಂಡಿದೆ.

ಆನ್‌ಲೈನ್ ಜಾಹೀರಾತು ಹಾಗೂ ಕರೆಗಳ ಮೂಲಕ ವಿದೇಶಗಳಲ್ಲಿ ನಿಷೇಧಿತ ಔಷಧಿಗಳನ್ನು ಪೂರೈಸುತ್ತಿದ್ದ ಈ ಜಾಲ, ಭಾರತೀಯ ಎನ್‌ಸಿಬಿ ಮತ್ತು ಕೇಂದ್ರ ಗೃಹ ಇಲಾಖೆಯ ನಿಯಂತ್ರಣ ಕಾರ್ಯಾಚರಣೆಯ ಬಲೆಗೆ ಬಿದ್ದಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿ – “ಪ್ರತೀ ಮಾದಕ ದ್ರವ್ಯ ಕಳ್ಳಸಾಗಣೆ ಜಾಲವನ್ನು ನಿರ್ಮೂಲನೆ ಮಾಡುವ ದಿಟ್ಟ ಬದ್ಧತೆಯೊಂದಿಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕಾರ್ಯನಿರ್ವಹಿಸುತ್ತಿದೆ” ಎಂದು ಹೇಳಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಾನಸಿಕ ಅಸ್ವಸ್ಥ ಯುವಕನ ರಕ್ಷಣೆ

ಕಸಕಡ್ಡಿ ಹಿಡಿಸೂಡಿ ಗೋಣಿ ಚೀಲದಲ್ಲಿ ತುಂಬಿಕೊಂಡು ಮಳೆಯಲ್ಲಿ ನೆನೆಯುತ್ತಾ ಅಮಾನವೀಯ ರೀತಿಯಲ್ಲಿದ್ದ ಹೊರ ರಾಜ್ಯದ ಮನೋರೋಗಿ ಯುವಕನನ್ನು ಮಂಜೇಶ್ವರ ಸ್ನೇಹಾಲಯ ಆಶ್ರಮಕ್ಕೆ ಪುನರ್ವಸತಿಗೆ ದಾಖಲಿಸಲಾಗಿದೆ.

ಮೊಸರು ಮತ್ತು ಬೆಳ್ಳುಳ್ಳಿ ಒಂದೇ ಬಟ್ಟಲಲ್ಲಿ – ಜೀರ್ಣಕ್ರಿಯೆಯಿಂದ ರೋಗನಿರೋಧಕ ಶಕ್ತಿ ವರೆಗೆ ಅನೇಕ ಆರೋಗ್ಯ ಲಾಭ!

ನಿತ್ಯ ಆಹಾರದಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಮೊಸರು ಮತ್ತು ಬೆಳ್ಳುಳ್ಳಿ ಜೊತೆಯಾಗಿ ಸೇವಿಸಿದರೆ, ಆಯುರ್ವೇದದ ಪ್ರಕಾರ ದೇಹಕ್ಕೆ ಅನೇಕ ರೀತಿಯಲ್ಲಿ ಲಾಭವಾಗುತ್ತದೆ.

ದೀಪಿಕಾ ಪಡುಕೋಣೆ ಹಾಲಿವುಡ್ ವಾಕ್ ಆಫ್ ಫೇಮ್ ಗೌರವಕ್ಕೆ ಭಾಜನೆ – 2026ರ ಪಟ್ಟಿಯಲ್ಲಿ ಭಾರತೀಯ ತಾರೆಗೂ ಸ್ಥಾನ!

ಭಾರತೀಯ ಚಿತ್ರರಂಗದ ಹೆಮ್ಮೆಯ ತಾರೆ ದೀಪಿಕಾ ಪಡುಕೋಣೆ ಇದೀಗ ಜಾಗತಿಕ ಮಟ್ಟದಲ್ಲಿ ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. 2026ರ ಹಾಲಿವುಡ್ ವಾಕ್ ಆಫ್ ಫೇಮ್ – ಮೋಷನ್ ಪಿಕ್ಚರ್ಸ್ ವಿಭಾಗದಲ್ಲಿ ದೀಪಿಕಾಗೆ ಸ್ಟಾರ್ ಗೌರವ ಲಭಿಸುತ್ತಿದೆ.

ಪೊಲೀಸ್ ಅಧಿಕಾರಿಗೆ ಸಿಎಂ ಸಭೆಯಲ್ಲಿ ಅವಮಾನ : ಭರಮನಿ ನಿವೃತ್ತಿ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಬೆಳಗಾವಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಾರ್ವಜನಿಕವಾಗಿ ಅವಮಾನಕ್ಕೊಳಗಾದ ಧಾರವಾಡದ ಎಎಸ್‌ಪಿ ನಾರಾಯಣ ಭರಮನಿ, ತೀವ್ರ ಅಸಹನೆ ವ್ಯಕ್ತಪಡಿಸಿ ಸ್ವಯಂ ನಿವೃತ್ತಿಗೆ ಮನವಿ ಸಲ್ಲಿಸಿದ ಪ್ರಕರಣ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.