ಮಿಥುನ ಸಂಕ್ರಾಂತಿಯಂದು ಕಣಂಜಾರಿನಲ್ಲಿ ‘ಪರಿಸರ ಪೂಜನೆ’ ಕಾರ್ಯಕ್ರಮ

Date:

spot_img

ಕಣಂಜಾರು : ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಕಣಂಜಾರು ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಚಾರಿಟೇಬಲ್ ಟ್ರಸ್ಟ್ ಅವರ ಸಹಯೋಗದಲ್ಲಿ ಜೂನ್ 15, 2025ರ ಭಾನುವಾರ, ಮಿಥುನ ಸಂಕ್ರಾಂತಿಯ ಪವಿತ್ರ ದಿನದಂದು ‘ವಿಶ್ವ ಪರಿಸರ ದಿನಾಚರಣೆ’ ಯ ಅಂಗವಾಗಿ “ಪರಿಸರ ಪೂಜನೆ” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕಣಂಜಾರಿನಲ್ಲಿ ಭಕ್ತಿ ಭಾವಪೂರ್ಣವಾಗಿ ಆಚರಿಸಲಾಯಿತು.

ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರು ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಹಿರಿಯರು , ಪರಿಸರ ಸ್ನೇಹಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪರಿಸರದ ಮಹತ್ವ ಮತ್ತು ಹಸಿರು ಭೂಮಿಯ ರಕ್ಷಣೆಯ ಕುರಿತು ಮಾತನಾಡಿದ ಸಂಘಟಕರು, ನೆರೆದವರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ, ಪರಿಸರದ ಹಿತಕ್ಕಾಗಿ ಭಾಗವಹಿಸಿದ ಪ್ರತಿಯೊಬ್ಬರಿಗೆ ಹಲಸು, ಹೆಬ್ಬಲಸು, ತೇಗ, ರಾಮಪತ್ರೆ ಮತ್ತು ಇಜಿನ್ ಸೇರಿದಂತೆ ಹಸಿರು ಗಿಡಗಳನ್ನು ಉಚಿತವಾಗಿ ವಿತರಿಸುವ ಮೂಲಕ ತಮ್ಮ ಮನೆಯ ಪರಿಸರವನ್ನು ಹಸಿರು-ಸಿರಿಯಾಗಿ ಬೆಳೆಸುವ ಸಂಕಲ್ಪ ಮಾಡಲು ಪ್ರೋತ್ಸಾಹಿಸಲಾಯಿತು.

ಪರಿಸರ ಉಳಿಸಿ, ಭವಿಷ್ಯ ಸುರಕ್ಷಿತಗೊಳಿಸಿ, ಪರಿಸರವೇ ದೇವರು – ಅದನ್ನು ಪೂಜಿಸೋಣ, ಉಳಿಸೋಣ ಎಂಬ ಘೋಷಣೆಯೊಂದಿಗೆ ನಡೆದ ಈ ಕಾರ್ಯಕ್ರಮ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮತ್ತು ಭವಿಷ್ಯದ ಪೀಳಿಗೆಗಾಗಿ ಪರಿಸರವನ್ನು ಕಾಪಾಡಬೇಕಾದ ಹೊಣೆಗಾರಿಕೆಯ ಭಾವನೆ ಉಂಟುಮಾಡುವಲ್ಲಿ ಯಶಸ್ವಿಯಾಯಿತು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಸೋಮವತಿ ಅಮವಾಸ್ಯೆ ದಿನ

ಜೂನ್ 15, 2026 ರ ಸೋಮವತಿ ಅಮವಾಸ್ಯೆಯಂದು 4 ಶುಭ ಯೋಗಗಳು ಒಟ್ಟಿಗೆ ಬರಲಿವೆ. ಈ ದಿನದ ಮಹತ್ವ, ಆಚರಣೆ ಮತ್ತು ಪೂಜಾ ವಿಧಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಯೌವನದ ಕನ್ನಡಿ: ವಯಸ್ಸಾಗುವ ಮುನ್ನವೇ ಮುಖದಲ್ಲಿ ಸುಕ್ಕು ಮೂಡುತ್ತಿದೆಯೇ? ಈ ನೈಸರ್ಗಿಕ ಮನೆಮದ್ದು ಟ್ರೈ ಮಾಡಿ

ವಯಸ್ಸಾಗುವ ಮುನ್ನವೇ ಮುಖದಲ್ಲಿ ಮೂಡುವ ಸುಕ್ಕು ಹಾಗೂ ನೆರಿಗೆಗಳನ್ನು ತಡೆಯಲು ಅಕ್ಕಿಹಿಟ್ಟು ಮತ್ತು ಅಗಸೆಬೀಜದ ಈ ವಿಶೇಷ ಫೇಸ್ ಪ್ಯಾಕ್ ಬಳಸಿ. ನಿಮ್ಮ ಚರ್ಮದ ಯೌವನ ಕಾಪಾಡಿಕೊಳ್ಳಿ.

ವಿಶ್ವ ರಕ್ತದಾನಿಗಳ ದಿನ: ರಕ್ತದಾನದ ಮಹತ್ವ ಮತ್ತು ನಿಯಮಗಳು

ವಿಶ್ವ ರಕ್ತದಾನಿಗಳ ದಿನದ ಮಹತ್ವ, ರಕ್ತದಾನದ ಆರೋಗ್ಯ ಪ್ರಯೋಜನಗಳು ಹಾಗೂ ಯಾರೆಲ್ಲ ರಕ್ತದಾನ ಮಾಡಬಹುದು ಮತ್ತು ಮಾಡಬಾರದು ಎಂಬ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬಳ್ಳಾರಿ ಕೊಲೆ ಪ್ರಕರಣ: ಕಿರುಕುಳ ಆರೋಪಕ್ಕೆ ಯುವಕನ ಹತ್ಯೆ, 3 ಮಂದಿ ಅರೆಸ್ಟ್

ಬಳ್ಳಾರಿಯಲ್ಲಿ ಯುವಕನ ಹತ್ಯೆ ಪ್ರಕರಣದಲ್ಲಿ ಮಹಿಳೆ ಸೇರಿ 3 ಮಂದಿಯನ್ನು ಬಂಧಿಸಿದ ಪೊಲೀಸರು. ಕೊಲೆಯ ಹಿಂದಿನ ಆಘಾತಕಾರಿ ಕಾರಣ ಬಹಿರಂಗ, ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ