
ಉಡುಪಿ: ಉಡುಪಿ ಜಿಲ್ಲೆಯ 80 ಬಡಗಬೆಟ್ಟು ಗ್ರಾಮದ ಶ್ರೀ ರಾಮ ಭಜನಾ ಮಂದಿರದಲ್ಲಿ ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಶ್ರೀ ರಾಮನವಮಿ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಈ ಕುರಿತು ಭಜನಾ ಮಂದಿರದ ಸಮಿತಿಯು ಭಕ್ತಾದಿಗಳಿಗೆ ಆಮಂತ್ರಣ ನೀಡಿದ್ದು, ಮಾರ್ಚ್ 20 ರಿಂದ ಭಜನಾ ಕಾರ್ಯಕ್ರಮಗಳು ಚಾಲನೆ ಪಡೆದಿವೆ.
ಮಾರ್ಚ್ 20 ರ ಶುಕ್ರವಾರದಿಂದಲೇ ಭಜನೆ ಪ್ರಾರಂಭವಾಗಿದ್ದು, ಪ್ರತಿದಿನ ರಾತ್ರಿ 7.00 ರಿಂದ 8.00 ರವರೆಗೆ ಭಜನಾ ಸೇವೆ ಜರುಗಲಿದೆ. ಮಾರ್ಚ್ 26 ರ ಗುರುವಾರ ಶ್ರೀ ರಾಮನವಮಿಯ ಶುಭ ದಿನದಂದು ಸಾಯಂಕಾಲ 6.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಭಜನಾ ಮಂಗಲೋತ್ಸವವು ವೈಭವದಿಂದ ನಡೆಯಲಿದೆ. ಅದೇ ದಿನ ರಾತ್ರಿ 8.00 ಗಂಟೆಯಿಂದ 12.00 ಗಂಟೆಯವರೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಈ ಪವಿತ್ರ ಕಾರ್ಯಕ್ರಮದಲ್ಲಿ 80 ಬಡಗಬೆಟ್ಟು ಗ್ರಾಮಸ್ಥರು ಹಾಗೂ ಭಕ್ತಾಭಿಮಾನಿಗಳು ತನು-ಮನ-ಧನದ ಸಹಕಾರದೊಂದಿಗೆ ಪಾಲ್ಗೊಂಡು ಶ್ರೀ ರಾಮಚಂದ್ರ ದೇವರ ಕೃಪೆಗೆ ಪಾತ್ರರಾಗಬೇಕೆಂದು ಅಧ್ಯಕ್ಷರಾದ ಬಿ. ಅರುಣಾಚಲ ಹೆಗ್ಡೆ ಮೂಡುಮನೆ ,ಗೌರವಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.




































