spot_img

ದಿನ ವಿಶೇಷ – ಭಾರತದ ಮೊದಲ ಸಿನಿಮಾ

Date:

ದಿನ ವಿಶೇಷ – ಭಾರತದ ಮೊದಲ ಸಿನಿಮಾ

ಭಾರತ ಇತಿಹಾಸದಲ್ಲಿ 1912 ಮೇ 18ರಂದು ದಾದಾಸಾಹೇಬ್ ಟೂರ್ನಿಯವರಿಂದ ಮೊತ್ತ ಮೊದಲು ಈ ಪುಂಡಲೀಕ ಎನ್ನುವ ಚಲನಚಿತ್ರ ಮುಂಬೈಯಲ್ಲಿ ಪ್ರದರ್ಶನಗೊಂಡಿತು. ಇವತ್ತು ಒಂದು ಸಂದೇಶವನ್ನು ಚಲನಚಿತ್ರದ ಮೂಲಕವಾಗಿ ತಲುಪಿಸಿದರೆ ಇದರ ಸುಲಭದಲ್ಲಿ ಬೇರೆ ಯಾವ ಮಾಧ್ಯಮವು ಸಮಾಜಕ್ಕೆ ಇಷ್ಟು ಸುಲಭದಲ್ಲಿ ತಲುಪುವುದಿಲ್ಲ ಅಷ್ಟರಮಟ್ಟಿಗೆ ಚಲನಚಿತ್ರ ಸಾಮಾಜಿಕ ಜೀವನವನ್ನು ವ್ಯಾಪಿಸಿಕೊಂಡಿದೆ ಹಾಗೂ ಸಮಾಜವನ್ನು ಅಪ್ಪಿ ಕೊಂಡಿದೆ. ಲಂಡನ್ ನಲ್ಲಿ 1800ರ ಆಸುಪಾಸಿನಲ್ಲಿ ಚಲನಚಿತ್ರಗಳು ಪ್ರಾರಂಭವಾದವು.

ವಿದೇಶದಲ್ಲಿ ಶಿಕ್ಷಣವನ್ನು ಪಡೆದುಕೊಂಡು ಬಂದ ದಾದಾಸಾಹೇಬ್ ತೋರ್ನೆಯವರು ಶ್ರೀ ಪುಂಡಲೀಕ ಎನ್ನುವ 22 ನಿಮಿಷದ ಮೂಕಿ ಚಲನಚಿತ್ರವನ್ನು ಬಿಡುಗಡೆಗೊಳಿಸಿದರು. ಆದರೆ ಈ ಬಗ್ಗೆ ವಿವಾದವಿದೆ ಏಕೆಂದರೆ ಜಾನ್ಸನ್ ಎಂಬ ಕ್ಯಾಮರಾ ಮೆನ್ ಬ್ರಿಟಿಷ್ ವ್ಯಕ್ತಿ ಆದ್ದರಿಂದ ಇದನ್ನು ಭಾರತೀಯರು ಮಾಡಿದಲ್ಲ ಎನ್ನುವ ವಾದವಿದೆ ನಂತರದ ವರ್ಷದಲ್ಲಿ ದಾದಾಸಾಹೇಬ್ ಫಾಲ್ಕೆಯವರು ಸತ್ಯಹರಿಶ್ಚಂದ್ರ ಎನ್ನುವ ಸಿನಿಮಾವನ್ನು ತಾವಾಗಿಯೇ ತಯಾರು ಮಾಡಿದರು. ಈ ಸಿನಿಮಾ ಭಾರತದ ಮೊದಲ ಸಿನಿಮಾ ಎನ್ನುವ ಬಗ್ಗೆ ಹೆಚ್ಚಿನವರ ಅಭಿಪ್ರಾಯವಿದ್ದರೂ ಕೂಡ ಮೇ 18 1912ರಲ್ಲಿ ನಿರ್ಮಾಣಗೊಂಡ ಶ್ರೀ ಪುಂಡಲೀಕ ಎನ್ನುವ ಚಲನಚಿತ್ರ ಭಾರತದಲ್ಲಿ ನ ಮೊದಲ ಚಲನಚಿತ್ರ ಎಂದು ಕರೆದರೂ ಕೂಡ ತಪ್ಪಿಲ್ಲ ಎಂದು ಹಲವರ ವಾದವಿದೆ. ಮುಂಬೈಯ ಗ್ರಾಂಡ್ ರೋಡಿನಲ್ಲಿ ಈ ಸಿನಿಮಾದ ಮೊದಲ ಪ್ರದರ್ಶನ ನಡೆದಿತ್ತು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶಿರ್ವದ ಪಾಪನಾಶಿನಿ ನದಿಯಲ್ಲಿ ಅಕ್ರಮ ಮರಳು ದಂಧೆಗೆ ಬ್ರೇಕ್: ಹಿಟಾಚಿ, ಟಿಪ್ಪರ್ ವಶಕ್ಕೆ

ಪಾಪನಾಶಿನಿ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಮೇಲೆ ಶಿರ್ವ ಪೊಲೀಸರು ದಾಳಿ ನಡೆಸಿ, ಹಿಟಾಚಿ ಯಂತ್ರ ಮತ್ತು ಎರಡು ಟಿಪ್ಪರ್ ಮರಳನ್ನು ವಶಪಡಿಸಿಕೊಂಡಿದ್ದಾರೆ.

ತೇಜಸ್ವಿ ಯಾದವ್ ಪತ್ನಿಯನ್ನು ‘ಜೆರ್ಸಿ ಹಸು’ ಎಂದ ಮಾಜಿ ಶಾಸಕ: ಬಿಹಾರದಲ್ಲಿ ರಾಜಕೀಯ ವಿವಾದ

ಬಿಹಾರದಲ್ಲಿ ರಾಜಕೀಯ ವಾಕ್ಸಮರ ತಾರಕಕ್ಕೇರಿದ್ದು, ಮಾಜಿ ಶಾಸಕ ರಾಜ್ ಬಲ್ಲಭ್ ಯಾದವ್ ಅವರು ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರ ಪತ್ನಿ ರಾಜಶ್ರೀ ಯಾದವ್ ಅವರ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದಾರೆ.

ಯುವಕರಲ್ಲಿ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ

ಅಧಿಕ ಕೊಲೆಸ್ಟ್ರಾಲ್ ಸಾಮಾನ್ಯವಾಗಿ ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸುವುದಿಲ್ಲ, ಆದರೆ ಅದು ದೇಹದಲ್ಲಿ ಅಪಾಯಕಾರಿ ಮಟ್ಟವನ್ನು ತಲುಪಿದಾಗ ಕೆಲವು ಚಿಹ್ನೆಗಳು ಕಾಣಿಸಿಕೊಳ್ಳಬಹುದು.

ದಿನ ವಿಶೇಷ – ರಾಷ್ಟ್ರೀಯ ವನ್ಯಜೀವಿ ಶಹೀದ್ ದಿನ

ಭಾರತದ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವನರಕ್ಷಕ ಶಹೀದರ ಸ್ಮೃತಿಗೆ ಅರ್ಪಿತವಾದ ದಿನವೇ ರಾಷ್ಟ್ರೀಯ ವನ್ಯಜೀವಿ ಶಹೀದ್ ದಿನ (National Forest Martyrs Day).