spot_img

ತಡವಾಗಿ ಮಲಗುವವರು ಎಚ್ಚರವಾಗಿರಲಿ: ವಯಸ್ಸು ಹೆಚ್ಚಿದಂತೆ ಮಾನಸಿಕ ಸಾಮರ್ಥ್ಯ ಕುಸಿಯುವ ಸಾಧ್ಯತೆ

Date:

ಆರೋಗ್ಯಕರ ಜೀವನಶೈಲಿಗೆ ಮುಂಚಿತ ನಿದ್ರೆ ಹಾಗೂ ಮುಂಜಾವಿನ ಎಚ್ಚರ ಅವಶ್ಯಕ ಎಂದು ಹೊಸ ಅಧ್ಯಯನವೊಂದು ಪುನಃ ಜೋರಾಗಿ ಎಚ್ಚರಿಕೆ ನೀಡಿದೆ. ನಿತ್ಯ ತಡವಾಗಿ ಮಲಗುವವರು ವಯಸ್ಸು ಹೆಚ್ಚಾದಂತೆ ಮನಸ್ಸಿನ ಚುರುಕು ಕ್ಷೀಣಿಸುವ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

‘ದಿ ಜರ್ನಲ್ ಆಫ್ ಪ್ರಿವೆನ್ಷನ್ ಆಫ್ ಆಲ್ಸೈಮರ್ಸ್ ಡಿಸೀಸ್’ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ತಡರಾತ್ರಿ ಎಚ್ಚರವಾಗಿರುವ ಅಭ್ಯಾಸವು, ಮುಂದಿನ ವರ್ಷಗಳಲ್ಲಿ ಮಾನಸಿಕ ಸಾಮರ್ಥ್ಯದ ಕುಸಿತಕ್ಕೆ ಕಾರಣವಾಗಬಹುದು. ನೆದರ್ಲ್ಯಾಂಡ್ಸ್‌ನ ಗೊನಿಂಗೆನ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ಸಂಶೋಧಕಿ ಡಾ. ಅನ್ನಾ ವೆನ್ನರ್ ನೇತೃತ್ವದಲ್ಲಿ ಈ ಅಧ್ಯಯನ ನಡೆಸಲಾಗಿದ್ದು, 10 ವರ್ಷಗಳ ಕಾಲ 23,800 ಜನರ ಮೇಲೆ ವಿಶ್ಲೇಷಣೆ ನಡೆಯಿತು.

ಅಧ್ಯಯನವು “ಕ್ರೋನೋಟೈಪ್” ಎಂಬ ಪರಿಕಲ್ಪನೆಯನ್ನು ಆಧಾರವಾಗಿ ತೆಗೆದುಕೊಂಡಿದ್ದು, ಇದು ವ್ಯಕ್ತಿಯ ನಿದ್ರೆ ಚಕ್ರ ಹಾಗೂ ದಿನದ ಯಾವ ಸಮಯದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ ಎಂಬುದನ್ನು ವಿವರಿಸುತ್ತದೆ. ತಡ ರಾತ್ರಿ ಎಚ್ಚರವಾಗಿರುವವರು ಸಾಮಾನ್ಯವಾಗಿ ದಿನದ ಮೊದಲ ಭಾಗದಲ್ಲಿ ಉಜ್ವಲ ಶಕ್ತಿ ಹೊಂದಿರದೆ, ದೀರ್ಘಾವಧಿಯಲ್ಲಿ ಮೆದುಳಿನ ಚುರುಕು ಹಾಗೂ ನೆನಪು ಶಕ್ತಿ ಕುಗ್ಗುವ ಅಪಾಯಕ್ಕೆ ಒಳಗಾಗುತ್ತಾರೆ.

ಮೊಬೈಲ್‌ ನೋಡಿ, ಸಿನಿಮಾ ನೋಡಿ, ಪುಸ್ತಕ ಓದಿ ಅಥವಾ ಸಂಭಾಷಣೆ ನಡೆಸಿ ತಡರಾತ್ರಿ ತನಕ ಎಚ್ಚರವಾಗಿರುವುದು ಹಲವರಿಗೆ ಅಭ್ಯಾಸವಾಗಿರಬಹುದು. ಆದರೆ ಈ ಅಭ್ಯಾಸವು ಆರೋಗ್ಯದ ದೃಷ್ಟಿಯಿಂದ ಗಮನಾರ್ಹವಾದ ನಷ್ಟವನ್ನು ತರಬಹುದು ಎಂದು ಅಧ್ಯಯನದ ತೀವ್ರ ಎಚ್ಚರಿಕೆ ನೀಡಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ11 ಮಂದಿ ಮೃತ್ಯು : ಸಿಎಂ ಸಿದ್ದರಾಮಯ್ಯರವರಿಂದ ₹10 ಲಕ್ಷ ಪರಿಹಾರ ಘೋಷಣೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದು, ಸಿದ್ದರಾಮಯ್ಯಮೃತಪಟ್ಟ 11 ಮಂದಿ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ.

“ಇನ್ನು ಕೆಲದಿನ ಸಾಮಾಜಿಕ ಜಾಲತಾಣದಿಂದ ದೂರವಿರುತ್ತೇನೆ” : ಅಭಿಮಾನಿಗಳಿಗೆ ಶಾಕ್ ಕೊಟ್ಟ ಶೋಭಾ ಶೆಟ್ಟಿ

ಬಿಗ್ ಬಾಸ್ ಖ್ಯಾತಿಯ ನಟಿ ಹಾಗೂ ಕನ್ನಡ-ತೆಲುಗು ಚಿತ್ರರಂಗದಲ್ಲಿ ಚಿರಪರಿಚಿತರಾದ ಶೋಭಾ ಶೆಟ್ಟಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ “ನಾನು ಕೆಲವು ದಿನಗಳವರೆಗೆ ಸಾಮಾಜಿಕ ಜಾಲತಾಣದಿಂದ ದೂರವಿರುತ್ತೇನೆ” ಎಂಬ ಪೋಸ್ಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಆರ್‌ಸಿಬಿ ವಿಜಯೋತ್ಸವ ದುರಂತ: ಕಾಲ್ತುಳಿತದಲ್ಲಿ 11 ಅಭಿಮಾನಿಗಳ ಸಾವು – ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿಯಿಂದ ಸಂತಾಪ

ಆರ್‌ಸಿಬಿ ವಿಜಯೋತ್ಸವ ದುರಂತದ ಕುರಿತು ಪ್ರತಿಕ್ರಿಯಿಸಿರುವ ಆರ್‌ಸಿಬಿ ತಾರೆ ವಿರಾಟ್ ಕೊಹ್ಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಶೋಕದ ಭಾವನೆ ಹಂಚಿಕೊಂಡಿದ್ದು, “ಈ ದುಃಖದ ಸುದ್ದಿ ಕೇಳಿ ನಾನು ಶಬ್ದವಿಲ್ಲದವನಾಗಿದ್ದೇನೆ. ಹೃದಯ ಒಡೆದುಹೋಗಿದೆ” ಎಂದು ಬರೆದುಕೊಂಡಿದ್ದಾರೆ.

ಅಕ್ರಮ ಕ್ರಿಕೆಟ್ ಬೆಟ್ಟಿಂಗ್: ಶಿರಿಯಾರ ಮತ್ತು ಹಾರ್ದಳ್ಳಿ ನಿವಾಸಿಗಳಿಬ್ಬರ ಬಂಧನ

ಕ್ರಿಕೆಟ್ ಬೆಟ್ಟಿಂಗ್ ಅಕ್ರಮಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕೋಟ ಪೊಲೀಸರು ಜೂನ್ 3ರಂದು ರಾತ್ರಿ 10 ಗಂಟೆಗೆ ಸಾಬರಕಟ್ಟೆ ರಿಕ್ಷಾ ನಿಲ್ದಾಣದ ಬಳಿ ಬಂಧಿಸಿದ್ದಾರೆ.