spot_img

ತಡವಾಗಿ ಮಲಗುವವರು ಎಚ್ಚರವಾಗಿರಲಿ: ವಯಸ್ಸು ಹೆಚ್ಚಿದಂತೆ ಮಾನಸಿಕ ಸಾಮರ್ಥ್ಯ ಕುಸಿಯುವ ಸಾಧ್ಯತೆ

Date:

spot_img

ಆರೋಗ್ಯಕರ ಜೀವನಶೈಲಿಗೆ ಮುಂಚಿತ ನಿದ್ರೆ ಹಾಗೂ ಮುಂಜಾವಿನ ಎಚ್ಚರ ಅವಶ್ಯಕ ಎಂದು ಹೊಸ ಅಧ್ಯಯನವೊಂದು ಪುನಃ ಜೋರಾಗಿ ಎಚ್ಚರಿಕೆ ನೀಡಿದೆ. ನಿತ್ಯ ತಡವಾಗಿ ಮಲಗುವವರು ವಯಸ್ಸು ಹೆಚ್ಚಾದಂತೆ ಮನಸ್ಸಿನ ಚುರುಕು ಕ್ಷೀಣಿಸುವ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

‘ದಿ ಜರ್ನಲ್ ಆಫ್ ಪ್ರಿವೆನ್ಷನ್ ಆಫ್ ಆಲ್ಸೈಮರ್ಸ್ ಡಿಸೀಸ್’ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ತಡರಾತ್ರಿ ಎಚ್ಚರವಾಗಿರುವ ಅಭ್ಯಾಸವು, ಮುಂದಿನ ವರ್ಷಗಳಲ್ಲಿ ಮಾನಸಿಕ ಸಾಮರ್ಥ್ಯದ ಕುಸಿತಕ್ಕೆ ಕಾರಣವಾಗಬಹುದು. ನೆದರ್ಲ್ಯಾಂಡ್ಸ್‌ನ ಗೊನಿಂಗೆನ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ಸಂಶೋಧಕಿ ಡಾ. ಅನ್ನಾ ವೆನ್ನರ್ ನೇತೃತ್ವದಲ್ಲಿ ಈ ಅಧ್ಯಯನ ನಡೆಸಲಾಗಿದ್ದು, 10 ವರ್ಷಗಳ ಕಾಲ 23,800 ಜನರ ಮೇಲೆ ವಿಶ್ಲೇಷಣೆ ನಡೆಯಿತು.

ಅಧ್ಯಯನವು “ಕ್ರೋನೋಟೈಪ್” ಎಂಬ ಪರಿಕಲ್ಪನೆಯನ್ನು ಆಧಾರವಾಗಿ ತೆಗೆದುಕೊಂಡಿದ್ದು, ಇದು ವ್ಯಕ್ತಿಯ ನಿದ್ರೆ ಚಕ್ರ ಹಾಗೂ ದಿನದ ಯಾವ ಸಮಯದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ ಎಂಬುದನ್ನು ವಿವರಿಸುತ್ತದೆ. ತಡ ರಾತ್ರಿ ಎಚ್ಚರವಾಗಿರುವವರು ಸಾಮಾನ್ಯವಾಗಿ ದಿನದ ಮೊದಲ ಭಾಗದಲ್ಲಿ ಉಜ್ವಲ ಶಕ್ತಿ ಹೊಂದಿರದೆ, ದೀರ್ಘಾವಧಿಯಲ್ಲಿ ಮೆದುಳಿನ ಚುರುಕು ಹಾಗೂ ನೆನಪು ಶಕ್ತಿ ಕುಗ್ಗುವ ಅಪಾಯಕ್ಕೆ ಒಳಗಾಗುತ್ತಾರೆ.

ಮೊಬೈಲ್‌ ನೋಡಿ, ಸಿನಿಮಾ ನೋಡಿ, ಪುಸ್ತಕ ಓದಿ ಅಥವಾ ಸಂಭಾಷಣೆ ನಡೆಸಿ ತಡರಾತ್ರಿ ತನಕ ಎಚ್ಚರವಾಗಿರುವುದು ಹಲವರಿಗೆ ಅಭ್ಯಾಸವಾಗಿರಬಹುದು. ಆದರೆ ಈ ಅಭ್ಯಾಸವು ಆರೋಗ್ಯದ ದೃಷ್ಟಿಯಿಂದ ಗಮನಾರ್ಹವಾದ ನಷ್ಟವನ್ನು ತರಬಹುದು ಎಂದು ಅಧ್ಯಯನದ ತೀವ್ರ ಎಚ್ಚರಿಕೆ ನೀಡಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

40 ದಾಟಿದವರ ಸಂಧು ನೋವಿಗೆ ಆಯುರ್ವೇದದಲ್ಲಿದೆ ಪರಿಣಾಮಕಾರಿ ಪರಿಹಾರ!

ವಯಸ್ಸು 40 ದಾಟಿದಂತೆ ಕಾಣಿಸಿಕೊಳ್ಳುವ ಸಂಧು ನೋವು ಅದೆಷ್ಟೋ ಜನರನ್ನು ಕಾಡುತ್ತದೆ.

ವಾಟ್ಸಾಪ್‌ನಿಂದ ಹೊಸ AI ವೈಶಿಷ್ಟ್ಯ ‘ಕ್ವಿಕ್ ರಿಕ್ಯಾಪ್’: ಇನ್ನು ಮಿಸ್ಡ್ ಮೆಸೇಜ್ ಚಿಂತೆ ಇಲ್ಲ!

ಮೆಟಾ ಕಂಪನಿಯು ಅಭಿವೃದ್ಧಿಪಡಿಸಿರುವ ವಾಟ್ಸಾಪ್ ಕ್ವಿಕ್ ರಿಕ್ಯಾಪ್ AI (WhatsApp Quick Recap AI) ಎಂಬ ನೂತನ ಕೃತಕ ಬುದ್ಧಿಮತ್ತೆ ಆಧಾರಿತ ವೈಶಿಷ್ಟ್ಯವು, ಬಳಕೆದಾರರು ಗ್ರೂಪ್‌ಗಳು ಅಥವಾ ವೈಯಕ್ತಿಕ ಚಾಟ್‌ಗಳಲ್ಲಿ ಮಿಸ್ ಮಾಡಿಕೊಂಡ ಸಂದೇಶಗಳನ್ನು ಸರಳ ಮತ್ತು ಅರ್ಥಪೂರ್ಣವಾಗಿ ಸಂಕ್ಷಿಪ್ತಗೊಳಿಸಲು ನೆರವಾಗಲಿದೆ.

ಜ್ಞಾನಸುಧಾ : ಮೌಲ್ಯಸುಧಾ-38ರಲ್ಲಿ ‘ಕಾರ್ಗಿಲ್ ವಿಜಯ ದಿವಸ’

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ಮೌಲ್ಯಸುಧಾ ಮಾಲಿಕೆ-38ನ್ನು ಕಾರ್ಗಿಲ್ ವಿಜಯದಿವಸದ ಶುಭಸಂದರ್ಭದಲ್ಲಿ ಆಯೋಜಿಸಲಾಗಿದೆ.

ಪುತ್ತಿಗೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರದ ಪ್ರಯುಕ್ತ ಇಂದಿನಿಂದ ಆರಂಭಗೊಂಡ ಅಷ್ಟಮಂಗಲ ಪ್ರಶ್ನಾ ಚಿಂತನೆ

ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಮಾಡಬೇಕೆಂದು ಶ್ರೀ ಪುತ್ತಿಗೆ ಮಠ , ಅರ್ಚಕರು ಮತ್ತು ಊರಿನ ಹತ್ತು ಸಮಸ್ತರ ಸಹಭಾಗಿತ್ವದಲ್ಲಿ ಇಂದು ದಿನಾಂಕ 25.07.2025ರಂದು ಶ್ರೀ ಕ್ಷೇತ್ರದಲ್ಲಿ ಅಷ್ಟ ಮಂಗಳ ಪ್ರಶ್ನೆಯು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರಂಭಗೊಂಡಿತು.