spot_img

ಮಕ್ಕಳ ಆರೋಗ್ಯದಲ್ಲಿ ದೊಡ್ಡಪತ್ರೆ ಎಲೆಯ ಮಹತ್ವ

Date:

ಮಳೆಗಾಲದಲ್ಲಿ ವಾತಾವರಣದ ತೀವ್ರ ಬದಲಾವಣೆಗಳಿಂದಾಗಿ ಮಕ್ಕಳು ಜ್ವರ, ಶೀತ, ಕೆಮ್ಮು, ಕಫ ಹಾಗೂ ಇತರ ಸಣ್ಣ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗುವುದು ಸಾಮಾನ್ಯ. ಈ ಸಮಯದಲ್ಲಿ ಮನೆಮದ್ದುಗಳ ಮೂಲಕ ಮಕ್ಕಳ ಆರೋಗ್ಯ ಕಾಪಾಡುವುದು ಕೆಲವೊಮ್ಮೆ ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮನೆ ಹಿತ್ತಲಲ್ಲಿ ಬೆಳೆಯುವ ದೊಡ್ಡಪತ್ರೆ ಎಲೆಗಳನ್ನು ರಾಮಬಾಣ ಮನೆಮದ್ದಾಗಿ ಪರಿಗಣಿಸಬಹುದು.

ದೊಡ್ಡಪತ್ರೆ ಎಲೆ – ಮನೆ ವೈದ್ಯನಂತೆ ಉಪಯೋಗ:
ರಾಜ್ಯಾದ್ಯಂತ ವಿಭಿನ್ನ ಹೆಸರಿನಿಂದ ಪ್ರಸಿದ್ಧವಾಗಿರುವ ದೊಡ್ಡಪತ್ರೆ ಎಲೆ (ಸಾಂಬ್ರಾಣಿ ಎಲೆ, ಕರ್ಪೂರವಳ್ಳಿ, ಚಟ್ನಿ ಸೊಪ್ಪು) ಎಲ್ಲಾ ವಾತಾವರಣದಲ್ಲಿ ಬೆಳೆದುಬರುವ ಔಷಧೀಯ ಸಸ್ಯವಾಗಿದೆ. ಇದರ ಎಲೆ ದಪ್ಪವಾಗಿದ್ದು, ನೀರಿನ ಅಂಶದಿಂದ ಕೂಡಿರುತ್ತದೆ. ಮನೆಮದ್ದಾಗಿ ಇದರ ಬಳಕೆಯಿಂದ ಮಕ್ಕಳಿಗೆ ಶೀಘ್ರ ಪರಿಹಾರ ದೊರೆಯಬಹುದು.

ವಿವಿಧ ಆರೋಗ್ಯ ಸಮಸ್ಯೆಗಳಿಗೆ ದೊಡ್ಡಪತ್ರೆ ಎಲೆಯ ಉಪಯೋಗ:

🔸 ಜ್ವರ ನಿವಾರಣೆ:
ದೊಡ್ಡಪತ್ರೆ ಎಲೆಗಳನ್ನು ಸ್ವಲ್ಪ ತಾಪದ ಹೊತ್ತಿನಲ್ಲಿ (ಬೆಕ್ಕಿ) ಜ್ವರಬಂದ ಮಕ್ಕಳ ತಲೆಯ ಮೇಲೆ ಇಟ್ಟರೆ ತಾತ್ಕಾಲಿಕ ಜ್ವರ ಇಳಿಯಬಹುದು.

🔸 ಕೆಮ್ಮು, ಕಫ, ಶೀತ ನಿವಾರಣೆ:
4-5 ಎಲೆಗಳನ್ನು ಕೆಂಡದಲ್ಲಿ ಬಾಡಿಸಿ, ರಸ ಹಿಂಡಿ, ಜೇನು ಸೇರಿಸಿ ಮಕ್ಕಳಿಗೆ ಕುಡಿಸಿದರೆ ಶೀತ-ಕೆಮ್ಮು-ಕಫ ಶೀಘ್ರವಾಗಿ ಗುಣಮುಖವಾಗುತ್ತವೆ.

🔸 ಬೇಧಿ ಹಾಗೂ ಮಲಬದ್ಧತೆ:
ಎಲೆ ರಸಕ್ಕೆ ಸ್ವಲ್ಪ ಜೇನು ಸೇರಿಸಿ ಮಕ್ಕಳಿಗೆ ನೀಡಿದರೆ ಬೇಧಿ ಸಮಸ್ಯೆ ಕಡಿಮೆಯಾಗುವುದಲ್ಲದೇ, ಶೀತದಿಂದ ಉಂಟಾಗುವ ಮಲಬದ್ಧತೆಯೂ ನಿವಾರಣೆಯಾಗುತ್ತದೆ.

🔸 ಕಣ್ಣಿನ ಉರಿಗೆ:
ದೊಡ್ಡಪತ್ರೆ ಎಲೆಯ ರಸಕ್ಕೆ ಸಮಪ್ರಮಾಣದ ಎಳ್ಳೆಣ್ಣೆ ಸೇರಿಸಿ ತಲೆಗೆ ಹಚ್ಚುವುದು ಕಣ್ಣಿನ ಉರಿಗೆ ಪರಿಣಾಮಕಾರಿ ಮದ್ದು.

🔸 ಚರ್ಮ ಸಮಸ್ಯೆ:
ತುರಿಕೆ, ಕಜ್ಜಿ ಅಥವಾ ಬೆವರುಸಾಲೆ ಕಾಣಿಸಿಕೊಂಡ ಭಾಗಕ್ಕೆ ದೊಡ್ಡಪತ್ರೆ ಎಲೆಯ ರಸ ಹಚ್ಚಿದರೆ ಶಮನವಾಗುತ್ತದೆ.

ಗಮನಿಸಿ:
ಮನೆಮದ್ದಿಗಳಿಂದ ಶೀಘ್ರ ಪರಿಹಾರ ಸಿಕ್ಕರೂ, ರೋಗ ಲಕ್ಷಣಗಳು ಉಲ್ಬಣಗೊಳ್ಳುವುದಾದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಖಳನಟ ಮುಕುಲ್ ದೇವ್ ನಿಧನ – ಉಪೇಂದ್ರ ಅಭಿನಯದ ‘ರಜನಿ’ ಚಿತ್ರದಿಂದ ಕನ್ನಡಿಗರ ಮನ ಗೆದ್ದ ನಟ ವಿಧಿವಶ

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಖ್ಯಾತ ನಟ ಮುಕುಲ್ ದೇವ್ ಶನಿವಾರ ನಿಧನರಾಗಿದ್ದಾರೆ.

ಜಲ, ವಾಯು ಸಂಕಟ, ಮಹಾಮಾರಿ, ರಾಜಕೀಯ ಬದಲಾವಣೆ – ಕೋಡಿಮಠ ಸ್ವಾಮೀಜಿಯಿಂದ ಭವಿಷ್ಯವಾಣಿ

ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಬೆಳಗಾವಿಯಲ್ಲಿ ಸ್ಫೋಟಕ ಭವಿಷ್ಯ ನುಡಿದ್ದು, ಮುಂಬರುವ ದಿನಗಳಲ್ಲಿ ಜಗತ್ತಿಗೆ ಗಂಭೀರ ಸವಾಲುಗಳು ಎದುರಾಗಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಉಡುಪಿ ಜಿಲ್ಲೆಗೆ ಮೊದಲ ವಿದ್ಯುತ್ ಚಿತಾಗಾರ: ಕೋಟೇಶ್ವರ ಹಿಂದೂ ರುದ್ರಭೂಮಿಯಲ್ಲಿ ನೂತನ ಸೌಲಭ್ಯ ಉದ್ಘಾಟನೆ

ಉಡುಪಿ ಜಿಲ್ಲೆಯ ಮೊದಲ ವಿದ್ಯುತ್ ಚಿತಾಗಾರವು ಕುಂದಾಪುರ ತಾಲೂಕಿನ ಕೋಟೇಶ್ವರದ ಹಿಂದೂ ರುದ್ರಭೂಮಿಯಲ್ಲಿ ನಿರ್ಮಾಣಗೊಂಡಿದ್ದು, ಶನಿವಾರ ಅದ್ದೂರಿಯಾಗಿ ಲೋಕಾರ್ಪಣೆಗೊಂಡಿತು

ಜೆಇಇ ಮೈನ್ (ಬಿ.ಆರ್ಕ್/ಬಿ.ಪ್ಲಾನಿಂಗ್ ) ಅಂತಿಮ ಫಲಿತಾಂಶ

ಜೆ.ಇ.ಇ ಮೈನ್, ಬಿ.ಆರ್ಕ್‌ನ ಅಂತಿಮ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್, 13 ವಿದ್ಯಾರ್ಥಿಗಳಿಗೆ 98ಕ್ಕಿಂತ ಅಧಿಕ ಪರ್ಸಂಟೈಲ್, 17 ವಿದ್ಯಾರ್ಥಿಗಳಿಗೆ 97ಕ್ಕಿಂತ ಅಧಿಕ ಪರ್ಸಂಟೈಲ್, 19 ವಿದ್ಯಾರ್ಥಿಗಳಿಗೆ 96ಕ್ಕಿಂತ ಅಧಿಕ ಪರ್ಸಂಟೈಲ್ ಹಾಗೂ 24 ವಿದ್ಯಾರ್ಥಿಗಳು 95ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುತ್ತಾರೆ.