spot_img

ಮಕ್ಕಳ ಆರೋಗ್ಯದಲ್ಲಿ ದೊಡ್ಡಪತ್ರೆ ಎಲೆಯ ಮಹತ್ವ

Date:

spot_img

ಮಳೆಗಾಲದಲ್ಲಿ ವಾತಾವರಣದ ತೀವ್ರ ಬದಲಾವಣೆಗಳಿಂದಾಗಿ ಮಕ್ಕಳು ಜ್ವರ, ಶೀತ, ಕೆಮ್ಮು, ಕಫ ಹಾಗೂ ಇತರ ಸಣ್ಣ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗುವುದು ಸಾಮಾನ್ಯ. ಈ ಸಮಯದಲ್ಲಿ ಮನೆಮದ್ದುಗಳ ಮೂಲಕ ಮಕ್ಕಳ ಆರೋಗ್ಯ ಕಾಪಾಡುವುದು ಕೆಲವೊಮ್ಮೆ ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮನೆ ಹಿತ್ತಲಲ್ಲಿ ಬೆಳೆಯುವ ದೊಡ್ಡಪತ್ರೆ ಎಲೆಗಳನ್ನು ರಾಮಬಾಣ ಮನೆಮದ್ದಾಗಿ ಪರಿಗಣಿಸಬಹುದು.

ದೊಡ್ಡಪತ್ರೆ ಎಲೆ – ಮನೆ ವೈದ್ಯನಂತೆ ಉಪಯೋಗ:
ರಾಜ್ಯಾದ್ಯಂತ ವಿಭಿನ್ನ ಹೆಸರಿನಿಂದ ಪ್ರಸಿದ್ಧವಾಗಿರುವ ದೊಡ್ಡಪತ್ರೆ ಎಲೆ (ಸಾಂಬ್ರಾಣಿ ಎಲೆ, ಕರ್ಪೂರವಳ್ಳಿ, ಚಟ್ನಿ ಸೊಪ್ಪು) ಎಲ್ಲಾ ವಾತಾವರಣದಲ್ಲಿ ಬೆಳೆದುಬರುವ ಔಷಧೀಯ ಸಸ್ಯವಾಗಿದೆ. ಇದರ ಎಲೆ ದಪ್ಪವಾಗಿದ್ದು, ನೀರಿನ ಅಂಶದಿಂದ ಕೂಡಿರುತ್ತದೆ. ಮನೆಮದ್ದಾಗಿ ಇದರ ಬಳಕೆಯಿಂದ ಮಕ್ಕಳಿಗೆ ಶೀಘ್ರ ಪರಿಹಾರ ದೊರೆಯಬಹುದು.

ವಿವಿಧ ಆರೋಗ್ಯ ಸಮಸ್ಯೆಗಳಿಗೆ ದೊಡ್ಡಪತ್ರೆ ಎಲೆಯ ಉಪಯೋಗ:

🔸 ಜ್ವರ ನಿವಾರಣೆ:
ದೊಡ್ಡಪತ್ರೆ ಎಲೆಗಳನ್ನು ಸ್ವಲ್ಪ ತಾಪದ ಹೊತ್ತಿನಲ್ಲಿ (ಬೆಕ್ಕಿ) ಜ್ವರಬಂದ ಮಕ್ಕಳ ತಲೆಯ ಮೇಲೆ ಇಟ್ಟರೆ ತಾತ್ಕಾಲಿಕ ಜ್ವರ ಇಳಿಯಬಹುದು.

🔸 ಕೆಮ್ಮು, ಕಫ, ಶೀತ ನಿವಾರಣೆ:
4-5 ಎಲೆಗಳನ್ನು ಕೆಂಡದಲ್ಲಿ ಬಾಡಿಸಿ, ರಸ ಹಿಂಡಿ, ಜೇನು ಸೇರಿಸಿ ಮಕ್ಕಳಿಗೆ ಕುಡಿಸಿದರೆ ಶೀತ-ಕೆಮ್ಮು-ಕಫ ಶೀಘ್ರವಾಗಿ ಗುಣಮುಖವಾಗುತ್ತವೆ.

🔸 ಬೇಧಿ ಹಾಗೂ ಮಲಬದ್ಧತೆ:
ಎಲೆ ರಸಕ್ಕೆ ಸ್ವಲ್ಪ ಜೇನು ಸೇರಿಸಿ ಮಕ್ಕಳಿಗೆ ನೀಡಿದರೆ ಬೇಧಿ ಸಮಸ್ಯೆ ಕಡಿಮೆಯಾಗುವುದಲ್ಲದೇ, ಶೀತದಿಂದ ಉಂಟಾಗುವ ಮಲಬದ್ಧತೆಯೂ ನಿವಾರಣೆಯಾಗುತ್ತದೆ.

🔸 ಕಣ್ಣಿನ ಉರಿಗೆ:
ದೊಡ್ಡಪತ್ರೆ ಎಲೆಯ ರಸಕ್ಕೆ ಸಮಪ್ರಮಾಣದ ಎಳ್ಳೆಣ್ಣೆ ಸೇರಿಸಿ ತಲೆಗೆ ಹಚ್ಚುವುದು ಕಣ್ಣಿನ ಉರಿಗೆ ಪರಿಣಾಮಕಾರಿ ಮದ್ದು.

🔸 ಚರ್ಮ ಸಮಸ್ಯೆ:
ತುರಿಕೆ, ಕಜ್ಜಿ ಅಥವಾ ಬೆವರುಸಾಲೆ ಕಾಣಿಸಿಕೊಂಡ ಭಾಗಕ್ಕೆ ದೊಡ್ಡಪತ್ರೆ ಎಲೆಯ ರಸ ಹಚ್ಚಿದರೆ ಶಮನವಾಗುತ್ತದೆ.

ಗಮನಿಸಿ:
ಮನೆಮದ್ದಿಗಳಿಂದ ಶೀಘ್ರ ಪರಿಹಾರ ಸಿಕ್ಕರೂ, ರೋಗ ಲಕ್ಷಣಗಳು ಉಲ್ಬಣಗೊಳ್ಳುವುದಾದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇನ್ನೋನೆಕ್ಸ್ಟ್ ಏರಿಯನ್ ಭಾರತ್ ಅಸ್ಟ್ರಾನೋಮಿ ಎಕ್ಸ್‌ಪೋ 1.0ಬಾಹ್ಯಾಕಾಶದ ಕೌತುಕ ಕಂಡು ಬೆರಗಾದ ವಿದ್ಯಾರ್ಥಿಗಳು

ಇನ್ನೋನೆಕ್ಸ್ಟ್ ಮೈಂಡ್ ಪ್ರೈವೇಟ್ ಲಿಮಿಟೆಡ್ (ಏರಿಯನ್ ಭಾರತ್) ಆಶ್ರಯದಲ್ಲಿ ಗುರುವಾರ ನಡೆದ ಆಸ್ಟ್ರಾನೊಮಿ ಎಕ್ಸ್‌ಪೋ 1.0ರ ಆವೃತ್ತಿ ನಗರದ ಮಂತ್ರಿ ಮಾಲ್‌ನ ಐನಾಕ್ಸ್‌ ಚಿತ್ರಮಂದಿರಲ್ಲಿ ಗುರುವಾರ ಉದ್ಘಾಟನೆಗೊಂಡಿತು.

ರೋಬೋಟ್ ‘ಶುವಾಂಗ್ ಶುವಾಂಗ್’ ಪದವಿ ಪಡೆದ ವಿಚಿತ್ರ ಘಟನೆ: ಚೀನಾದಲ್ಲಿ ತಾಂತ್ರಿಕ ಕ್ರಾಂತಿ!

ಚೀನಾದ ಫುಜಿಯನ್ ಪ್ರಾಂತ್ಯದ ಶುವಾನ್ಶಿ ಹೈಸ್ಕೂಲ್‌ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭವೊಂದು ವಿಶಿಷ್ಟ ಘಟನೆಗೆ ಸಾಕ್ಷಿಯಾಗಿದೆ. "ಶುವಾಂಗ್ ಶುವಾಂಗ್" ಹೆಸರಿನ ಮಾನವಾಕಾರದ ರೋಬೋಟ್ ಒಂದು ಸಮಾರಂಭದಲ್ಲಿ ಭಾಗವಹಿಸಿ, ವೇದಿಕೆಗೆ ನಡೆದು, ಶಿಕ್ಷಕರಿಂದ ಕೈಚಲಾವಣೆ ಮೂಲಕ ಪ್ರಮಾಣಪತ್ರ ಸ್ವೀಕರಿಸಿತು.

ಹಲಸಿನ ಹಣ್ಣು ತಿಂದು ಬ್ರೀಥಲೈಸರ್‌ನಲ್ಲಿ ಫೇಲ್: ಕೇರಳದಲ್ಲಿ ಅಚ್ಚರಿಯ ಘಟನೆ!

ಮದ್ಯಪಾನ ಮಾಡದಿದ್ದರೂ, ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಮೂವರು ಬಸ್ ಚಾಲಕರು ಬ್ರೀಥಲೈಸರ್ ಪರೀಕ್ಷೆಯಲ್ಲಿ ವಿಫಲರಾಗಿ, ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿರುವ ವಿಚಿತ್ರ ಘಟನೆ ವರದಿಯಾಗಿದೆ.

ದಿನ ವಿಶೇಷ – ವಿಶ್ವ ಐವಿಎಫ್ ದಿನ

ಈ ದಿನವು ಸಂತಾನೋತ್ಪತ್ತಿ ವಿಜ್ಞಾನದಲ್ಲಿನ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ ಮತ್ತು ಬಂಜೆತನದಿಂದ ಬಳಲುತ್ತಿರುವ ಅಸಂಖ್ಯಾತ ದಂಪತಿಗಳಿಗೆ ಆಶಯದ ದಾರಿಯನ್ನು ತೆರೆದ ಐವಿಎಫ್ ತಂತ್ರಜ್ಞಾನದ ಪ್ರಗತಿಯನ್ನು ಸ್ಮರಿಸುತ್ತದೆ