


ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ)ಕರ್ನಾಟಕ ಇದರ 81ನೇ ಸೇವಾ ಯೋಜನೆ ಒಂದಿಷ್ಟು ಸಮಾಜಕ್ಕಾಗಿ
ಕರಕರಿ ಫ್ರೆಂಡ್ಸ್ ಸೇವಾ ಬಳಗವು 80 ಯೋಜನೆಗಳನ್ನು ಯಶಸ್ವಿ ಯಾಗಿ ನೀಡಿದ್ದು ಈ ಯೋಜನೆಯಲ್ಲಿ ಈಗಾಗಲೇ 8 ಲಕ್ಷ ವೆಚ್ಚದಲ್ಲಿ ಕಣಂಜಾರು ಮಡಿಬೆಟ್ಟುವಿನಲ್ಲಿ ಮನೆ ನಿರ್ಮಾಣ ಮಾಡಿ ಆಸರೆ ಮನೆ ಹಸ್ತಾಂತರ ಮಾಡಲಾಗಿದ್ದು ಅದರ ಜೊತೆಗೆ ಊರಿಗೆ ತುರ್ತು ಪರಿಸ್ಥಿತಿ ಗೆ ಪ್ರಯೋಜನ ವಾಗುವಂತೆ ಅತೀ ಅಮೂಲ್ಯ ಯೋಜನೆ ಯಾದ ಆಂಬುಲೆನ್ಸ್ ಸೇವೆ ಒದಗಿಸುವಿಕೆ, ಅದರ ಜೊತೆ ಶಾಲಾ ಕಾಲೇಜು ಗಳಿಗೆ ಮೂಲಭೂತ ಸೌಕರ್ಯಗಳ ಒದಗಿಸುವಿಕೆ, ಕ್ರೀಡಾ ಸಾಧನೆ ಗಳಿಗೆ ಸಹಕಾರ, ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಲು ಶಾಲಾ ಮಕ್ಕಳಿಗೆ ಬ್ಯಾಗ್, ಕೊಡೆ, ಪುಸ್ತಕ ವಿತರಣೆ, ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಹಾಯಧನ, ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯಧನ ಹೀಗೆ ಉತ್ತಮ ಸಮಾಜ ಮುಖಿ ಕೆಲಸವನ್ನು ಮಾಡುತ್ತಾ ಬಂದಿರುತ್ತದೆ. 1 ವರ್ಷದಲ್ಲಿ ಆಂಬುಲೆನ್ಸ್ 190 ಸೇವೆಯನ್ನು ನೀಡಿದ್ದು ಅದರಲ್ಲಿ 78 ಸೇವೆ ಬಡವರಿಗೆ ಉಚಿತವಾಗಿ ನೀಡಿರುತ್ತದೆ.ಈಗಾಗಲೇ 38 ಲಕ್ಷ ರೂಪಾಯಿ ಸೇವಾ ಯೋಜನೆ ನೀಡಿದ ಸಾಧನೆ ಈ ಸಂಸ್ಥೆಯದ್ದು. ಮುಂದುವರೆದು ಈಗ 81 ನೇ ಸೇವಾಯೋಜನೆ ನೀಡಲು ಮಹತ್ತರ ಯೋಜನೆಯನ್ನು ಹಮ್ಮಿ ಕೊಂಡಿದ್ದು
ಕರಕರಿ ಫ್ರೆಂಡ್ಸ್ ಮತ್ತು ಬೈಲೂರು ಟೈಗರ್ಸ್ ವತಿಯಿಂದ ಹಾಗೂ ಸಹೃದಯಿ ದಾನಿಗಳ ಸಹಕಾರದಿಂದ
ರಾಜೀವ್ ನಗರ ಹಿರ್ಗಾನ ದಿನೇಶ್ ರವರು 12 ವರ್ಷದ ಹಿಂದೆ ನಿರ್ಮಾಣ ಮಾಡಿರುವ ಮನೆಗೆ ಮೂಲಭೂತ ಸೌಕರ್ಯವಿಲ್ಲದೆ ಬಹಳ ಆರ್ಥಿಕವಾಗಿ ನೊಂದಿರುವ ಕುಟುಂಬಕ್ಕೆ ಆಸರೆಯಾಗಿ ಕರಕರಿ ಫ್ರೆಂಡ್ಸ್ ಮತ್ತು ಬೈಲೂರು ಟೈಗರ್ಸ್ ತಂಡ ಕೈ ಜೋಡಿಸಿ ಮನೆಯ ಸಂಪೂರ್ಣ ಕೆಲಸವನ್ನು ಮಾಡಿಕೊಟ್ಟಿರುತ್ತದೆ,
*ದಿನೇಶ್ ರವರ ಧರ್ಮಪತ್ನಿ ಕ್ಯಾನ್ಸರ್ ಎಂಬ ಗಂಭೀರ ಕಾಯಿಲೆ ಯಿಂದ ಬಳಲುತ್ತಿ ದ್ದು ಆರೋಗ್ಯ ಬಹಳ ಚಿಂತಾಜನಕವಾಗಿರುವುದರಿಂದ ಈ ಮನೆಯ ಸಂಪೂರ್ಣ ಕೆಲಸವನ್ನು ಮುಗಿಸಿ ಆಸರೆ ಮನೆಯ ಹಸ್ತಾಂತರ ವನ್ನು ಸರಳವಾಗಿ ಆಚರಿಸಲು ಸಂಸ್ಥೆಯವರು ತೀರ್ಮಾನಿಸಿರುತ್ತಾರೆ.
ಆಸರೆಯ ಮನೆಯ ಉದ್ಘಾಟನೆ ಮತ್ತು ಆಸರೆಯ ಮನೆಯ ಹಸ್ತಾಂತರವನ್ನು ಸನ್ಮಾನ್ಯ ಶ್ರೀ ವಿ ಸುನಿಲ್ ಕುಮಾರ್ ವರು ನೆರವೇರಿಸಲಿರುವರು.
ದಿನಾಂಕ
01/01/2025ನೇ ಬುಧವಾರ ಸಮಯ ಸಂಜೆ 5:30ಕ್ಕೆ
ಸ್ಥಳ ರಾಜೀವ್ ನಗರ ಹಿರ್ಗಾನ ಮುಜೂರು
ಸರ್ವರಿಗೂ ಆತ್ಮೀಯವಾದ ಸ್ವಾಗತವನ್ನು ಬಯಸುವ
ಕರಕರಿ ಫ್ರೆಂಡ್ಸ್ ಮತ್ತು ಬೈಲೂರು ಟೈಗರ್ಸ್.