ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್.) ಹಿರಿಯ ಸ್ವಯಂಸೇವಕರು, ಕಾರ್ಕಳದ ಖ್ಯಾತ ವೈದ್ಯರು ಹಾಗೂ ಕರ್ನಾಟಕ ಕೊಂಕಣಿ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿದ್ದ ಡಾ. ಜಗದೀಶ್ ಪೈ (62) ಅವರು ನಿನ್ನೆ (ಜುಲೈ 28, 2025) ಸಾಯಂಕಾಲ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇತ್ತೀಚೆಗೆ ನಾಲ್ವರು ಗಣ್ಯರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದು, ಅವರಲ್ಲಿ ಎರಡು ಕಾಲುಗಳನ್ನು ಕಳೆದುಕೊಂಡಿದ್ದರೂ ಸಮಾಜದಲ್ಲಿ ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದ ಗುರುತಿಸಿಕೊಂಡಿರುವ ಸದಾನಂದನ್ ಮಾಸ್ಟರ್ (ಸಿ. ಸದಾನಂದನ್ ಮಾಸ್ಟರ್) ಒಬ್ಬರು.
ಉಡುಪಿ ತಾಲೂಕಿನ ಪ್ರಮುಖ ಭಜನಾ ವೃಂದದ ಹಿರಿಯ ಭಜಕರು ಮತ್ತು ಸಮಾಜಸೇವಕರಾದ ಶ್ರೀ ಬಾಲಕೃಷ್ಣ ಶೆಟ್ಟಿ ಪೇತ್ರಿಯವರು ಇಂದು (03/03/2025) ಬೆಳಿಗ್ಗೆ ನಡೆದ ಅಪಘಾತದಲ್ಲಿ ನಿಧನರಾದರು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ತಿಳಿಸಿದೆ.