ಉಡುಪಿ ಜಿಲ್ಲೆಯ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ, ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ, ಹರೇ ಕೃಷ್ಣ ಮಣಿಪಾಲ್ ಸಮುದಾಯದ ಕೃಷ್ಣ ಭಕ್ತರು ಭಗವದ್ಗೀತೆಯ ಮಹತ್ತ್ವವನ್ನು ಹರಡುವ ಅಭಿಯಾನದ ಅಂಗವಾಗಿ, ಶಾಲೆಗಳು, ಕಾಲೇಜುಗಳು, ಮತ್ತು ಗ್ರಂಥಾಲಯಗಳಿಗೆ ಈ ಪವಿತ್ರ ಗ್ರಂಥದ ಉಚಿತ ಪ್ರತಿಗಳನ್ನು ವಿತರಣೆ ಮಾಡುತ್ತಿದ್ದಾರೆ.
ಟ್ರಸ್ಟ್ ನ ಸದಸ್ಯರು, ಶಾಲಾಡಳಿತ ಮಂಡಳಿ ಸದಸ್ಯರು, ಮುಖ್ಯಶಿಕ್ಷಕರು, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ನಾಯಕ್, ಸಮಿತಿ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಳೆ ಸಂಘದ ಅಧ್ಯಕ್ಷ ಸತೀಶ್ ಬಿ. ಶೆಟ್ಟಿಗಾರ್ ಸ್ವಾಗತಿಸಿ ವಂದಿಸಿದರು. ಶಾಲಾ ಉಸ್ತುವಾರಿ ನರಸಿಂಹ ನಾಯಕ್ ನಿರೂಪಿಸಿದರು.