ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘ ಉಡುಪಿ ಇದರ ರಜತ ಪೂರ್ತಿ ಸಂಭ್ರಮದ ಅಂಗವಾಗಿ ,ಲೋಕ ಕಲ್ಯಾಣಾರ್ಥವಾಗಿ ಉಡುಪಿಯ ಕುತ್ಪಾಡಿ ಬಳಿಯಿರುವ ತ್ರಿಮೂರ್ತಿ ಸಂಗಮ ಕ್ಷೇತ್ರವಾದ ಕಾನಂಗಿ ಬ್ರಹ್ಮ ವಿಷ್ಣು ಮಹೇಶ್ವರ ದೇವಸ್ಥಾನದಲ್ಲಿ ದಿನಾಂಕ 13-9-2025ರಂದು ದಶಾವತಾರ ಮಂತ್ರ ಯಾಗವು ಜರುಗಿತು.
ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘ ಉಡುಪಿ ಇವರ ರಜತ ಪೂರ್ತಿ ಸಂಭ್ರಮದ ಸಂದರ್ಭದಲ್ಲಿ ಮನೆ , ಮಠ , ಮಂದಿರ , ದೇವಸ್ಥಾನದಲ್ಲಿ ನಮ್ಮ ಮನೆ , ಗೋವು , ನಮ್ಮ ಗ್ರಾಮ , ನಮ್ಮ ರಾಜ್ಯ , ರಾಷ್ಟ್ರದ ರಕ್ಷಣೆಗಾಗಿ ದಶಾವತಾರ ಮಂತ್ರ ಹೋಮವನ್ನು ಹಮ್ಮಿಕೊಳ್ಳಲಾಗಿದೆ.