spot_img

“ಯತ್ನಾಳ್ ನಕಲಿ ಹಿಂದೂ, ಜಮೀರ್ ಕೋಮು ಪ್ರಚೋದಕ” – ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ರೋಶ

Date:

ಬೀದರ್ : ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಾಜ್ಯದ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದ್ದಾರೆ. “ಯತ್ನಾಳ್ ನಕಲಿ ಹಿಂದೂ, ಹುಲಿ ಅಲ್ಲ ಇಲಿ. ಜಮೀರ್ ನಕಲಿ ಧಾರ್ಮಿಕ ನಾಯಕ. ಇಬ್ಬರೂ ರಾಜಕೀಯದ ಹೆಸರಲ್ಲಿ ಜನರನ್ನು ಮೋಸಗೊಳಿಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

ಸೋಮವಾರ ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, “ಯತ್ನಾಳ್ ಹಿಂದೂತ್ವದ ಹೆಸರಿನಲ್ಲಿ ನಾಟಕ ಮಾಡುತ್ತಿದ್ದಾರೆ. ಜೆಡಿಎಸ್‌ಗೆ ಸೇರಿ ಚಿಕನ್ ಕಬಾಬ್ ತಿಂದು, ಅಲ್ಪಸಂಖ್ಯಾತರ ಧರ್ಮಚಿಹ್ನೆ ಧರಿಸಿ ಟಿಪ್ಪು ಖಡ್ಗ ಹಿಡಿದು ಇಪ್ತಿಯಾರ್ ಕೂಟ ಮಾಡಿದ್ದವರು , ಇಂದು ಹಿಂದೂ ಹೆಸರಿನಲ್ಲಿ ಹದ್ದು ಮೀರಿ ಮಾತನಾಡುತ್ತಿದ್ದಾರೆ” ಎಂದು ಆರೋಪಿಸಿದರು.

“ಒಂದು ಬಾರಿ ಉತ್ತರ ಕರ್ನಾಟಕ ಹುಲಿ, ಮತ್ತೊಮ್ಮೆ ಪಂಚಮಸಾಲಿ ಹುಲಿ, ಮುಂದೆ ಹಿಂದೂ ಹುಲಿ ಎನ್ನಿಸುತ್ತಾರೆ. ಇದು ಯಾರಿಗೆ ತೋರಿಸಲು? ಜನತೆಗೆ ಖಂಡಿತವಾಗಿಯೂ ಈ ನಾಟಕಗಳು ಅರ್ಥವಾಗುತ್ತಿವೆ” ಎಂದು ಟೀಕಿಸಿದರು.

ಅದೇ ರೀತಿ ಜಮೀರ್ ಅಹ್ಮದ್ ವಿರುದ್ಧವೂ ಗಂಭೀರ ಆರೋಪ ಹೊರಿಸಿ, “ಡಿಜೆ ಹಳ್ಳಿ, ಕೆಜಿ ಹಳ್ಳಿ ಕೋಮು ಗಲಭೆಗೆ ನಿಜವಾದ ಹೊಣೆಗಾರನು ಜಮೀರ್. ಪ್ರಚಾರಕ್ಕಾಗಿ ಹಲ್ಲು ಕಡಿದು ಡೊಂಬರಾಟ ಮಾಡುವವರು. ಯುದ್ಧಕ್ಕೆ ಹೋಗುವೆ ಎಂದು ಹೇಳಿಕೆ ನೀಡುವ ಬದಲು, ರಾಜ್ಯದಲ್ಲಿ ಕೋಮು ಶಾಂತತೆ ಕಾಪಾಡುವ ಕೆಲಸ ಮಾಡಲಿ” ಎಂದು ತೀವ್ರವಾಗಿ ಕಿಡಿಕಾರಿದರು.

ಇದು ಮುಂದಿನ ಚುನಾವಣಾ ಹಿನ್ನಲೆಯಲ್ಲಿ ಸಕ್ರಿಯವಾಗುತ್ತಿರುವ ಒಳರಾಜಕೀಯ ದಾಳಿ-ಪ್ರತಿದಾಳಿ ರಾಜಕಾರಣದ ಭಾಗವಾಗಿದ್ದು, ಪಕ್ಷದ ಒಳವಿವಾದಗಳು ಮತ್ತಷ್ಟು ದ್ವಿಗುಣಗೊಳ್ಳುವ ಲಕ್ಷಣಗಳಿವೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ರವೀಂದ್ರನಾಥ ಟ್ಯಾಗೋರ್

1861 ಮೇ 7ರಂದು ಕಲ್ಕತ್ತಾದ ಪಿರಾಲಿ ಎಂಬ ಬ್ರಾಹ್ಮಣ ಕುಟುಂಬವೊಂದರಲ್ಲಿ ದೇವೇಂದ್ರ ಹಾಗೂ ಶಾರದಾ ಎನ್ನುವ ದಂಪತಿಗಳಿಂದ ಈ ಮಹಾ ಕವಿಯ ಜನನವಾಯಿತು.ಅವರು ಬಂಗಾಳಿ ಮಹಾ ವಿದ್ವಾಂಸ.

ಬೆಂಡೆಕಾಯಿಯಿಂದ ದೇಹದ ಆರೋಗ್ಯಕ್ಕೂ, ಮನಸ್ಸಿನ ಶಾಂತಿಗೂ ಉಪಯೋಗ!

‘ಬೆಂಡೆಕಾಯಿ’ ಎಂಬ ಒಂದು ಸಾದಾ ತರಕಾರಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.

ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರದ ಯತ್ನ: ಮೀನು ವ್ಯಾಪಾರಿಯ ಹತ್ಯೆ ಯತ್ನ ಪ್ರಕರಣದಲ್ಲಿ ಕೋಡಿಕೆರೆ ಲೋಕು ಅರೆಸ್ಟ್

ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮೀನು ವ್ಯಾಪಾರಿ ಲುಕ್ಮಾನ್ ಎಂಬುವವರನ್ನು ಕೊಲ್ಲಲು ಯತ್ನಿಸಿದ ಪ್ರಕರಣದಲ್ಲಿ ಕುಖ್ಯಾತ ರೌಡಿಶೀಟರ್ ಕೋಡಿಕೆರೆ ಲೋಕೇಶ್ (ಲೋಕು) ನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಬುಡ್ಗಾಮ್‌ನಲ್ಲಿ ಇಬ್ಬರು ಉಗ್ರರ ಸಹಚರರ ಬಂಧನ: ಶಸ್ತ್ರಾಸ್ತ್ರ, ಗ್ರೆನೇಡ್‌ ವಶ

ಭದ್ರತಾ ಪಡೆಗಳು ಬುಡ್ಗಾಮ್ ಜಿಲ್ಲೆಯ ಮಾಗಮ್ ಪ್ರದೇಶದ ಬುಚಿಪೋರಾ ಕವೂಸಾ ಅರೇಸ್‌ನಲ್ಲಿ ನಡೆಸಿದ ನಾಕಾ ತಪಾಸಣಾ ಕಾರ್ಯಾಚರಣೆಯ ವೇಳೆ ಇಬ್ಬರು ಉಗ್ರರ ಸಹಚರರನ್ನು ಬಂಧಿಸಿ, ಅವರಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.