ಉಡುಪಿ: ಮೊಬೈಲ್ ಮೂಲಕ ತಲಾಖ್ ಘೋಷಿಸಿದ ಪತಿ

Date:

spot_img

ಉಡುಪಿ: ಮೊದಲ ಪತ್ನಿಗೆ ತಿಳಿಯದಂತೆ ಎರಡನೇ ಮದುವೆ ಮಾಡಿಕೊಂಡು ದುಬೈಗೆ ಹಾರಿ, ಮೊಬೈಲ್ ಕರೆಯಲ್ಲಿ “ತಲಾಖ್ ತಲಾಖ್ ತಲಾಖ್” ಎಂದು ಘೋಷಿಸಿದ ಪತಿಯ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

2013ರಲ್ಲಿ ಮಂಗಳೂರಿನ ಬೋಳಾರಿನ ಶಾದಿ ಮಹಲ್ನಲ್ಲಿ ಇಸ್ಲಾಮಿಕ್ ಷರಿಯತ್ ಪ್ರಕಾರ ಆದಿಲ್ ಇಬ್ರಾಹಿಂ ಮತ್ತು ಅಮ್ರಿನ್ ಜೋಡಿ ಮದುವೆಯಾಗಿತ್ತು. ಮದುವೆಯ ಸಮಯದಲ್ಲಿ ವಧುವಿನ ಕುಟುಂಬವು 60 ಪವನ್ (ಸುಮಾರು 700 ಗ್ರಾಂ) ಚಿನ್ನ, ಗೃಹೋಪಯೋಗಿ ಸಾಮಗ್ರಿಗಳನ್ನು ವರದಕ್ಷಿಣೆಯಾಗಿ ನೀಡಿತ್ತು. ಹಾಗೆಯೇ, 10 ಪವನ್ (ಸುಮಾರು 116 ಗ್ರಾಂ) ಚಿನ್ನದ ಉಡುಗೊರೆ ಮತ್ತು 8 ಲಕ್ಷ ರೂಪಾಯಿಗಳನ್ನು ಮದುವೆ ಖರ್ಚಿಗಾಗಿ ವಧುವಿನ ತಂದೆ ಖರ್ಚು ಮಾಡಿದ್ದರು.

ಮದುವೆಯ ನಂತರ, ಆದಿಲ್ ಸಾಲ ತೀರಿಸಲು ಚಿನ್ನ ಬೇಕೆಂದು ಕೇಳಿದಾಗ, ಅಮ್ರಿನ್ 10 ಪವನ್ ಚಿನ್ನವನ್ನು ನೀಡಿದ್ದಳು. ಕೆಲವು ತಿಂಗಳ ನಂತರ ಮತ್ತೊಂದು 10 ಪವನ್ ಚಿನ್ನದ ಹಾರವನ್ನು ಅಡವಿಟ್ಟು ಹಣ ಪಡೆದರು. ನಂತರ, 40 ಗ್ರಾಂ ಚಿನ್ನ ಮತ್ತು 2.5 ಲಕ್ಷ ರೂಪಾಯಿಗಳನ್ನು ಮೋಸದಿಂದ ಪಡೆದು ಹಿಂತಿರುಗಿಸಲಿಲ್ಲ. 8 ತಿಂಗಳ ನಂತರ, ಆದಿಲ್ ಅಮ್ರಿನ್ ಅಕ್ಕನ 120 ಗ್ರಾಂ ಚಿನ್ನವನ್ನು ಅಡವಿಟ್ಟು ಬ್ರಹ್ಮಾವರದ ಮೀನಾ ಅನ್ ಮೋಲ್ ನಲ್ಲಿ ಮನೆ ಖರೀದಿಸಿದರು.

ಇದಲ್ಲದೇ, ಅಮ್ರಿನ್ ಗಮನಿಸದಂತೆ 2025ರ ಜೂನ್ 3ರಂದು ಆದಿಲ್ ಎರಡನೇ ಮದುವೆ ಮಾಡಿಕೊಂಡು, ಜೂನ್ 4ರಂದು ಹೊಸ ಪತ್ನಿಯೊಂದಿಗೆ ದುಬೈಗೆ ತೆರಳಿದ್ದರು. ಇದನ್ನು ತಿಳಿದ ಅಮ್ರಿನ್ ಪತಿಗೆ ಕರೆ ಮಾಡಿದಾಗ, ಆದಿಲ್ ತಾನು ಎರಡನೇ ಮದುವೆ ಮಾಡಿಕೊಂಡಿದ್ದಾಗಿ ಹೇಳಿ, “ತಲಾಖ್ ತಲಾಖ್ ತಲಾಖ್” ಎಂದು ಮೂರು ಬಾರಿ ಘೋಷಿಸಿದ್ದಾರೆ. ಇದರ ನಂತರ ಅಮ್ರಿನ್ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರೆಡ್ಮಿ ಪ್ರಿಯರಿಗೆ ಭರ್ಜರಿ ಸುದ್ದಿ: ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ‘ರೆಡ್ಮಿ ಟರ್ಬೊ 5’

ಭಾರತದಲ್ಲಿ ರೆಡ್ಮಿ ಟರ್ಬೊ 5 ಬಿಡುಗಡೆ ದಿನಾಂಕ ಸೋರಿಕೆ! ಜೂನ್ 16 ರಂದು ಅನಾವರಣಗೊಳ್ಳಲಿರುವ ಹೊಸ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ಆಕ್ರಮಣಶೀಲತೆಗೆ ಒಳಗಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನ

ಜೂನ್ 4 ರಂದು ಆಚರಿಸಲಾಗುವ ಆಕ್ರಮಣಶೀಲತೆಗೆ ಒಳಗಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನದ ಮಹತ್ವ, ಇತಿಹಾಸ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತಾದ ಮಾಹಿತಿ.

ಹಲಸಿನ ಹಣ್ಣು ತಿಂದ ಮೇಲೆ ಬೀಜ ಬಿಸಾಡ್ತೀರಾ? ತಡಿರಿ… ಅದರಲ್ಲಿದೆ ‘ಬಾದಾಮಿ’ಗಿಂತಲೂ ಹೆಚ್ಚಿನ ಶಕ್ತಿ

ಹಲಸಿನ ಹಣ್ಣಿನ ಬೀಜಗಳನ್ನು ಬಿಸಾಡುವ ಮುನ್ನ ಈ ಲೇಖನ ಓದಿ. ಇದರಲ್ಲಿರುವ ಪೋಷಕಾಂಶಗಳು ಮತ್ತು ಆರೋಗ್ಯದ ಲಾಭಗಳ ವಿವರ ಇಲ್ಲಿದೆ.

ಪೆರ್ಣಂಕಿಲ ದೇವಸ್ಥಾನದ ವ್ಯವಸ್ಥಾಪಕ ಸುರೇಶ್ ತಂತ್ರಿ ನಿಧನ

ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪಕ ಸುರೇಶ್ ತಂತ್ರಿಯವರು ದೈವಾಧೀನರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ