
ಉಡುಪಿ: ಕಾರ್ಕಳ ತಾಲೂಕು ಕಾಬೆಟ್ಟು ನಿವಾಸಿ ಸುಧಾಕರ ಪೂಜಾರಿ (69) ಅವರು ಪ್ರಯಾಗ್ರಾಜ್ ಮತ್ತು ಕಾಶಿಗೆ ಕುಂಭಮೇಳದಲ್ಲಿ ಭಾಗವಹಿಸಲು ತೆರಳಿದ್ದು, ಜನವರಿ 27ರಿಂದ ಕಾಣೆಯಾಗಿದ್ದಾರೆ ಎಂದು ಕುಟುಂಬದವರು ಮತ್ತು ಪೊಲೀಸರು ತಿಳಿಸಿದ್ದಾರೆ.
ಜ.27ರಿಂದ ಮೊಬೈಲ್ ಸ್ವಿಚ್ ಆಫ್ – ಮನೆಯವರು ಆತಂಕದಲ್ಲಿ
ಸುಧಾಕರ ಪೂಜಾರಿ ಅವರು ಮನೆಗೆ ಮಾಹಿತಿ ನೀಡಿ ಯಾತ್ರೆಗೆ ತೆರಳಿದ ಬಳಿಕ ಅವರ ಮೊಬೈಲ್ ಫೋನ್ ಜನವರಿ 27ರಿಂದ ಸ್ವಿಚ್ ಆಫ್ ಆಗಿದ್ದು, ಈವರೆಗೆ ಮನೆಯವರಿಗೆ ಯಾವುದೇ ಸಂಪರ್ಕ ಸಿಗದೆ ಆತಂಕ ಉಂಟಾಗಿದೆ.
ನಾಪತ್ತೆಯಾಗಿರುವ ವ್ಯಕ್ತಿಯ ವಿವರ:
ಹೆಸರು: ಸುಧಾಕರ ಪೂಜಾರಿ
ವಯಸ್ಸು: 69 ವರ್ಷ
ಎತ್ತರ: 5 ಅಡಿ
ಮುಖದ ಆಕೃತಿ: ದುಂಡು
ಮೈಬಣ್ಣ: ಗೋಧಿ
ಭಾಷಾ ಜ್ಞಾನ: ಕನ್ನಡ, ಹಿಂದಿ, ಇಂಗ್ಲಿಷ್, ತುಳು, ಮರಾಠಿ
ಮಾಹಿತಿಗಾಗಿ ಸಂಪರ್ಕಿಸಿ:
ಯಾರಾದರೂ ಸುಧಾಕರ ಪೂಜಾರಿ ಅವರ ಬಗ್ಗೆ ಮಾಹಿತಿ ಪಡೆದಲ್ಲಿ ಕಾರ್ಕಳ ನಗರ ಪೊಲೀಸ್ ಠಾಣೆಗೆ ತಿಳಿಸಲು ವಿನಂತಿಸಲಾಗಿದೆ.
📞 08258-230213 / 233100
📱 9480805461