spot_img

ಸಹೋದರರಿಬ್ಬರಿಂದ ಸ. ಕಿ. ಪ್ರಾ. ಶಾಲೆ ನೆಲ್ಲಿಕಟ್ಟೆ ಹಿರ್ಗಾನ ಇಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ !

Date:

ಹಿರ್ಗಾನ : ದಿನಾಂಕ 4-06-2025 ರಂದು ಶ್ರೀ ವಾಸುಶೆಟ್ಟಿ ಮತ್ತು ಅವರ ಸಹೋದರ ಶ್ರೀ ಹರೀಶ್ ಶೆಟ್ಟಿ ನರಕೆ, ನೆಲ್ಲಿಕಟ್ಟೆ ಇವರು ಸ. ಕಿ. ಪ್ರಾ. ಶಾಲೆ ನೆಲ್ಲಿಕಟ್ಟೆ ಹಿರ್ಗಾನ ಇಲ್ಲಿನ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸುವುದರ ಮೂಲಕ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಿರುತ್ತಾರೆ.

ಕೊಡುಗೈದಾನಿಗಳಾದ ಶ್ರೀ ವಾಸುಶೆಟ್ಟಿಯವರು ಶಾಲೆಯ ಪ್ರತೀ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.ಇದಕ್ಕೆ ಪೂರಕವಾಗಿ ಮಕ್ಕಳಿಗೆ ಉಚಿತ ಪುಸ್ತಕಗಳನ್ನು ನೀಡಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪ್ರೋತ್ಸಾಹ ನೀಡಿರುತ್ತಾರೆ.

ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಸರಣಿ ಶಿಕ್ಷಕರು ಉಪಸ್ಥಿತರಿದ್ದರು. ಪುಸ್ತಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು. ಶಾಲಾ ಅಭಿವೃದ್ಧಿ ಸಮಿತಿಯವರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹರಿತಕಿ ಹಣ್ಣು : 160 ಕಾಯಿಲೆಗಳಿಗೆ ರಾಮಬಾಣ, ಕ್ಯಾನ್ಸರ್‌ನಿಂದ ಮಧುಮೇಹದವರೆಗೂ ಪರಿಣಾಮಕಾರಿ!

ಹರಿತಕಿ ಹಣ್ಣು ಇದು ಬರೀ ಹಣ್ಣಲ್ಲ 160 ರೋಗಗಳನ್ನ ಗುಣಪಡಿಸುವ ಸಂಜೀವಿನಿ! ಈ ಹಣ್ಣಿನಿಂದ ತಯಾರಿಸಿದ ಹರಿತಕಿ ಚೂರ್ಣವು ಆಯುರ್ವೇದದ ಅತ್ಯಂತ ಶಕ್ತಿಶಾಲಿ ಗಿಡಮೂಲಿಕೆಗಳಲ್ಲಿ ಒಂದಾಗಿದೆ.

ಇಂದ್ರಾಳಿ ರೈಲು ನಿಲ್ದಾಣದ ಬಳಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನ ರಕ್ಷಣೆ

ಇಂದ್ರಾಳಿ ರೈಲು ನಿಲ್ದಾಣದ ಹೊರವಲಯದ ಪಾದಚಾರಿ ಮಾರ್ಗದಲ್ಲಿ ಮಂಗಳವಾರ ನಸುಕಿನ ಜಾವ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಒಬ್ಬ ಅಪರಿಚಿತ ಯುವಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಮತ್ತು ಸ್ಥಳೀಯ ಆಟೋ ಚಾಲಕರು ರಕ್ಷಿಸಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

“ಹೆಬ್ರಿ ಸೀತಾನದಿ ಪ್ರದೇಶದಲ್ಲಿ ಆನೆಗಳ ದಾಳಿ! ಜನರ ಮನೆಗಳಿಗೆ ಹಾನಿ, ಆತಂಕದ ವಾತಾವರಣ”

ಹೆಬ್ರಿ ತಾಲೂಕಿನ ಸೀತಾನದಿ ಬೆಳಾರ್ ಪ್ರದೇಶದಲ್ಲಿ ಆನೆಗಳು ಮತ್ತೆ ದಾಳಿ ನಡೆಸಿದ್ದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿವೆ.

ಪಿಎಂಈಜಿಪಿ ಸಾಲದ ಹೆಸರಲ್ಲಿ ಕಾರ್ಕಳದ ಕೌಡೂರು ರಂಗನಪಲ್ಕೆಯ ಮಹಿಳೆಗೆ ಮೋಸ ! ಆರೋಪಿ ಜೈಲುಪಾಲು

ಕಾರ್ಕಳದ ಕೌಡೂರು ಗ್ರಾಮದ ರಂಗನಪಲ್ಕೆ ನಿವಾಸಿ ಕವಿತಾ ಕೃಪಾಲಿನಿ ಎಂಬ ಮಹಿಳೆಗೆ ಕಾರ್ಕಳದ ಅತ್ತೂರು, ದೂಪದಕಟ್ಟೆ ನಿವಾಸಿ ರಾಘವೇಂದ್ರ. ಎಸ್. ಎಂಬುವವರು ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆ (ಪಿಎಂಈಜಿಪಿ)ಅಡಿಯಲ್ಲಿ ಸಿಗುವ ಸಾಲದಿಂದ ಜೆರಾಕ್ಸ್ ಮಿಷನ್, ಲ್ಯಾಮಿನೇಷನ್ ಮಿಷನ್, ಲ್ಯಾಪ್ಟಾಪ್, ಹಾಗೂ ಇತರ ಪರಿಕರಗಳನ್ನು ಕೊಡಿಸುತ್ತೇನೆ ಎಂದು ನಂಬಿಸಿ 9.5 ಲಕ್ಷ ರೂಪಾಯಿ ವಂಚಿಸಿದ ಘಟನೆ ನಡೆದಿದೆ.