spot_img

ಇಂದು ಪುರಿ ಜಗನ್ನಾಥ ರಥಯಾತ್ರೆ…..

Date:

spot_img

ಪುರಿ : ಭಾರತದ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಪುರಿ ಜಗನ್ನಾಥ ದೇವಾಲಯವು ತುಂಬ ಪ್ರಸಿದ್ಧವಾಗಿದೆ . ಇಲ್ಲಿನ ರಥೋತ್ಸವ ದೇಶದೆಲ್ಲೆಡೆ ಬಹಳ ಹೆಸರುವಾಸಿಯಾಗಿದೆ . ವಿದೇಶದಲ್ಲಿರುವ ಕೆಲ ಭಕ್ತರು ಕೂಡ ಪುರಿ ಜಗನ್ನಾಥನ ರಥೋತ್ಸವದ ಸಮಯದಲ್ಲಿ ಅಲ್ಲಿ ಬಂದು ಸೇರುತ್ತಾರೆ. ಪ್ರತಿ ವರ್ಷ ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವರುಗಳು ಜೊತೆಗೆ ರಥದಲ್ಲಿ ಕುಳಿತು ಭಕ್ತರ ಸಡಗರದೊಂದಿಗೆ ರಥಯಾತ್ರೆಯಲ್ಲಿ ಸಾಗುವುದು ಇಲ್ಲಿ ನಡೆಯುವ ವಾಡಿಕೆ. ಅಂತೆಯೇ ಈ ವರ್ಷದ ಪುರಿ ಜಗನ್ನಾಥ ಉತ್ಸವದ ರಥಯಾತ್ರೆಯ ಮೆರವಣಿಗೆಯು ಇಂದು ನಡೆಯಲಿದೆ.

12ನೇ ಶತಮಾನದಲ್ಲಿ ಒಡಿಶಾ ರಾಜ್ಯದ ಕರಾವಳಿ ನಗರವಾದ ಪುರಿಯಲ್ಲಿ ಈ ಜಗನ್ನಾಥ ದೇವಾಲಯವನ್ನು ನಿರ್ಮಿಸಲಾಯ್ತು. ವಿಷ್ಣುವಿನ ಅವತಾರವಾದ ಜಗನ್ನಾಥ, ಆತನ ಅಣ್ಣ ಬಲಭದ್ರ ಮತ್ತು ತಂಗಿ ಸುಭದ್ರಾ ಮೂವರು ಮೂಲ ದೇವರುಗಳಾಗಿ ಇಲ್ಲಿ ನೆಲೆಸಿದ್ದಾರೆ. ಅವರನ್ನು ವಿಶೇಷವಾಗಿ ಪೂಜಿಸುವ ಉದ್ದೇಶದಿಂದ ಇಲ್ಲಿ ಪ್ರತಿ ವರ್ಷ ಭವ್ಯ ರಥೋತ್ಸವವನ್ನು ಆಚರಿಸಲಾಗುತ್ತದೆ. ಇಲ್ಲಿ ನಡೆಯುವ ಜಗನ್ನಾಥನ 12 ಯಾತ್ರೆಗಳಲ್ಲಿ ಈ ರಥಯಾತ್ರೆ ಅತ್ಯಂತ ಪವಿತ್ರವಾದದ್ದು ಎಂದು ಪರಿಗಣಿಸಲಾಗಿದೆ. ಇದನ್ನು ನೋಡಲು ದೇಶದ ವಿವಿಧ ಭಾಗಗಳಿಂದ ಭಕ್ತರು ಪುರಿಗೆ ಬಂದು ಸೇರುತ್ತಾರೆ.

ಮೂರು ರಥಗಳಲ್ಲಿ ಕುಳಿತು ಒಡಹುಟ್ಟಿದವರ ಮೆರವಣಿಗೆ
ಈ ಪುರಿ ರಥಯಾತ್ರೆಗಾಗಿ ಪ್ರತಿ ವರ್ಷ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವರಿಗೆ ಹೊಸ ರಥಗಳನ್ನು ನಿರ್ಮಿಸಲಾಗುತ್ತದೆ. ಅದರಲ್ಲಿ ಈ ಮೂವರು ದೇವರ ನಗರ ಪ್ರದಕ್ಷಿಣೆ ನಡೆಯುತ್ತದೆ. ಕಳೆದ ಜೂನ್ 12 ರಂದು ಜಗನ್ನಾಥನಿಗೆ ಅಭಿಷೇಕದೊಂದಿಗೆ ಪೂಜೆಗಳು ಆರಂಭವಾದವು. ಮೂಲ ದೇವರುಗಳಿಗೆ ಪ್ರಾರ್ಥಿಸಿದ ಭಕ್ತರು ಜೂನ್ 12 ರಿಂದಲೇ ಇಲ್ಲಿಗೆ ಬರಲು ಪ್ರಾರಂಭಿಸಿದ್ದಾರೆ. ಈ ವರ್ಷದ ರಥಯಾತ್ರೆಯ ಪೂಜೆಗಳು ಜೂನ್ 26 ರಂದು ಮಧ್ಯಾಹ್ನ ಅಂದರೆ ಇಂದು ಮಧ್ಯಾಹ್ನ 1:24 ರಿಂದ ಆರಂಭವಾಗಿ ಜೂನ್ 27 ರಂದು ಅಂದರೆ ಇಂದು ಬೆಳಗ್ಗೆ 11:19 ಕ್ಕೆ ಮುಕ್ತಾಯಗೊಳ್ಳುತ್ತದೆ. ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವರನ್ನು ತಮ್ಮ ರಥಗಳಲ್ಲಿ ಕರೆದೊಯ್ಯುವ ಪ್ರಮುಖ ರಥಯಾತ್ರೆಯ ಮೆರವಣಿಗೆ ಇಂದೇ ನಡೆಯಲಿದೆ.

ಈ ರಥಯಾತ್ರೆಯನ್ನು ಜೀವನ ಯಾನ ಮತ್ತು ಆತ್ಮ ವಿಮೋಚನೆಯನ್ನು ವಿವರಿಸುವ ರೀತಿಯಲ್ಲಿ ಆಚರಿಸಲಾಗುತ್ತದೆ. ಪುರಿ ರಥಯಾತ್ರೆಯಲ್ಲಿ ತನ್ನ ಭಕ್ತರನ್ನು ನೋಡಲು ಜಗನ್ನಾಥನೇ ರಥದಲ್ಲಿ ಬರುತ್ತಾನೆ ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ, ಈ ರಥಯಾತ್ರೆಯಲ್ಲಿ ಜಗನ್ನಾಥ ತಾನು ಹುಟ್ಟಿದ ಸ್ಥಳವಾದ ಮಥುರಾಗೆ ಮರಳುತ್ತಾನೆ ಎಂದು ನಂಬಲಾಗಿದೆ. ರಥವನ್ನು ಎಳೆಯುವಾಗ ಹಗ್ಗವನ್ನು ಮುಟ್ಟುವ ಭಕ್ತರಿಗೆ ಆಶೀರ್ವಾದ ಮತ್ತು ಪಾಪ ಮೋಕ್ಷ ದೊರೆಯುತ್ತದೆ ಎಂಬ ನಂಬಿಕೆಯಿದೆ. ಎಲ್ಲಾ ವರ್ಗದ ಜನರನ್ನು ಈ ರಥಯಾತ್ರೆ ಒಂದುಗೂಡಿಸುವುದರಿಂದ ಇದನ್ನು ಐಕ್ಯತೆಯ ಆಚರಣೆ ಎಂದು ಕರೆಯಲಾಗುತ್ತದೆ. ಪುರಿ ರಾಜನಿಂದ ಸೇರಾ ಪನ್ಹಾರಾ ಸಮಾರಂಭವನ್ನು ನಡೆಸಲಾಗುತ್ತದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ನಾಳೆ ಕಲಂಬಾಡಿಯಲ್ಲಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಜನನಿ ಮಿತ್ರ ಮಂಡಳಿ (ರಿ) ವಾoಟ್ರಾಯ್ ಪದವು, ರೋಟರಿ ಕ್ಲಬ್ ಕಾರ್ಕಳ, ಜೆಸಿಐ ಕಾರ್ಕಳ ಹಳೆ ವಿದ್ಯಾರ್ಥಿ ಸಂಘ, ಕಲಂಬಾಡಿ ಪದವು ಮತ್ತು ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಹಿಳೆಯರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ

ಶಿರೂರು ಮಠದ ಭಾವಿ ಪರ್ಯಾಯ ಶ್ರೀ ವೇದವರ್ಧನ ತೀರ್ಥರಿಗೆ ಬ್ರಾಹ್ಮಣ ಮಹಾಸಭಾದಿಂದ ಫಲ ಕಾಣಿಕೆ ಅರ್ಪಣೆ

ಶಿರೂರು ಮಠದ ಭಾವಿ ಪರ್ಯಾಯ ಪೀಠಾಧಿಪತಿಗಳಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ, ಬೆಂಗಳೂರಿನ ವಿದ್ಯಾಪೀಠದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ವತಿಯಿಂದ ಗೌರವಪೂರ್ವಕವಾಗಿ ಫಲ ಕಾಣಿಕೆ ಅರ್ಪಿಸಿ ಅವರಿಂದ ಆಶೀರ್ವಾದ ಪಡೆಯಲಾಯಿತು.

ಬಿಜೆಪಿ ಟಿಕೆಟ್ ವಂಚನೆ: ಚೈತ್ರಾ ಕುಂದಾಪುರ ವಿರುದ್ಧದ ಪ್ರಕರಣಕ್ಕೆ ಮರುಜೀವ, ಹಣ ಬಿಡುಗಡೆಗೆ ಉದ್ಯಮಿ ಹೈಕೋರ್ಟ್ ಮೊರೆ

ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ₹5 ಕೋಟಿ ವಂಚಿಸಿದ ಆರೋಪದ ಮೇಲೆ ಚೈತ್ರಾ ಕುಂದಾಪುರ, ಅಭಿನವಶ್ರೀ ಹಾಲವೀರಪ್ಪಜ್ಜ ಮತ್ತಿತರರ ವಿರುದ್ಧ ದಾಖಲಾಗಿದ್ದ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ.

75 ವಿಐಪಿಗಳನ್ನು ಬ್ಲ್ಯಾಕ್‌ಮೇಲ್ ಮಾಡಿದ ‘ಹನಿ ಮನಿ’ ಲೇಡಿ: ಮಹಾರಾಷ್ಟ್ರದಲ್ಲಿ ಸಂಚಲನ ಸೃಷ್ಟಿಸಿದ ‘ಚಿತ್ರಾಂಗಿಣಿ’!

ಮಹಾರಾಷ್ಟ್ರದಲ್ಲಿ 75ಕ್ಕೂ ಹೆಚ್ಚು ವಿಐಪಿಗಳನ್ನು ಹನಿಟ್ರ್ಯಾಪ್ ಮಾಡಿ ಕೋಟ್ಯಂತರ ರೂ. ಸುಲಿಗೆ ಮಾಡಿದ ಮಹಿಳೆಯ ಪ್ರಕರಣ ಭಾರೀ ಕೋಲಾಹಲ ಸೃಷ್ಟಿಸಿದೆ.