
ಕಾರ್ಕಳ: ತುಳುನಾಡಿನ ಖ್ಯಾತ ಹಾಸ್ಯ ತಂಡ ‘ತೆಲಿಕೆದ ತೆನಾಲಿ’ ನಾಲ್ಕು ವರ್ಷಗಳ ಸುದೀರ್ಘ ವಿರಾಮದ ನಂತರ ಮತ್ತೆ ರಂಗಭೂಮಿಗೆ ಭರ್ಜರಿ ಎಂಟ್ರಿ ನೀಡುತ್ತಿದೆ. ದೇಶ-ವಿದೇಶಗಳಲ್ಲಿ 570ಕ್ಕೂ ಹೆಚ್ಚು ‘ತೆಲಿಕೆದ ಬರ್ಸ’ ಪ್ರದರ್ಶನ ನೀಡಿ, ಮಜಾ ಭಾರತ ಹಾಗೂ ಬಲೆ ತೆಲಿಪಾಲೆ ಚಾಂಪಿಯನ್ ಆಗಿ ಹೊರಹೊಮ್ಮಿರುವ ಸುನಿಲ್ ನೆಲ್ಲಿಗುಡ್ಡೆ ನೇತೃತ್ವದ ಈ ತಂಡ, ಈಗ ‘ರಾಯಾರಿದ್ದಾರೆ’ (ಕನ್ನಡ) ಮತ್ತು ‘ರಾಯೆರುಲ್ಲೆರ್’ (ತುಳು) ಎಂಬ ಹೊಸ ಭಕ್ತಿ ಪ್ರಧಾನ ಸಾಮಾಜಿಕ ಹಾಸ್ಯ ನಾಟಕವನ್ನು ಸಿದ್ದಪಡಿಸಿದೆ.
ಗುರು ರಾಘವೇಂದ್ರ ಸ್ವಾಮಿಗಳ ಭಕ್ತಿ ಮತ್ತು ಪವಾಡಗಳ ಕಥಾಹಂದರ ಹೊಂದಿರುವ ಈ ನಾಟಕವು ಆಗಸ್ಟ್ ತಿಂಗಳಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಯಾವುದೇ ಅದ್ದೂರಿ ಆಡಂಬರವಿಲ್ಲದೆ, ಶುದ್ಧ ಹಾಸ್ಯ ಮತ್ತು ಅರ್ಥಪೂರ್ಣ ಕಥೆಯ ಮೂಲಕ ಪ್ರೇಕ್ಷಕರ ಮನ ಗೆಲ್ಲಲು ತಂಡ ಸಜ್ಜಾಗಿದೆ. ಕಾರ್ಯಕ್ರಮದ ಮುಂಗಡ ಬುಕ್ಕಿಂಗ್ಗಾಗಿ ಆಸಕ್ತರು 9845439720 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ನಟ ಸುನಿಲ್ ನೆಲ್ಲಿಗುಡ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













