spot_img

ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಪರ್ಕಳಇವರ ಪ್ರಾಯೋಜಕತ್ವದಲ್ಲಿ ಪರ್ಕಳ ಪ್ರೌಢ ಶಾಲೆಯಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ

Date:

spot_img

ಪರ್ಕಳ : ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಪರ್ಕಳ ಇವರ ಪ್ರಾಯೋಜಕತ್ವದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ಉಡುಪಿ ಜಿಲ್ಲಾ ಸಹಕಾರ ಭಾರತಿ ಇವರುಗಳ ಸಹಯೋಗದೊಂದಿಗೆ ಸೊಸೈಟಿಯ ರಜತ ವರ್ಷ ಪ್ರಾರಂಭದ ದಿನ ಸ್ಥಾಪನಾ ದಿನಾಂಕ 27 ಜೂನ್ ರಂದು ಪರ್ಕಳ ಪ್ರೌಢ ಶಾಲೆಯಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ ಜರಗಿತು.

ಈ ಕಾರ್ಯಕ್ರಮದಲ್ಲಿ 2025 ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆಯ ಅಂಗವಾಗಿ ಗಿಡ ನೆಡುವ ಸಂಕಲ್ಪ ‘ ಏಕ್ ಪೇಡ್ ಮಾ ಕೆ ನಾಮ್ ‘ ಧ್ಯೇಯ ವಾಕ್ಯದಂತೆ ಪ್ರಕೃತಿಯ ಮಹತ್ವ ಅದರ ಸ್ವಚ್ಛತೆ ಮತ್ತು ರಕ್ಷಣೆ ಸಹಕಾರಿಗಳ ಕರ್ತವ್ಯ ಎಂದು ಸಾರಲಾಯಿತು.

ಸಭಾಕಾರ್ಯಕ್ರಮದಲ್ಲಿ ಸೊಸೈಟಿಯ ಅಧ್ಯಕ್ಷರಾದ ಶ್ರೀ ಅಶೋಕ್ ಕಾಮತ್ ಕೊಡಂಗೆರವರು ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ (ಅಧ್ಯಕ್ಷರು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್) , ಶ್ರೀ ದಿನೇಶ್ ಹೆಗ್ಡೆ ಆತ್ರಾಡಿ ( ಅಧ್ಯಕ್ಷರು ಸಹಕಾರ ಭಾರತಿ ಉಡುಪಿ ಜಿಲ್ಲೆ) , ಶ್ರೀ ಅರುಣಾಚಲ ಹೆಗ್ಡೆ (ಅಧ್ಯಕ್ಷರು ಪರ್ಕಳ ಎಜುಕೇಶನ್ ಸೊಸೈಟಿ) ,ಶ್ರೀಮತಿ ಅನುಷಾ ಕೋಟ್ಯಾನ್ ( ಮುಖ್ಯಕಾರ್ಯನಿರ್ವಾಹಕರು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್) ಶ್ರೀ ಆನಂದ ನಾಯ್ಕ (ಮುಖ್ಯೋಪಾಧ್ಯಾಯರು ಪರ್ಕಳ ಪ್ರೌಢ ಶಾಲೆ) ಉಪಸ್ಥಿತರಿದ್ದರು.

ಶಾಲಾ ಮಕ್ಕಳಿಂದ ಸಸಿ ನಟ್ಟು ಅದರ ಮಹತ್ವ ರಕ್ಷಣೆ ನಿಮ್ಮ ಕರ್ತವ್ಯ ಎಂದು ತಿಳಿಸಲಾಯಿತು. ಸೊಸೈಟಿಯ ಉಪಾಧ್ಯಕ್ಷರಾದ ಶ್ರೀ ಪಾಂಡುರಂಗ ಕಾಮತ್ ಸ್ವಾಗತಿಸಿದರು.

ಶ್ರೀ ನಿತ್ಯಾನಂದ ನರಸಿಂಗೆ ಸಂಸ್ಥೆಯ ಕಾರ್ಯನಿರ್ವಾಣಾಧಿಕಾರಿ ಪ್ರಾಸ್ತಾವಿಕವಾಗಿ ಪರಿಸರ ಸಂರಕ್ಷಣೆ ನಮ್ಮ ಮುಂದಿನ ಪೀಳಿಗೆಗೆ ಅವಶ್ಯಕ, ನಾವು ಪ್ರಕೃತಿಯಿಂದ ಶುದ್ಧ ಗಾಳಿ, ಶುದ್ಧ ನೀರು, ಬೆಳಕು ಉಚಿತವಾಗಿ ಪಡೆಯುತ್ತೇವೆ ಆದರೆ ಅದಕ್ಕೆ ಪ್ರತಿಯಾಗಿ ಏನು ನೀಡುತ್ತೇವೆ ? ಎಂದು ಯೋಚಿಸಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ. ಸೊಸೈಟಿಯು 2001 ಜೂನ್ 27 ರಂದು ಉದ್ಘಾಟನೆಗೊಂಡು ಇಂದಿಗೆ 24 ವರ್ಷ ಪೂರ್ತಿಗೊಳಿಸಿ ರಜತ ವರ್ಷಕ್ಕೆ ಪಾದಾರ್ಪಣೆ ಗೈದಿದೆ ಸಂಸ್ಥೆಯ ಠೇವಣಿ 144 ಕೋಟಿ, 110 ಕೋಟಿ, ಸಾಲ ಹೊರಬಾಕಿಯೊಂದಿಗೆ ಉತ್ತಮ ವ್ಯವಹಾರ ನಡೆಸುತ್ತಿದೆ. ಪರ್ಕಳದಲ್ಲಿ 20 ಸೆಂಟ್ಸ್ ಜಾಗ ಖರೀದಿಸಿ ಸ್ವಂತ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು ಈ ವರ್ಷ ಉದ್ಘಾಟನೆ ಗೊಳಿಸುವ ಯೋಜನೆ ಮಂಡಳಿ ರೂಪಿಸಿದೆ 6 ಶಾಖೆಗಳು ಅದರಲ್ಲಿ 3 ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಸಂಸ್ಥೆಯ ಬೆಳವಣಿಗೆಯನ್ನು ತಿಳಿಸಿದರು.

ಶ್ರೀ ಜಯಕರ ಶೆಟ್ಟಿ ಇಂದ್ರಾಳಿಯವರು ಸಂಸ್ಥೆಯ ಕಾರ್ಯನಿರ್ವಹಣೆ ಅಭಿವೃದ್ಧಿ ಬಗ್ಗೆ ಪ್ರಶಂಸಿದರು ಹಾಗೂ ಸಹಕಾರ ಸಂಘಗಳು 2025 ವರ್ಷವನ್ನು ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ ಎಂದು ಕೇಂದ್ರ ಸರಕಾರ ಘೋಷಿಸಿ ಸಹಕಾರಿಗೆ ವಿಶ್ವಮಾನ್ಯತೆಯ ಪುಷ್ಟಿ ದೊರಕಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಸಹಕಾರಿ ಸಂಘಗಳ ಮುಖಾಂತರ ಲಕ್ಷ ಗಿಡ ನೆಟ್ಟು ಪೋಷಿಸುವ ಯೋಜನೆ ರೂಪಿಸಿದ್ದು ಎಲ್ಲಾ ಸಹಕಾರಿಗಳು ಸ್ಪಂದಿಸಿ ಸುಮಾರು 35 ಸಾವಿರ ಗಿಡ ಈಗಾಗಲೇ ನೆಡಲಾಗಿದೆ ಎಂದು ತಿಳಿಸಿ ಸಂಸ್ಥೆಯ ಅಭಿವೃದ್ಧಿ , ಜನೋಪಯೋಗಿ ಕಾರ್ಯಕ್ಕೆ ಹಾಗೂ ರಜತ ವರ್ಷಕ್ಕೆ ಶುಭಕೋರಿದರು.

ಶ್ರೀಮತಿ ಅನುಷಾ ಕೋಟ್ಯಾನ್ ರವರು ಸಾಮಾಜಿಕ ಜವಾಬ್ದಾರಿ ಪ್ರಕೃತಿ ಉಳಿಸಲು ಗಿಡ ನಟ್ಟು ಪೋಹಿಸಿ ಸ್ವಚ್ಛಂದ ಜಗತ್ತು ನಿರ್ಮಾಣಕ್ಕೆ ಸಹಕಾರಿಗಳು ಕೊಡುಗೆ ನೀಡೋಣ ಎಂದು ಕರೆಯಿತ್ತರು.

ಅತಿಥಿ ಗಣ್ಯರು ಸೊಸೈಟಿಗೆ ಶುಭ ಹಾರೈಸಿ , ಅಭಿವೃದ್ಧಿಯನ್ನು ಪ್ರಶಂಶಿಸಿ ಇನ್ನೂ ಅಭಿವೃದ್ಧಿ ಹೊಂದಲಿ ಎಂದು ಶುಭಕೋರಿದರು.

ಅಧ್ಯಕ್ಷರ ಭಾಷಣದಲ್ಲಿ ಶ್ರೀ ಅಶೋಕ್ ಕಾಮತ್ ರವರು “ಸಂಸ್ಥೆ ಬೆಳ್ಳಿಹಬ್ಬ ಆಚರಿಸುತ್ತಿದೆ. ಈ ವರ್ಷ ಅನೇಕ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು , ಕಟ್ಟಡ ಉದ್ಘಾಟನೆ ಹಾಗೂ ಸಂಸ್ಥೆಯ ಠೇವಣಿ 200 ಕೋಟಿ ತಲುಪಿಸುವ ಗುರಿ ಇರಿಸಿದೆ” ಎಂದು ಹೇಳಿ ಎಲ್ಲರ ಸಹಕಾರ ಯಾಚಿಸಿದರು.

ಶಾಲೆಯ ಮಕ್ಕಳಿಗೆ ಸಿಹಿ ತಿಂಡಿ ಹಾಗೂ ಗಿಡಗಳನ್ನು ವಿತರಿಸಲಾಯಿತು. ಬಂದಿರುವ ಸದಸ್ಯರಿಗೆ , ಗ್ರಾಹಕರಿಗೆ ,ಸಾರ್ವಜನಿಕರಿಗೆ ಅತಿಥಿ ಗಣ್ಯರು ಸಸಿ ವಿತರಿಸಿದರು.ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದರು. ಸಂಸ್ಥೆಯ ನಿರ್ದೇಶಕರಾದ ಶ್ರೀ ನರಸಿಂಹ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶ್ರೀ ಕ್ಷೇ. ಧ. ಗ್ರಾ ಯೋಜನೆ (ರಿ )ಬಿಸಿ ಟ್ರಸ್ಟ್ ಕಾರ್ಕಳದ ಶೌರ್ಯ ವಿಪತ್ತು ನಿರ್ವಹಣಾ ಪಳ್ಳಿ ಘಟಕದ ವತಿಯಿಂದ “ಪರಿಸರ ಮಾಹಿತಿ ಮತ್ತು ಗಿಡ ನಾಟಿ” ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ )ಬಿಸಿ ಟ್ರಸ್ಟ್ ಕಾರ್ಕಳ ಇದರ ಶೌರ್ಯ ವಿಪತ್ತು ನಿರ್ವಹಣಾ ಪಳ್ಳಿ ಘಟಕದ ವತಿಯಿಂದ "ಪರಿಸರ ಮಾಹಿತಿ ಮತ್ತು ಗಿಡ ನಾಟಿ" ಕಾರ್ಯಕ್ರಮವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಪಳ್ಳಿಯಲ್ಲಿ ನಡೆಸಲಾಯಿತು.

ಉಡುಪಿಯ ನೂತನ ಎಸ್ಪಿಗೆ ಮಹೇಶ್ ಮರ್ಣೆಯವರಿಂದ ಕಲಾತ್ಮಕ ಗೌರವ

ಉಡುಪಿಯ ನೂತನ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿರುವ ಹರಿರಾಮ್ ಶಂಕರ್ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಮಹೇಶ್ ಮರ್ಣೆಯವರು ಅಶ್ವತ್ಥ ಎಲೆಯಲ್ಲಿ ಸ್ವಯಂ ರಚಿಸಿದ ಭಾವಚಿತ್ರವೊಂದನ್ನು ಎಸ್ಪಿ ಅವರಿಗೆ ನೀಡಿ ಗೌರವಿಸಿದರು.

ಕಾರ್ಕಳ ಬಸ್ ನಿಲ್ದಾಣ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು: ಅರ್ಧ ಗಂಟೆಯೊಳಗೆ ಸ್ಕೂಟರ್ ಮಾಯ

ಕಾರ್ಕಳ ನಗರದ ಬಸ್ ನಿಲ್ದಾಣದ ಬಳಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನವೊಂದನ್ನು ಕಳ್ಳತನಗೈದಿರುವ ಘಟನೆ ಜೂನ್ 13 ರಂದು ನಡೆದಿದೆ.

ಹಿರಿಯಡ್ಕದ ದೇವಾಡಿಗರ ಸಂಘದಲ್ಲಿ ಗಣಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಿದ್ಯಾರ್ಥಿವೇತನ, ಸನ್ಮಾನ ಮತ್ತು ಪುಸ್ತಕ ವಿತರಣಾ ಸಮಾರಂಭ – 2025

ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಮಂಗಳೂರು – ಉಪಸಂಘ ಹಿರಿಯಡ್ಕದ ಆಶ್ರಯದಲ್ಲಿ ಜೂನ್ 29, 2025 ಭಾನುವಾರ ಗಣಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಿದ್ಯಾರ್ಥಿವೇತನ, ಸನ್ಮಾನ ಮತ್ತು ಪುಸ್ತಕ ವಿತರಣಾ ಸಮಾರಂಭ ಜರುಗಲಿದೆ.