ನಂದಳಿಕೆ ಸಿರಿ ಜಾತ್ರೆಗೂ ಸೆಲ್ಫಿ ಪಾಯಿಂಟ್ ಟಚ್: ಪ್ರಚಾರದಲ್ಲಿ ಸುಹಾಸ್ ಹೆಗ್ಡೆ ಅವರ ಹೊಸ ಆಯಾಮ

Date:

spot_img

ಉಡುಪಿ ಜಿಲ್ಲೆಯ ಬೆಳ್ಮಣ್ ಹತ್ತಿರದ ನಂದಳಿಕೆಯಲ್ಲಿ ನಡೆಯುವ ಮಹಾಲಿಂಗೇಶ್ವರ ದೇವಾಲಯದ ಸಿರಿ ಜಾತ್ರೆ ಪ್ರಚಾರಕ್ಕಾಗಿ ಪ್ರತೀ ವರ್ಷವೂ ವಿಭಿನ್ನ ತಂತ್ರ ಜಾರಿ ಮಾಡುವ ಸುಹಾಸ್ ಹೆಗ್ಡೆ ಅವರು ಈ ಬಾರಿಯೂ ವಿಶಿಷ್ಟ ಕ್ರಮವೊಂದನ್ನು ಅಳವಡಿಸಿದ್ದಾರೆ.

ಏಪ್ರಿಲ್ 12ರಂದು ನಡೆಯಲಿರುವ ಸಿರಿ ಜಾತ್ರೆಗಾಗಿ ಈ ಬಾರಿ “ಸೆಲ್ಸಿ ಪಾಯಿಂಟ್” ಎಂಬ ಆಕರ್ಷಕ ಆಧ್ಯಾತ್ಮ–ಡಿಜಿಟಲ್ ಸಂಯೋಜನೆಯ ಪ್ರಚಾರ ರೂಪುಗೊಂಡಿದೆ. ದೇವಸ್ಥಾನದ ಗೋಪುರದ ಆಕಾರದ ಕಟೌಟ್ ತಯಾರಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ — ಬಸ್ಸು ನಿಲ್ದಾಣ, ಅಂಗಡಿಗಳ ಮುಂಭಾಗ ಸೇರಿದಂತೆ ಜನಸಂಚಾರದ ಪ್ರಮುಖ ಕಡೆಗಳಲ್ಲಿ ಇಡಲಾಗುತ್ತಿದೆ.

ಈ ಕಟೌಟ್ ಮುಂದೆ ನಿಂತು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದವರು ಸ್ಪರ್ಧೆಯಲ್ಲಿ ಭಾಗವಹಿಸುವಂತಿದ್ದು, ಅತ್ಯುತ್ತಮ ಚಿತ್ರಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಸುಹಾಸ್ ಹೆಗ್ಡೆ ತಿಳಿಸಿದ್ದಾರೆ.

ಈ ಹಿಂದೆ ನಂದಳಿಕೆ ಸಿರಿ ಜಾತ್ರೆಯ ಪ್ರಚಾರ ಮೈಲುಗಲ್ಲು, ಭತ್ತದ ಗೋಣಿ, ಹಕ್ಕಿಗಳಿಗೆ ಮಣ್ಣಿನ ಪಾತ್ರೆ, ಅಂಚೆ ಕಾರ್ಡ್, ಕೊಡೆ ಮುಂತಾದ ವಿಶಿಷ್ಟ ರೀತಿಗಳಲ್ಲಿ ನಡೆದಿತ್ತು. ಈ ವರ್ಷ “ಸೆಲ್ಸಿ ಪಾಯಿಂಟ್” ಮೂಲಕ ಹೊಸ ಕಲ್ಪನೆಗೆ ಚಾಲನೆ ನೀಡಲಾಗಿದೆ.

ಪ್ರಚಾರ ಪರಿಕಲ್ಪನೆಯ ರೂವಾರಿ ಸುಹಾಸ್ ಹೆಗ್ಡೆ ಶುಕ್ರವಾರ ಈ ಹೊಸ ತಂತ್ರವನ್ನು ನಂದಳಿಕೆಯಲ್ಲಿ ಬಿಡುಗಡೆ ಮಾಡಿದರು. ಈ ಆಧುನಿಕ ಸೆಲ್ಫಿ ಕಾನ್ಸೆಪ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಿರಿ ಜಾತ್ರೆಯ ಚರ್ಚೆಗೆ ಹೊಸ ರಸಕೊಟ್ಟಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಅಡುಗೆಮನೆಯಲ್ಲೇ ಇದೆ ಮ್ಯಾಜಿಕ್ ಲಿಕ್ವಿಡ್: ಅಕ್ಕಿ ತೊಳೆದ ನೀರನ್ನು ಅಪ್ಪಿತಪ್ಪಿಯೂ ಚೆಲ್ಲಬೇಡಿ

ಅಕ್ಕಿ ತೊಳೆದ ನೀರು ಮತ್ತು ಗಂಜಿ ನೀರಿನಿಂದ ಪಡೆಯಬಹುದಾದ ಅದ್ಭುತ ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ನೀಟ್ ಹಗರಣ: ಸೋನಂ ವಾಂಗ್ಚುಕ್ ಉಪವಾಸ ಅಂತ್ಯಕ್ಕೆ 3 ಷರತ್ತು

ನೀಟ್ ಪತ್ರಿಕೆ ಸೋರಿಕೆ ಖಂಡಿಸಿ ಉಪವಾಸ ನಿರತರಾಗಿರುವ ಸೋನಂ ವಾಂಗ್ಚುಕ್ ಸತ್ಯಾಗ್ರಹ ಅಂತ್ಯಗೊಳಿಸಲು 3 ಪ್ರಮುಖ ಷರತ್ತು ವಿಧಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಆತ್ರಾಡಿ ಶಾಂಭವಿ ಹೋಟೆಲ್ ಆಟಿ ಆಹಾರ ಉತ್ಸವ

ಉಡುಪಿಯ ಶಾಂಭವಿ ಹೋಟೆಲ್‌ನಲ್ಲಿ ಜುಲೈ 24 ರಿಂದ ಸಾಂಪ್ರದಾಯಿಕ 'ಆಟಿ ದ ಒಂಜಿ ಊಟ' ಆಹಾರ ಉತ್ಸವ ಆರಂಭವಾಗಲಿದ್ದು, ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಪರ್ಕಳ ಶಿಶು ಸ್ಪರ್ಧೆ ಮತ್ತು ತಾಯಿ ಮಗುವಿನ ಆರೋಗ್ಯ ಶಿಬಿರ 2026

ಪರ್ಕಳದಲ್ಲಿ ನಡೆದ ತಾಯಿ-ಮಗುವಿನ ಆರೋಗ್ಯ ಮಾಹಿತಿ ಕಾರ್ಯಕ್ರಮ ಹಾಗೂ ಮಕ್ಕಳ ಶಿಶು ಸ್ಪರ್ಧೆ 2026 ರ ಪೂರ್ಣ ಮಾಹಿತಿ ಇಲ್ಲಿದೆ ಓದಿ.