
ಉಡುಪಿ : ಮೂಲತಃ ವೈದಿಕರಾಗಿರುವ ಪಳ್ಳಿ ಗುರುಪ್ರಸಾದ್ ಭಟ್ (ಪಳ್ಳಿ ಪುಟ್ಟಣ್ಣ) ಅವರು, ತಮ್ಮ ಪೌರೋಹಿತ್ಯ ಮತ್ತು ಬ್ರಹ್ಮವಾಹಕರಾಗಿರುವ ವೃತ್ತಿ ಕ್ಷೇತ್ರದಲ್ಲಿನ ಅಪ್ರತಿಮ ಸೇವೆಗಾಗಿ ಕರ್ನಾಟಕ ಸರ್ಕಾರ ಕೊಡಮಾಡುವ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 2025 ಕ್ಕೆ ಭಾಜನರಾಗಿದ್ದಾರೆ.
ಪಳ್ಳಿ ಪುಟ್ಟಣ್ಣ ಅವರು ತುಳುನಾಡು ಹಾಗೂ ರಾಜ್ಯದಾದ್ಯಂತ ಹಲವಾರು ದೇವಾಲಯಗಳಲ್ಲಿ ಬ್ರಹ್ಮವಾಹಕರಾಗಿ ಸೇವೆ ಸಲ್ಲಿಸುವ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರ ಈ ಮಹತ್ವದ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರವು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಅವರ ಈ ಸಾಧನೆಗೆ ಎನ್.ಪಿ. ಗ್ರೂಪ್ಸ್ನ ಚೇರ್ ಮೆನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ (Chairman and Managing Director) ವಾಸುದೇವ್ ಭಟ್ ನೆಕ್ಕರಪಲ್ಕೆ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.



































