
ಉಡುಪಿ : ಮೂಡುಬೆಟ್ಟು ಶ್ರೀ ಕೃಷ್ಣ ವೃದ್ಧರ ಆಶ್ರಯ ಧಾಮದಲ್ಲಿ ವಯೋವೃದ್ಧರ ಸಮ್ಮುಖದಲ್ಲಿ ತುಳಸಿ ಪೂಜೆ ಹಾಗೂ ತುಳಸಿ ಸಂಕೀರ್ತನೆ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ಆಶ್ರಯ ಧಾಮದ ವಯೋವೃದ್ಧರ ಭಾಗವಹಿಸುವಿಕೆಯಿಂದ ಈ ಧಾರ್ಮಿಕ ಕಾರ್ಯಕ್ರಮಕ್ಕೆ ವಿಶೇಷ ಕಳೆ ಬಂದಿತ್ತು.

ಈ ತುಳಸಿ ಸಂಕೀರ್ತನೆಯನ್ನು ಕೊರಂಗ್ರಪಾಡಿ ಪಾವನ ಪರಿಷತ್ತಿನ ಸದಸ್ಯರು ಅತ್ಯಂತ ಭಕ್ತಿಪೂರ್ವಕವಾಗಿ ಮತ್ತು ವಿಜೃಂಭಣೆಯಿಂದ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ, ಸಂಸ್ಥೆಯ ಸ್ಥಾಪಕರಾದ ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯರವರು ಅವರು ಪಾವನ ಪರಿಷತ್ತಿನ ಸದಸ್ಯರಿಗೆ ಗೌರವ ಸ್ಮರಣಿಕೆಯನ್ನು ನೀಡಿ, ಅವರ ಧಾರ್ಮಿಕ ಸೇವೆಗಾಗಿ ಹೃತ್ಪೂರ್ವಕವಾಗಿ ಅಭಿನಂದಿಸಿದರು. ವೃದ್ಧರ ಆಶ್ರಯ ಧಾಮದಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಹಿರಿಯರಿಗೆ ಸಂತಸ ಮತ್ತು ನೆಮ್ಮದಿಯನ್ನು ನೀಡುತ್ತವೆ.



































