
ಹೊಸ್ಮಾರು: ಹೊಸ್ಮಾರು ಇಲ್ಲಿನ ಕುಲಾಲ ಸಮಾಜ ಕಲ್ಯಾಣ ಸಂಘದ ಸಮುದಾಯ ಭವನ ನಿರ್ಮಾಣ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಆರ್ಥಿಕ ನೆರವಿನ ಹಸ್ತ ಚಾಚಲಾಗಿದೆ. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಮುದಾಯ ಭವನ ಯೋಜನೆಯಡಿ ಮಂಜೂರು ಮಾಡಿರುವ 2 ಲಕ್ಷ ರೂಪಾಯಿ ಮೊತ್ತದ ಅನುದಾನದ ಪತ್ರವನ್ನು ಇಂದು ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಈ ಪತ್ರವನ್ನು ಕುಲಾಲ ಸಂಘದ ಅಧ್ಯಕ್ಷರಾದ ಶ್ರೀ ಪ್ರಮೋದ್ ಕುಲಾಲ್ ಇವರಿಗೆ ಇಂದು ತಾಲೂಕು ಯೋಜನಾಧಿಕಾರಿಯಾದ ಶ್ರೀ ಬಾಲಕೃಷ್ಣ ಹಿರಿಂಜ ಇವರು ಹಸ್ತಾಂತಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ವಲಯಾಧ್ಯಕ್ಷರಾದ ಶ್ರೀ ನೋನು, ವಲಯ ಮೇಲ್ವಿಚಾರಕರಾದ ಶ್ರೀ ಗಿರೀಶ್ ಕೆ ಎಲ್ ಹಾಗೂ ಸೇವಾ ಪ್ರತಿನಿಧಿಯಾದ ಶ್ರೀಮತಿ ಮಲ್ಲಿಕಾ ಮತ್ತು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವಿನುತಾ ಆಚಾರ್ಯ ಹಾಗೂ ಯೋಜನೆಯ ಒಕ್ಕೂಟದ ಮಾಜಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಕುಲಾಲ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷರು ಮತ್ತು ಸಂಘದ ಗೌರವಾಧ್ಯಕ್ಷರು , ಮಹಿಳಾ ಘಟಕದ ಸದಸ್ಯರು, ಪದಾಧಿಕಾರಿಗಳು ಸದಸ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಈ ಕಾರ್ಯಕ್ರಮವನ್ನು ಶ್ರೀ ಗಿರೀಶ್ ಕೆ ಎಲ್ ಸ್ವಾಗತಿಸಿದರು. ಶ್ರೀಮತಿ ಮಲ್ಲಿಕಾರವರು ಧನ್ಯವಾದ ನೀಡಿದರು.



































