
ಹಿರಿಯಡಕ : 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡ 99.04% (619/625) ಪಡೆದು ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕಕ್ಕೆ ಪ್ರಥಮ ಸ್ಥಾನ ಪಡೆದ ಬೆಳ್ಳರ್ಪಾಡಿಯ ದಯಾನಂದ ನಾಯಕ್ ಮತ್ತು ದಿವ್ಯ ನಾಯಕ್ ರವರ ಪುತ್ರಿ ಕುಮಾರಿ ಅನನ್ಯರವರನ್ನು ಶಾಲಾಭಿವೃದ್ಧಿ ಸಮಿತಿ ಹಾಗೂ ಶಾಲೆಯ ಶಿಕ್ಷಕ ವೃಂದದ ಪರವಾಗಿ ಮನೆಗೆ ತೆರಳಿ ಗೌರವ ಸನ್ಮಾನ ಮಾಡಲಾಯಿತು.
ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಬಿ. ಎಲ್. ವಿಶ್ವಾಸ್ ಭಟ್, ಉಪ ಪ್ರಾಂಶುಪಾಲರಾದ ಪ್ರಕಾಶ್ ಪ್ರಭು, ಶಿಕ್ಷಕರಾದ ವಿಜಯ್, ರವೀಂದ್ರ ಪ್ರಭು, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ವಿಜೇತ್ ಕುಮಾರ್, ಜ್ಯೋತಿ ಪ್ರಭು, ಸ್ಥಳೀಯ ಮಾಜಿ ಪಂಚಾಯತ್ ಸದಸ್ಯರಾದ ರಾಧಾಕೃಷ್ಣ ಪ್ರಭು, ಅನನ್ಯಳ ಪೋಷಕರು ಮತ್ತು ಸಂಬಂಧಿಕರು ಉಪಸ್ಥಿತರಿದ್ದರು.