
ಉಡುಪಿ: ಹೆಬ್ರಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಪಿ.ಆರ್.ಎನ್. ಅಮೃತಭಾರತಿ ವಿದ್ಯಾಲಯದ ವಿದ್ಯಾರ್ಥಿಗಳು 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದ್ದಾರೆ. ಈ ಬಾರಿ ಪರೀಕ್ಷೆಗೆ ಹಾಜರಾಗಿದ್ದ ಎಲ್ಲಾ 100 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುವ ಮೂಲಕ ಶಾಲೆಗೆ ನೂರಕ್ಕೆ ನೂರು ಫಲಿತಾಂಶದ ಗರಿ ಲಭಿಸಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅತ್ಯುನ್ನತ ಸಾಧನೆ ಮಾಡುವ ಮೂಲಕ ಜಿಲ್ಲೆಯ ಗಮನ ಸೆಳೆದಿದ್ದಾರೆ. ಶಾಲೆಯ ಶಿಸ್ತುಬದ್ಧ ಬೋಧನೆ ಹಾಗೂ ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಈ ಐತಿಹಾಸಿಕ ಸಾಧನೆಗೆ ಪ್ರಮುಖ ಕಾರಣವಾಗಿದೆ. ಲಾವಣ್ಯ ಹೆಚ್ ವಿ ಅವರು 625ಕ್ಕೆ 612 ಅಂಕಗಳನ್ನು ಗಳಿಸಿ ಶಾಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಪರೀಕ್ಷಾ ಫಲಿತಾಂಶದ ಮುಖ್ಯಾಂಶಗಳು:
- ಒಟ್ಟು ಫಲಿತಾಂಶ: ಶೇಕಡಾ 100ರಷ್ಟು ಸಾಧನೆ.
- ಟಾಪರ್ಗಳು: ಲಾವಣ್ಯ ಹೆಚ್ ವಿ (612 ಅಂಕ), ಕೆ ಸೃಜನ್ ಭಟ್ (610 ಅಂಕ), ಪ್ರಣಮ್ಯ ಕೆ (606 ಅಂಕ), ಶ್ರಾವ್ಯ ಹೆಗ್ಡೆ (605 ಅಂಕ). ಯತೀಶ್ ಶೆಟ್ಟಿ(601 ಅಂಕ)
- ಭಾಷಾವಾರು ಸಾಧನೆ: ಸಂಸ್ಕೃತದಲ್ಲಿ 10, ಕನ್ನಡದಲ್ಲಿ 1, ಇಂಗ್ಲಿಷ್ನಲ್ಲಿ 2, ಹಿಂದಿಯಲ್ಲಿ 1 ಹಾಗೂ ತೃತೀಯ ಭಾಷೆ ಕನ್ನಡದಲ್ಲಿ 6 ವಿದ್ಯಾರ್ಥಿಗಳು ಪೂರ್ಣ ಅಂಕ (Out of Out) ಗಳಿಸಿದ್ದಾರೆ.
- ಶ್ರೇಣಿಗಳು: 38 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ (Distinction) ಹಾಗೂ 56 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಹೆಬ್ರಿಯ ಅಮೃತಭಾರತಿ ವಿದ್ಯಾಲಯದ ಈ ಗಮನಾರ್ಹ ಸಾಧನೆಯನ್ನು ಅಮೃತ ಭಾರತಿ ಟ್ರಸ್ಟ್ನ ಪ್ರಮುಖರು ಶ್ಲಾಘಿಸಿದ್ದಾರೆ. ಅಧ್ಯಕ್ಷರಾದ ಸಿಎ ಎಂ. ರವಿರಾವ್, ಕಾರ್ಯದರ್ಶಿ ಹೆಚ್. ಗುರುದಾಸ್ ಶೆಣೈ ಹಾಗೂ ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ ಅವರು ವಿದ್ಯಾರ್ಥಿಗಳ ಶ್ರಮವನ್ನು ಕೊಂಡಾಡಿದ್ದಾರೆ. ಮುಖ್ಯೋಪಾಧ್ಯಾಯಿನಿ ಅಪರ್ಣಾ ಆಚಾರ್ ಮತ್ತು ಶಿಕ್ಷಕ ವೃಂದದ ಮಾರ್ಗದರ್ಶನದಿಂದಾಗಿ ಈ ಮಟ್ಟದ ಫಲಿತಾಂಶ ಸಾಧ್ಯವಾಗಿದೆ ಎಂದು ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.








































