spot_img

ಪುತ್ತಿಗೆ ಮಠದಲ್ಲಿ ಗುರುಪೂರ್ಣಿಮಾ ಸಂಭ್ರಮ: ಶ್ರೀಪಾದದ್ವಯರಿಗೆ ಭವ್ಯ ಗುರುವಂದನೆ

Date:

spot_img

ಉಡುಪಿ : ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ, ಉಡುಪಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕೇಂದ್ರ ಸಮಿತಿ, ಧರ್ಮಸ್ಥಳ ಇವರ ಸಹಯೋಗದೊಂದಿಗೆ ಗುರುಪೂರ್ಣಿಮಾ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿವರ್ಯರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರಿಗೆ ಭವ್ಯ ಗುರುವಂದನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ, ವೇದಿಕೆಯಲ್ಲಿ ವಿಶೇಷ ಆಸನವನ್ನು ಸಿದ್ಧಪಡಿಸಿ, ಅದರ ಮೇಲೆ ಶ್ರೀಪಾದದ್ವಯರನ್ನು ಕುಳ್ಳಿರಿಸಿ, ಪೇಟ ತೊಡಿಸಿ, ಪುಷ್ಪಾರ್ಚನೆಯೊಂದಿಗೆ ಗೌರವಪೂರ್ವಕವಾಗಿ ವಂದಿಸಲಾಯಿತು. ಭಕ್ತರು ಶ್ರೀಪಾದದ್ವಯರಿಂದ ಆಶೀರ್ವಾದವನ್ನು ಪಡೆದರು.

ಕಾರ್ಯಕ್ರಮದ ಭಾಗವಾಗಿ, ವಿದುಷಿ ಪರಿಮಳ ಅವರಿಂದ ಭಜನಾ ಕಮ್ಮಟವನ್ನು ಆಯೋಜಿಸಲಾಗಿತ್ತು. ನಂತರ, ವಿದುಷಿ ಉಷಾ ಹೆಬ್ಬಾರ್ ಅವರ ನೇತೃತ್ವದಲ್ಲಿ ಭಜನಾನೃತ್ಯ ಕಾರ್ಯಕ್ರಮ ಹಾಗೂ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ನೆರೆದವರ ಗಮನ ಸೆಳೆದವು. ಭಕ್ತಿಪೂರ್ವಕ ಭಜನೆಗಳು ಮತ್ತು ನೃತ್ಯ ಪ್ರದರ್ಶನಗಳು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದವು.

ಅಂತಿಮವಾಗಿ, ಶ್ರೀಪಾದರು ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು, ಆಧ್ಯಾತ್ಮಿಕ ಚಿಂತನೆಗಳು ಮತ್ತು ಗುರುಗಳ ಮಹತ್ವದ ಕುರಿತು ಭೋಧನೆಗಳನ್ನು ನೀಡಿದರು. ಈ ಕಾರ್ಯಕ್ರಮವು ಗುರುಭಕ್ತಿ ಮತ್ತು ಸಂಸ್ಕೃತಿಯ ಸಮ್ಮಿಲನಕ್ಕೆ ಸಾಕ್ಷಿಯಾಯಿತು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಡುಪಿ: ಭಾರಿ ಮಳೆ ಹಿನ್ನೆಲೆ, ಜುಲೈ 17ರಂದು ಶಾಲಾ-ಅಂಗನವಾಡಿಗಳಿಗೆ ರಜೆ ಘೋಷಣೆ

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯು ಜನಜೀವನಕ್ಕೆ ಅಡ್ಡಿಯಾಗುತ್ತಿದ್ದು, ಮುಂಗಾರು ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ.

NVIDIAಗೆ ಬ್ರಾಡ್‌ಕಾಮ್ ಸವಾಲು: ಹೊಸ ಟೊಮಾಹಾಕ್ ಅಲ್ಟ್ರಾ ನೆಟ್‌ವರ್ಕಿಂಗ್ ಚಿಪ್ ಬಿಡುಗಡೆ

ಬ್ರಾಡ್‌ಕಾಮ್ಸ್ (AVGO.O), ಮಂಗಳವಾರ ಹೊಸ ಟ್ಯಾಬ್ ಚಿಪ್ ಘಟಕವನ್ನು ಅನಾವರಣಗೊಳಿಸಿದೆ, ಇದು ಕೃತಕ ಬುದ್ಧಿಮತ್ತೆ ಡೇಟಾ ಕ್ರಂಚಿಂಗ್ ಅನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ ಹೊಸ ನೆಟ್‌ವರ್ಕಿಂಗ್ ಪ್ರೊಸೆಸರ್ ಆಗಿದೆ

ಕಿವಿ ಹಣ್ಣು: ಆರೋಗ್ಯದ ಅಮೃತ, ತಪ್ಪದೇ ಸೇವಿಸಿ!!

ಕಿವಿ ಹಣ್ಣು, ಚೀನಾದ ಮಣ್ಣಿನಿಂದ ಹುಟ್ಟಿ, ನ್ಯೂಜಿಲೆಂಡ್‌ನಲ್ಲಿ ಜಾಗತಿಕವಾಗಿ ಬೆಳೆದು ನಿಂತಿರುವ ಒಂದು ಪುಟ್ಟ ಪೌಷ್ಟಿಕ ನಿಧಿ

ನೀರೆ ಗ್ರಾಮದಲ್ಲಿ ಪೊಲೀಸ್ ಜಾಗೃತಿ ಸಭೆ: ಸೈಬರ್ ಕ್ರೈಂ, 112 ಸಹಾಯವಾಣಿ ಬಗ್ಗೆ ಮಾಹಿತಿ ನೀಡಿದ ಉಮೇಶ್ ನಾಯಕ್

ಕಾರ್ಕಳ ನಗರ ಪೊಲೀಸ್ ಠಾಣೆಯ ಮುಖ್ಯ ಆರಕ್ಷಕರಾದ (ಹೆಡ್ ಕಾನ್‌ಸ್ಟೇಬಲ್) ಉಮೇಶ್ ನಾಯಕ್ ಅವರು ನೀರೆ ಗ್ರಾಮದ ಬೀಟ್ ಪೊಲೀಸ್ ಆಗಿ, ಹಗಲು ಗ್ರಾಮ ಗಸ್ತು ಸಮಯದಲ್ಲಿ ಮಹತ್ವದ ಕಾರ್ಯಕ್ರಮವೊಂದನ್ನು ನಡೆಸಿದರು.