
ಉಡುಪಿ : ಶ್ರೀ ಕೃಷ್ಣ ವೃದ್ದಾಶ್ರಮ ಕೊಡವೂರು ಈ ಬಾರಿ ಪ್ರಥಮ ಬಾರಿಗೆ ಉಡುಪಿಯ ಶ್ರೀ ರಾಘವೇಂದ್ರ ಮಠದ ಮುಂಭಾಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಕೃಷ್ಣ ಲೀಲೋತ್ಸವದ ಈ ಶುಭ ಸಂದರ್ಭದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಸಹಯೋಗದೊಂದಿಗೆ ಶ್ರೀಕೃಷ್ಣನ ಲೀಲೋತ್ಸವದಲ್ಲಿ ಭಾಗವಹಿಸುವ ಭಕ್ತರಿಗಾಗಿ ಮಧ್ಯಾಹ್ನ 12 ಗಂಟೆಯಿಂದ ಉಚಿತ ಮಜ್ಜಿಗೆ ಸೇವೆಯನ್ನು ವಿತರಿಸಲಾಯಿತು.
ಈ ಕಾರ್ಯಕ್ರಮವನ್ನು ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಉದ್ಘಾಟಿಸಿ ಆಶೀರ್ವದಿಸಿದರು. ಸುಮಾರು 3000 ಜನ ಶ್ರೀಕೃಷ್ಣನ ಭಕ್ತರು ಇದರ ಪ್ರಯೋಜನವನ್ನು ಪಡೆದುಕೊಂಡರು. ಈ ಒಂದು ಕಾರ್ಯಕ್ರಮದಲ್ಲಿ ಸಂಪೂರ್ಣ ಸಹಕಾರ ನೀಡಿದ ಸಂಸ್ಥೆಯ ಹಿತೈಷಿಗಳಾಗಿರುವ ರವಿಪ್ರಕಾಶ್ ಭಟ್, ವೈ ಮಂಜುನಾಥ ರಾವ್ , ನಯನ ನಂದಕುಮಾರ್ ತಂತ್ರಿ , ಕನಕಲತ , ರಮೇಶ್ ಭಟ್, ಗೋಪಾಲಕೃಷ್ಣ ಹೆಬ್ಬಾರ್ , ಸುರೇಶ್ ಉಪಾಧ್ಯಾಯ , ರಾಘವೇಂದ್ರ ಮಠದ ಜಯತೀರ್ಥ ಆಚಾರ್ಯರು ಸಹಕರಿಸಿದರು. ಹಾಗೂ ಸಂಸ್ಥೆಯ ಸ್ಥಾಪಕ ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯ ಅವರೆಲ್ಲರನ್ನೂ ಅಭಿನಂದಿಸಿದರು.
































