spot_img

ಮರ್ಯಾದೆಗಾಗಿ ಮಗಳನ್ನು ಹತ್ಯೆಗೈದು ನದಿಗೆ ಎಸೆದ ತಂದೆ: 7 ತಿಂಗಳ ಬಳಿಕ ಭೀಕರ ಪ್ರಕರಣ ಬಹಿರಂಗ

Date:

spot_img

ಲಿಂಗಸುಗೂರು: ‘ಮರ್ಯಾದೆ’ ಹೆಸರಿನಲ್ಲಿ ಅಪ್ರಾಪ್ತ ಮಗಳನ್ನು ಹತ್ಯೆಗೈದು ಕೃಷ್ಣಾ ನದಿಗೆ ಎಸೆದ ಹೃದಯ ವಿದ್ರಾವಕ ಘಟನೆ ಏಳು ತಿಂಗಳ ನಂತರ ಬೆಳಕಿಗೆ ಬಂದಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಂಚಿನಾಳ ಗ್ರಾಮದ ಲಕ್ಕಪ್ಪ ಕಂಬಳಿ ಎಂಬುವವರ ಈ ಕೃತ್ಯವು ಇದೀಗ ಬೆಳಕಿಗೆ ಬಂದಿದೆ.

ಅಪ್ರಾಪ್ತ ಮಗಳು ರೇಣುಕಾ (17) ತನ್ನ ಗ್ರಾಮದ ಹನುಮಂತ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಸಂಬಂಧ ತಡೆದು ನಿಲ್ಲಿಸಲು ವಿಫಲವಾದ ಲಕ್ಕಪ್ಪ, ಆಕ್ರೋಶದಿಂದ ದಾಳಿಂಬೆ ತೋಟದಲ್ಲಿ ಮಗಳನ್ನು ಬಲವಾಗಿ ಹೊಡೆದು ಹತ್ಯೆಗೈದು, ನಂತರ ಶವವನ್ನು ಬೈಕ್‌ನಲ್ಲಿ ತಂದು ಕೃಷ್ಣಾ ನದಿಗೆ ಎಸೆದಿದ್ದಾನೆ.

ಪೋಕ್ಸೋ ಪ್ರಕರಣ ವಿಚಾರಣೆಯ ವೇಳೆ ನ್ಯಾಯಾಧೀಶರು ರೇಣುಕಾ ಹಾಜರಾತಿಯನ್ನು ಕೇಳಿದಾಗ, ಪ್ರಕರಣ ಮರು ಬೆಳಕಿಗೆ ಬಂದಿದೆ. ತನಿಖೆಯ ನಂತರ ಲಕ್ಕಪ್ಪನನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

‘ಶೆಟ್ಟಿ ಗ್ಯಾಂಗ್’ ಎಂಬ ಹಣೆಪಟ್ಟಿಗೆ ರಾಜ್ ಬಿ.ಶೆಟ್ಟಿ ಖಡಕ್ ಉತ್ತರ

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಬಿ. ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಅವರಂತಹ ಕಲಾವಿದರು ವಿಭಿನ್ನ ಶೈಲಿಯ ಸಿನಿಮಾಗಳ ಮೂಲಕ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದಾರೆ. ಈ ತಂಡವನ್ನು ಕೆಲವರು ‘ಶೆಟ್ಟಿ ಮಾಫಿಯಾ’ ಅಥವಾ ‘ಶೆಟ್ಟಿ ಗ್ಯಾಂಗ್’ ಎಂದು ಕರೆಯುತ್ತಿದ್ದು, ಈ ಬಗ್ಗೆ ನಟ ಮತ್ತು ನಿರ್ದೇಶಕ ರಾಜ್ ಬಿ. ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧರ್ಮಸ್ಥಳ ಪ್ರಕರಣ : ವಿಚಾರಣೆ ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಲು ನ್ಯಾಯಾಧೀಶರ ಮನವಿ!

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಬಂಧಕಾಜ್ಞೆ ಕೋರಿ ಸಲ್ಲಿಸಲಾದ ದಾವೆ ವಿಚಾರಣೆಯಿಂದ ನ್ಯಾಯಾಧೀಶ ವಿಜಯ್‌ ಕುಮಾರ್‌ ರೈ ಅವರು ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ.

ಧರ್ಮಸ್ಥಳ ಸಮಾಧಿ ಪ್ರಕರಣ: ಸತ್ಯಶೋಧನೆಗೆ ದಿನಕ್ಕೆ ₹1.5 ಲಕ್ಷ ಖರ್ಚು, SIT ಯಿಂದ ಬೃಹತ್ ಕಾರ್ಯಾಚರಣೆ!

ಧರ್ಮಸ್ಥಳ ಗ್ರಾಮದಲ್ಲಿ ಹೂತುಹೋಗಿದೆ ಎನ್ನಲಾದ ನೂರಾರು ಶವಗಳ ರಹಸ್ಯವನ್ನು ಭೇದಿಸಲು ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (SIT) ನಡೆಸುತ್ತಿರುವ ಕಾರ್ಯಾಚರಣೆಗೆ ಪ್ರತಿದಿನ ಬರೋಬ್ಬರಿ ₹1.5 ಲಕ್ಷ ರೂಪಾಯಿಗಳು ಖರ್ಚಾಗುತ್ತಿದೆ.

ದಿನ ವಿಶೇಷ – ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ

ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾದ ದಿನ ಆಗಸ್ಟ್ 5, 2020. ಈ ದಿನ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಶಂಕುಸ್ಥಾಪನೆ ನೆರವೇರಿಸಲಾಯಿತು