spot_img

ಅಪರೂಪದ ಹೃದಯ ರೋಗದಿಂದ ಬಳಲುತ್ತಿದ್ದ ಗರ್ಭಿಣಿಗೆ ಯಶಸ್ವಿ ಚಿಕಿತ್ಸೆ ನೀಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು

Date:

spot_img
spot_img

ಕಲಬುರ್ಗಿ: 31 ವರ್ಷ ವಯಸ್ಸಿನ ಲಕ್ಷ್ಮಿ ಎಂಬ ಮಹಿಳೆಯು ಅಪರೂಪದ ಹೃದಯ ರೋಗದಿಂದ ಬಳಲುತ್ತಿದ್ದಳು. ಚಿಕಿತ್ಸೆಗಾಗಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಳು. ಜೀವಕ್ಕೆ ಅಪಾಯಕಾರಿಯಾದ ಅಪರೂಪದ ಹೃದಯ ಸಂಬಂಧಿ ಕಾಯಿಲೆ ಸಮಸ್ಯೆಯಿಂದ ಬಳಲುತ್ತಿದ್ದ ಈಕೆಗೆ 8 ತಿಂಗಳು ಗರ್ಭಿಣಿಯಾಗಿರುವಾಗ ಇವಳಿಗೆ ಆಂಟಿ ಪಾರ್ಟಂ ಎಕ್ಲಾಂಪ್ಸಿಯಾ ತೊಂದರೆಯಿದೆ ಎಂದು ಗುರುತಿಸಿ ತಕ್ಷಣವೆ ಆಸ್ಪತ್ರೆಯಲ್ಲಿ ಇಂಟ್ಯುಬೇಷನ್ ಮಾಡಿ ಆಂಟಿ ಹೈಪರ್ ಟೆನ್ಸಿವ್ ಗಳಿಂದ ಚಿಕಿತ್ಸೆ ನೀಡಲಾಯಿತು ಆದರೆ ಅವಳಿಗೆ ಗರ್ಭಾವಸ್ಥೆಯ ಮಧುಮೇಹ ( Gestational Diabetes), ಮತ್ತು ಹೈಪೋಥೈರಾಯಿಡಿಸಂ ಹಾಗೂ HBsag ಪಾಸಿಟಿವ್ ಇರುವುದು ಕಂಡು ಬಂತು. ಗರ್ಭಿಣಿಯ ಜೀವ ಉಳಿಸುವ ಸಲುವಾಗಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅವಳಿಗೆ ಅವಳಿ ಎರಡು ಹೆಣ್ಣು ಮಕ್ಕಳು ಜನಿಸಿದವು ಶಸ್ತ್ರ ಚಿಕಿತ್ಸೆ ಸುಗಮವಾಗಿ ನಡೆದು ಮಕ್ಕಳು ಸಹ ಸುರಕ್ಷಿತವಾಗಿದ್ದವು ಆದರೆ ಗರ್ಭಿಣಿಗೆ ಟಕೋಟ್ಸುಬೋ ಕಾರ್ಡಿಯೋಮ್ಯೋಪತಿ ( Takotsubo cardiomyopathy) ಎಂಬ ಅಪರೂಪದ ಹೃದಯರೋಗ ತಗುಲಿ ಕೊಂಡಿತು. ಇದರಲ್ಲಿ ಹೃದಯದ ಇಜೇಕ್ಷನ್ ಫ್ರಾಕ್ಷನ್ ಕೇವಲ ಪ್ರತಿಶತ 40 ಇತ್ತು. ತಕ್ಷಣ ಎಂ ಆರ್ ಐ ಮಾಡಲು ನಿರ್ಧರಿಸಲಾಯಿತು. ಪರೀಕ್ಷೆಯಲ್ಲಿ ಆ ಹೆಣ್ಣು ಮಗಳಿಗೆ ಪೋಸ್ಟೀರಿಯರ್ ರಿವರ್ಸಿಬಲ್ ಎನ್ಸೆಫಲೋಪತಿ ಸಿಂಡ್ರೋಮ್ (PRES) ಲಕ್ಷಣಗಳು ಕಂಡು ಬಂದವು. ಇದನ್ನು ಗಮನಿಸಿದ ಆಸ್ಪತ್ರೆಯ ನುರಿತ ವೈದ್ಯರ ತಂಡ ತಕ್ಷಣ ಚಿಕಿತ್ಸೆ ಮುಂದುವರಿಸಿತು ಕೂಡಲೆ ಚಿಕಿತ್ಸೆಗೆ ಸ್ಪಂದಿಸಿದ ಆ ರೋಗಿಗೆ ಶಸ್ತ್ರಚಿಕಿತ್ಸಯ ಎರಡನೆಯ ದಿನವೆ ಎಕ್ಸ್ಟ್ಯಬೇಟ್ ಮಾಡಿ ಚಿಕಿತ್ಸೆ ಮುಂದುವರಿಸಿದಾಗ ಅವಳ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದಿತು. ಐದನೆಯ ದಿನ ಅವಳನ್ನು ಪರೀಕ್ಷೆಗೆ ಒಳಪಡಿಸಿದಾಗ ಎಕೋಕಾರ್ಡಿಯೋಗ್ರಾಂ ಪರೀಕ್ಷೆಯಲ್ಲಿ ಹೃದಯದ ಸಾಮರ್ಥ್ಯ ಅತ್ಯುತ್ತಮವಾಗಿರುವದು ದೃಢಪಟ್ಟಿದ್ದು ಅವಳು ಅಪಾಯದಿಂದ ಪಾರಾಗಿದ್ದರಿಂದ ಅವಳಿಗೆ ನಿರಂತರ ಚಿಕಿತ್ಸೆ ನೀಡಿದ ವೈದ್ಯಕೀಯ ತಂಡಕ್ಕೆ ಸಂತೋಷವಾಯಿತು.

ಈ ಗರ್ಭಿಣಿ ಮಹಿಳೆಗೆ ಚಿಕಿತ್ಸೆ ನೀಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯರ ತಂಡದಲ್ಲಿ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ಡಾ ಮೀನಾಕ್ಷಿ ದೇವರಮನಿ ನೇತ್ರತ್ವ ವಹಿಸಿದ್ದರು. ಹಿರಿಯ‌ ತಜ್ಞ ವೈದ್ಯರಾದ ಡಾ ನೀತಾ ಹರವಾಳ, ಡಾ ಭಾಗ್ಯಶ್ರೀ ಪಾಟೀಲ್, ಡಾ ಸಂಜನಾ ಪಾಟೀಲ್, ಡಾ ಪೂಜಾ ಪಾಟೀಲ್ , ಹೃದಯ ರೋಗ ತಜ್ಞರಾದ ಡಾ ಈರಣ್ಣ ಹೀರಾಪೂರ, ಡಾ ಸೋಹೈಲ್, ಡಾ ವಿಕಾಸ ಜೋಶಿ , ಡಾ ಮಂಜುಶ್ರೀ ಅವರ ಜೊತೆ ಸ್ನಾತಕೋತ್ತರ ಪದವಿ ವೈದ್ಯರಾದ ಡಾ ಮೇರಿ, ಆಶಾ ಡಿ , ಡಾ ಅನುಪಮಾ ಎವಳೆ, ಹಾಗೂ ಡಾ ಅನುಶ್ರೀ ಸಹ ಸಕ್ರಿಯವಾಗಿ ಪಾಲ್ಗೊಂಡಿದ್ದರು. ತಾಯಿ ಮತ್ತು ಮಕ್ಕಳ ಸುರಕ್ಷತೆಗೆ ಶ್ರಮಿಸಿದ ವೈದ್ಯರ ತಂಡಕ್ಕೆ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಆಸ್ಪತ್ರೆಯ ಸಂಚಾಲಕರಾದ ಡಾ ಕಿರಣ್ ದೇಶಮುಖ್, ವೈದ್ಯಕೀಯ ಅಧಿಕ್ಷಕರಾದ ಡಾ ಮಲ್ಲಿಕಾರ್ಜುನ ತೇಗನೂರ ಅಭಿನಂದನೆ ಸಲ್ಲಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಈ ವಾರ ಬಿಡುಗಡೆಗೆ ಸಿದ್ಧವಾಗಿವೆ 3 ನೂತನ ಆಪಲ್ ಉತ್ಪನ್ನಗಳು; ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ!

ಬಹುನಿರೀಕ್ಷಿತ ನೂತನ ಆಪಲ್ ಸಾಧನಗಳಿಗಾಗಿ ಹೆಚ್ಚು ಸಮಯ ಕಾಯಬೇಕಾಗಿಲ್ಲ. ಆಪಲ್ ಕಂಪನಿಯು ಈ ವಾರ ತನ್ನ 3 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟೆ ಇನ್ನಿಲ್ಲ

ಉತ್ತರ ಕರ್ನಾಟಕದ ಖ್ಯಾತ ರಂಗಭೂಮಿ ಕಲಾವಿದ ಮತ್ತು ಚಲನಚಿತ್ರ ಹಾಸ್ಯನಟ, ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದ ರಾಜು ತಾಳಿಕೋಟೆ (61) ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಆರ್.ಎಸ್.ಎಸ್. ಹೆಸರನ್ನು ಜಪಿಸುತ್ತಿರುವ ಪ್ರಿಯಾಂಕ್ ಖರ್ಗೆ ವರ್ತನೆ ಹಾಸ್ಯಾಸ್ಪದ: ಕುತ್ಯಾರು ನವೀನ್ ಶೆಟ್ಟಿ

ವಿಶ್ವದ ಅತಿ ದೊಡ್ಡ ಸೇವಾ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರನ್ನು ಪದೇ ಪದೇ ಜಪಿಸುತ್ತಾ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಪ್ರಿಯಾಂಕ ಖರ್ಗೆ ವರ್ತನೆ ಹಾಸ್ಯಸ್ಪದ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.

ದಿನ ವಿಶೇಷ –ವಿಶ್ವ ಮಾನದಂಡಗಳ ದಿನ

ವಿಶ್ವ ಮಾನದಂಡಗಳ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 14 ರಂದು ಆಚರಿಸಲಾಗುತ್ತದೆ.