spot_img

ಇಸ್ರೇಲ್‌ಗೆ ಡೇಟಾ ಸೋರಿಕೆ ಶಂಕೆ: ಜನರಿಗೆ ವಾಟ್ಸಾಪ್ ಅನ್‌ಇನ್‌ಸ್ಟಾಲ್ ಮಾಡಲು ಸೂಚಿಸಿದ ಇರಾನ್

Date:

ಟೆಹರಾನ್: ವಾಟ್ಸಾಪ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಇಸ್ರೇಲ್‌ಗೆ ಸೋರಿಸುತ್ತಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ, ಇರಾನಿನ ಸರ್ಕಾರಿ ದೂರದರ್ಶನವು ದೇಶದ ನಾಗರಿಕರಿಗೆ ವಾಟ್ಸಾಪ್ ಅನ್ನು ತಮ್ಮ ಮೊಬೈಲ್‌ಗಳಿಂದ ಡಿಲೀಟ್ ಮಾಡಿಕೊಳ್ಳುವಂತೆ ಮಂಗಳವಾರ ಎಚ್ಚರಿಕೆ ನೀಡಿದೆ. ಈ ಆರೋಪಗಳಿಗೆ ಯಾವುದೇ ದೃಢ ಪುರಾವೆಗಳನ್ನು ಸರಕಾರ ಒದಗಿಸಿಲ್ಲ.

ವಾಟ್ಸಾಪ್ ಪರವಾಗಿ ಪ್ರತಿಕ್ರಿಯಿಸಿದ ಮೆಟಾ ಕಂಪನಿಯು, ತಮ್ಮ ಸೇವೆ ಸಂಪೂರ್ಣವಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿದೆ ಮತ್ತು ಸರ್ಕಾರಗಳೂ ಸೇರಿದಂತೆ ಯಾರಿಗೂ ಬಳಕೆದಾರರ ಸಂದೇಶಗಳನ್ನು ನೋಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. “ನಾವು ಯಾರು ಯಾರಿಗೆ ಸಂದೇಶ ಕಳುಹಿಸುತ್ತಿದ್ದಾರೆ ಎಂಬ ಲಾಗ್‌ಗಳನ್ನು ಇಟ್ಟುಕೊಳ್ಳುವುದಿಲ್ಲ. ನಾವು ನಿಮ್ಮ ಸ್ಥಳ ಮಾಹಿತಿಯನ್ನು ಟ್ರ್ಯಾಕ್ ಮಾಡುವುದಿಲ್ಲ ಮತ್ತು ಯಾವುದೇ ಸರ್ಕಾರಕ್ಕೂ ಈ ಮಾಹಿತಿ ಹಂಚುವುದಿಲ್ಲ” ಎಂದು ವಾಟ್ಸಾಪ್ ಹೇಳಿಕೊಂಡಿದೆ.

ಕಾರ್ನೆಲ್ ವಿಶ್ವವಿದ್ಯಾಲಯದ ಸೈಬರ್ ಭದ್ರತಾ ತಜ್ಞ ಗ್ರೆಗೊರಿ ಫಾಲ್ಕೆ ಅಭಿಪ್ರಾಯಪಟ್ಟಂತೆ, ಮೆಟಾಡೇಟಾದ ಆಧಾರದಲ್ಲಿ ಬಳಕೆದಾರರ ವರ್ತನೆಗಳನ್ನು ವಿಶ್ಲೇಷಿಸಲು ಸಾಧ್ಯವಿದೆ. “ವಾಟ್ಸಾಪ್‌ ಬಳಕೆಯ ಮುಕ್ತತೆಯ ಬಗ್ಗೆ ಹಲವು ರಾಷ್ಟ್ರಗಳಿಗೆ ಅನುಮಾನವಿದೆ. ದೇಶೀಯ ಡೇಟಾ ಭದ್ರತೆಗಾಗಿ ಕೆಲವರು ದೇಶದೊಳಗೇ ಡೇಟಾ ಸಂಗ್ರಹಣೆ ಬೇಕೆಂದು ಒತ್ತಾಯಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ವಾಟ್ಸಾಪ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಪ್ಲಾಟ್‌ಫಾರ್ಮ್‌ಗಳನ್ನು ಒಡೆದು ನಡಿಸುತ್ತಿರುವ ಮೆಟಾ ಕಂಪನಿಯ ಸೇವೆಗಳು ಹಿಂದೆ ಇರಾನಿನಲ್ಲಿ ನಿರ್ಬಂಧಿಸಲಾಗಿದ್ದವು. 2022 ರಲ್ಲಿ ಮಹಿಳೆಯೊಬ್ಬರ ಬಂಧನ ಮತ್ತು ಸಾವಿಗೆ ಸಂಬಂಧಿಸಿದ ಸಾರ್ವಜನಿಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ವಾಟ್ಸಾಪ್ ಮತ್ತು ಗೂಗಲ್ ಪ್ಲೇ ಮೇಲಿನ ನಿರ್ಬಂಧ ಹೇರಲಾಗಿತ್ತು. ನಂತರದಲ್ಲಿ, 2023 ಕೊನೆ ವೇಳೆಗೆ ಈ ನಿಷೇಧವನ್ನು ಹಿಂಪಡೆಯಲಾಗಿತ್ತು.

ಇದಕ್ಕೂ ಮುನ್ನ ಅನೇಕರು VPN ಮತ್ತು ಪ್ರಾಕ್ಸಿ ಸೇವೆಗಳ ಮೂಲಕ ಈ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಡುಪಿ: ಅತಿವೇಗದಿಂದ ಬಸ್ ಚಲಾಯಿಸಿದ ಚಾಲಕನ ಬಂಧನ – ಬಸ್ಸು ವಶಕ್ಕೆ

ಉಡುಪಿ ಬನ್ನಂಜೆ ಜಯಲಕ್ಷ್ಮೀ ಸಿಲ್ಕ್ ಬಳಿ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ಖಾಸಗಿ ಬಸ್ಸು ಚಲಾಯಿಸಿದ ಚಾಲಕನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಕಾಲ್ಬೆರಳುಗಳ ನಡುವೆ ಉಂಟಾಗುವ ತುರಿಕೆ ಮತ್ತು ಅಲರ್ಜಿ ನಿವಾರಣೆಗೆ ಪ್ರಯೋಜನಕಾರಿ ಮನೆಮದ್ದುಗಳು !

ಮಳೆಗಾಲ ಆರಂಭವಾದರೆ ಅಲರ್ಜಿ, ತುರಿಕೆ ಮತ್ತು ಫಂಗಲ್ ಸೋಂಕು ಸಾಮಾನ್ಯವಾಗುತ್ತದೆ. ವಿಶೇಷವಾಗಿ ಕಾಲ್ಬೆರಳುಗಳ ಮಧ್ಯೆ ಉಂಟಾಗುವ ತುರಿಕೆ ಜನರಿಗೆ ತೀವ್ರ ಕಿರಿಕಿರಿಯನ್ನು ಉಂಟುಮಾಡುತ್ತದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ದಾಳಿ: ಗಾಂಜಾ, ಮೊಬೈಲ್, ನಗದು ಸೇರಿದಂತೆ ನಿಷೇಧಿತ ವಸ್ತುಗಳು ಪತ್ತೆ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗಿನ ಅಕ್ರಮ ಚಟುವಟಿಕೆಗಳ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸೋಮವಾರ ಬೆಳಿಗ್ಗೆ ಸಿಸಿಬಿ (ಸಿಟಿ ಕ್ರೈಮ್ ಬ್ರಾಂಚ್) ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು, ಹಲವು ನಿಷೇಧಿತ ವಸ್ತುಗಳು ಪತ್ತೆಯಾಗಿದೆ.

ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಂದ ₹3,000ಕ್ಕೆ ವಾರ್ಷಿಕ ಪಾಸ್ ಘೋಷಣೆ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸದಾಗಿ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸಿದೆ.