spot_img

18 ಶಾಸಕರ ಅಮಾನತು ಹಿಂಪಡೆಯಲು ಬಿಜೆಪಿ ಮನವಿ: ಸ್ಪೀಕರ್ ಖಾದರ್ ಧನಾತ್ಮಕ ಸ್ಪಂದನೆ

Date:

ಬೆಂಗಳೂರು: ಬಜೆಟ್ ಅಧಿವೇಶನದ ಕೊನೆಯ ದಿನ ಅಮಾನತುಗೊಳಗಾದ 18 ಶಾಸಕರ ವಿರುದ್ಧದ ಆದೇಶ ಹಿಂಪಡೆಯುವಂತೆ ಆಗ್ರಹಿಸಿ, ಬಿಜೆಪಿ ನಿಯೋಗ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಸ್ಪೀಕರ್ ಅವರು ಕಾನೂನು ಸಚಿವರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.

ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಯಲಹಂಕ ಶಾಸಕ ವಿಶ್ವನಾಥ್, ಬೈರತಿ ಬಸವರಾಜ್, ಸಿ.ಕೆ. ರಾಮಮೂರ್ತಿ, ಬಿ.ಪಿ. ಹರೀಶ್ ಹಾಗೂ ಮುನಿರತ್ನ ಸೇರಿದ್ದ ನಿಯೋಗ ಸ್ಪೀಕರ್ ಅವರನ್ನು ಅರ್ಧ ತಾಸುಗೂ ಹೆಚ್ಚು ಸಮಯ ಭೇಟಿಯಾಗಿ ಚರ್ಚೆ ನಡೆಸಿತು.

ವಿಧಾನಸಭೆಯ ನಿಯಮಾವಳಿ 348ರ ಪ್ರಕಾರ, ಶಾಸಕರ ಅಮಾನತು ಅಥವಾ ಆ ಆದೇಶ ಹಿಂಪಡೆಯುವ ಪ್ರಕ್ರಿಯೆ ಕೇವಲ ಸದನ ನಡೆಯುತ್ತಿರುವಾಗ ಮಾತ್ರ ಸಾಧ್ಯ. ಆದರೆ ಈ ಘಟನೆ ಅಧಿವೇಶನದ ಕೊನೆಯ ದಿನ ನಡೆದಿದ್ದು, ಸ್ಪೀಕರ್ ಲಿಖಿತ ಆದೇಶದ ಮೂಲಕ ಹಿಂಪಡೆಯುವ ಅವಕಾಶವಿಲ್ಲ. ಜೊತೆಗೆ, ಸಮಿತಿ ಸಭೆಗಳಿಗೂ ಈ ಅಮಾನತು ಅನ್ವಯವಾಗಲಿದೆ ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರ್. ಅಶೋಕ್: “ಸ್ಪೀಕರ್ ಸ್ಪಂದನೆ ಧನಾತ್ಮಕವಾಗಿದ್ದು, ಕಾನೂನು ಸಚಿವರ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಭರವಸೆ ನೀಡಿದ್ದಾರೆ. ಈ ಹಿಂದೆ ಇಂತಹ ಪ್ರಕರಣಗಳು ನಡೆದಿದ್ದರೂ 6 ತಿಂಗಳಷ್ಟು ದೀರ್ಘ ಅಮಾನತು ನಡೆದಿಲ್ಲ.”

ವಿಶ್ವನಾಥ್ (ಯಲಹಂಕ ಶಾಸಕ): “ಸಮಿತಿಗೆ ಹಾಜರಾಗಬಾರದೆಂಬ ನಿರ್ಧಾರ ಸರಿಯಲ್ಲ. ಟಿಎ-ಡಿಎ ಕೂಡ ನಿಲ್ಲಿಸಿರುವುದು ಕಾನೂನುಬದ್ಧವಲ್ಲ. ನಾವು ಎಲ್ಲವನ್ನೂ ಇಲ್ಲಿ ಬಗೆಹರಿಸಬೇಕೆಂದು ಮನವಿ ಮಾಡಿದ್ದೇವೆ.”

ಬೈರತಿ ಬಸವರಾಜ್: “ಅಮಾನತು ಆದೇಶ ಹಿಂಪಡೆಯುವ ನಿರೀಕ್ಷೆಯಿದೆ. ಹಿಂಪಡೆಯದಿದ್ದರೆ ಮುಂದಿನ ಕ್ರಮವನ್ನು ನಾಯಕರು ನಿರ್ಧರಿಸುತ್ತಾರೆ.”

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪೇಜಾವರ ಶ್ರೀಗಳಿಗೆ ಸನಾತನ ರತ್ನ ಬಿರುದು ಸಹಿತ ಸಂಮಾನ

ಆಂಧ್ರಪ್ರದೇಶದ ನೆಲ್ಲೂರಿನ ಪ್ರತಿಷ್ಠಿತ ಆದಿಶಂಕರ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಹಾಲಂಡಿನ ಮಹರ್ಷಿ ವೇದಿಕ್ ಯುನಿವರ್ಸಿಟಿ ಇವುಗಳ ವತಿಯಿಂದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಸನಾತನ ರತ್ನ ಬಿರುದನ್ನಿತ್ತು ಸಂಮಾನಿಸಲಾಗಿದೆ‌.

ನ್ಯಾಯಮೂರ್ತಿಗಳ ವರ್ಗಾವಣೆ: ಕರ್ನಾಟಕ ಹೈಕೋರ್ಟ್‌ನ ನಾಲ್ವರು ಮತ್ತಿತರ ರಾಜ್ಯಗಳಿಗೆ ಬದಲಾವಣೆ

ಸುಪ್ರೀಂ ಕೋರ್ಟ್‌ ಶಿಫಾರಸಿನಂತೆ, ಹೈಕೋರ್ಟ್‌ಗಳ ಆಡಳಿತಾತ್ಮಕ ಗುಣಮಟ್ಟವನ್ನು ಹೆಚ್ಚಿಸಲು ದೇಶದ ವಿವಿಧ ಹೈಕೋರ್ಟ್‌ಗಳ ನ್ಯಾಯಾಧೀಶರನ್ನು ವರ್ಗಾಯಿಸಲಾಗಿದೆ.

ಮಲ್ಪೆಯಲ್ಲಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ₹15,000 ಕಳವು!

ಕೊಡವೂರು ಪಾಳೆಕಟ್ಟೆ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ದೇವರಬೆಟ್ಟು ಆವರಣದ ಹೊರಗಡೆ ಇರುವ ಕಾಣಿಕೆ ಡಬ್ಬಿಯನ್ನು ಮುರಿದು ಅದರಲ್ಲಿದ್ದ ಹಣ ಕಳವು ಮಾಡಿರುವ ಘಟನೆ ಎ.19 ರಂದು ಸಂಜೆ ನಡೆದಿದೆ.

ಜಾತಿಗಣತಿ ವರದಿ ಬಗ್ಗೆ ನಂಬಿಕೆ ಇಲ್ಲದಿದ್ದರೆ ಜಯಪ್ರಕಾಶ ಹೆಗ್ಡೆ ಬಳಿ ಕೇಳಿ: ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

“ಜಾತಿಗಣತಿ ವರದಿ ಸಿದ್ದರಾಮಯ್ಯ ಮನೆಯಲ್ಲಿ ಇದೆ” ಎನ್ನುವ ಆರ್. ಅಶೋಕ್ ಆರೋಪಕ್ಕೆ ಡಿಕೆಶಿ ತಿರುಗೇಟಾಗಿ ಜಯಪ್ರಕಾಶ ಹೆಗ್ಡೆಯವರ ಬಳಿ ಕೇಳಬಹುದು ಎಂದರು.