spot_img

18 ಶಾಸಕರ ಅಮಾನತು ಹಿಂಪಡೆಯಲು ಬಿಜೆಪಿ ಮನವಿ: ಸ್ಪೀಕರ್ ಖಾದರ್ ಧನಾತ್ಮಕ ಸ್ಪಂದನೆ

Date:

ಬೆಂಗಳೂರು: ಬಜೆಟ್ ಅಧಿವೇಶನದ ಕೊನೆಯ ದಿನ ಅಮಾನತುಗೊಳಗಾದ 18 ಶಾಸಕರ ವಿರುದ್ಧದ ಆದೇಶ ಹಿಂಪಡೆಯುವಂತೆ ಆಗ್ರಹಿಸಿ, ಬಿಜೆಪಿ ನಿಯೋಗ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಸ್ಪೀಕರ್ ಅವರು ಕಾನೂನು ಸಚಿವರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.

ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಯಲಹಂಕ ಶಾಸಕ ವಿಶ್ವನಾಥ್, ಬೈರತಿ ಬಸವರಾಜ್, ಸಿ.ಕೆ. ರಾಮಮೂರ್ತಿ, ಬಿ.ಪಿ. ಹರೀಶ್ ಹಾಗೂ ಮುನಿರತ್ನ ಸೇರಿದ್ದ ನಿಯೋಗ ಸ್ಪೀಕರ್ ಅವರನ್ನು ಅರ್ಧ ತಾಸುಗೂ ಹೆಚ್ಚು ಸಮಯ ಭೇಟಿಯಾಗಿ ಚರ್ಚೆ ನಡೆಸಿತು.

ವಿಧಾನಸಭೆಯ ನಿಯಮಾವಳಿ 348ರ ಪ್ರಕಾರ, ಶಾಸಕರ ಅಮಾನತು ಅಥವಾ ಆ ಆದೇಶ ಹಿಂಪಡೆಯುವ ಪ್ರಕ್ರಿಯೆ ಕೇವಲ ಸದನ ನಡೆಯುತ್ತಿರುವಾಗ ಮಾತ್ರ ಸಾಧ್ಯ. ಆದರೆ ಈ ಘಟನೆ ಅಧಿವೇಶನದ ಕೊನೆಯ ದಿನ ನಡೆದಿದ್ದು, ಸ್ಪೀಕರ್ ಲಿಖಿತ ಆದೇಶದ ಮೂಲಕ ಹಿಂಪಡೆಯುವ ಅವಕಾಶವಿಲ್ಲ. ಜೊತೆಗೆ, ಸಮಿತಿ ಸಭೆಗಳಿಗೂ ಈ ಅಮಾನತು ಅನ್ವಯವಾಗಲಿದೆ ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರ್. ಅಶೋಕ್: “ಸ್ಪೀಕರ್ ಸ್ಪಂದನೆ ಧನಾತ್ಮಕವಾಗಿದ್ದು, ಕಾನೂನು ಸಚಿವರ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಭರವಸೆ ನೀಡಿದ್ದಾರೆ. ಈ ಹಿಂದೆ ಇಂತಹ ಪ್ರಕರಣಗಳು ನಡೆದಿದ್ದರೂ 6 ತಿಂಗಳಷ್ಟು ದೀರ್ಘ ಅಮಾನತು ನಡೆದಿಲ್ಲ.”

ವಿಶ್ವನಾಥ್ (ಯಲಹಂಕ ಶಾಸಕ): “ಸಮಿತಿಗೆ ಹಾಜರಾಗಬಾರದೆಂಬ ನಿರ್ಧಾರ ಸರಿಯಲ್ಲ. ಟಿಎ-ಡಿಎ ಕೂಡ ನಿಲ್ಲಿಸಿರುವುದು ಕಾನೂನುಬದ್ಧವಲ್ಲ. ನಾವು ಎಲ್ಲವನ್ನೂ ಇಲ್ಲಿ ಬಗೆಹರಿಸಬೇಕೆಂದು ಮನವಿ ಮಾಡಿದ್ದೇವೆ.”

ಬೈರತಿ ಬಸವರಾಜ್: “ಅಮಾನತು ಆದೇಶ ಹಿಂಪಡೆಯುವ ನಿರೀಕ್ಷೆಯಿದೆ. ಹಿಂಪಡೆಯದಿದ್ದರೆ ಮುಂದಿನ ಕ್ರಮವನ್ನು ನಾಯಕರು ನಿರ್ಧರಿಸುತ್ತಾರೆ.”

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶಿರ್ವದ ಪಾಪನಾಶಿನಿ ನದಿಯಲ್ಲಿ ಅಕ್ರಮ ಮರಳು ದಂಧೆಗೆ ಬ್ರೇಕ್: ಹಿಟಾಚಿ, ಟಿಪ್ಪರ್ ವಶಕ್ಕೆ

ಪಾಪನಾಶಿನಿ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಮೇಲೆ ಶಿರ್ವ ಪೊಲೀಸರು ದಾಳಿ ನಡೆಸಿ, ಹಿಟಾಚಿ ಯಂತ್ರ ಮತ್ತು ಎರಡು ಟಿಪ್ಪರ್ ಮರಳನ್ನು ವಶಪಡಿಸಿಕೊಂಡಿದ್ದಾರೆ.

ತೇಜಸ್ವಿ ಯಾದವ್ ಪತ್ನಿಯನ್ನು ‘ಜೆರ್ಸಿ ಹಸು’ ಎಂದ ಮಾಜಿ ಶಾಸಕ: ಬಿಹಾರದಲ್ಲಿ ರಾಜಕೀಯ ವಿವಾದ

ಬಿಹಾರದಲ್ಲಿ ರಾಜಕೀಯ ವಾಕ್ಸಮರ ತಾರಕಕ್ಕೇರಿದ್ದು, ಮಾಜಿ ಶಾಸಕ ರಾಜ್ ಬಲ್ಲಭ್ ಯಾದವ್ ಅವರು ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರ ಪತ್ನಿ ರಾಜಶ್ರೀ ಯಾದವ್ ಅವರ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದಾರೆ.

ಯುವಕರಲ್ಲಿ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ

ಅಧಿಕ ಕೊಲೆಸ್ಟ್ರಾಲ್ ಸಾಮಾನ್ಯವಾಗಿ ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸುವುದಿಲ್ಲ, ಆದರೆ ಅದು ದೇಹದಲ್ಲಿ ಅಪಾಯಕಾರಿ ಮಟ್ಟವನ್ನು ತಲುಪಿದಾಗ ಕೆಲವು ಚಿಹ್ನೆಗಳು ಕಾಣಿಸಿಕೊಳ್ಳಬಹುದು.

ದಿನ ವಿಶೇಷ – ರಾಷ್ಟ್ರೀಯ ವನ್ಯಜೀವಿ ಶಹೀದ್ ದಿನ

ಭಾರತದ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವನರಕ್ಷಕ ಶಹೀದರ ಸ್ಮೃತಿಗೆ ಅರ್ಪಿತವಾದ ದಿನವೇ ರಾಷ್ಟ್ರೀಯ ವನ್ಯಜೀವಿ ಶಹೀದ್ ದಿನ (National Forest Martyrs Day).