
ಮಣಿಪಾಲ : ಉಡುಪಿ ಜಿಲ್ಲೆಯ ಮಣಿಪಾಲ ಸಮೀಪದ ಹಿರೇಬೆಟ್ಟು ಗ್ರಾಮದ ಅಂಗಡಿಬೆಟ್ಟು ಬಳಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಜೂನ್ 26 ರಂದು ಸಂಜೆ 5:30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಮೃತ ವ್ಯಕ್ತಿಯನ್ನು ಬೊಮ್ಮು ಜಾನು ಬೊಡೇಕರ್ ಎಂದು ಗುರುತಿಸಲಾಗಿದೆ.
ಪೊಲೀಸ್ ವರದಿಯಂತೆ, KA31ED4451 ನಂಬರ್ನ ಮೋಟಾರ್ ಸೈಕಲ್ ಮಣಿಪಾಲದಿಂದ ಹಿರೇಬೆಟ್ಟು ಕಡೆಗೆ ಅತೀ ವೇಗದಲ್ಲಿ ಸಾಗುತ್ತಿದ್ದು, ಹೋಲೋ ಬ್ಲಾಕ್ ಪ್ಯಾಕ್ಟರಿಯ ಬಳಿ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದೆ. ಬೈಕ್ನಲ್ಲಿ ಇಬ್ಬರು ಸವಾರರಿದ್ದರು. ಹಿಂದಿನ ಆಸನದಲ್ಲಿ ಪ್ರಯಾಣಿಸುತ್ತಿದ್ದ ಬೊಮ್ಮು ಜಾನು ಬೊಡೇಕರ್ ಡಾಮರ್ ರಸ್ತೆಯ ಮೇಲೆ ಬಿದ್ದು ಗಾಯಗೊಂಡರು ಮತ್ತೊಬ್ಬ ಸವಾರನು ಮಣ್ಣಿನ ರಸ್ತೆಯಲ್ಲಿ ಬಿದ್ದು ಸ್ವಲ್ಪ ಗಾಯಗೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡ ಜಾನು ಬೊಡೇಕರ್ ರವರನ್ನು ಸ್ಥಳೀಯರ ಸಹಾಯದಿಂದ ತಕ್ಷಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಜೂನ್ 27ರಂದು ಬೆಳಿಗ್ಗೆ 10:40ಕ್ಕೆ ಮೃತಪಟ್ಟರು.
ಪರಿಣಾಮವಾಗಿ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 110/2025, ಭಾರತೀಯ ದಂಡಸಂಹಿತೆ ನೂತನ ಕಲಂ 281 ಮತ್ತು 106 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.