
ಕಾರ್ಕಳ : ಆದಾಯಕ್ಕೆ ಮೀರಿ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಮೆಸ್ಕಾಂ ಅಧಿಕಾರಿಯೊಬ್ಬರ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಮೆಸ್ಕಾಂನ ಅಕೌಂಟ್ಸ್ ಆಫೀಸರ್ ಗಿರೀಶ್ ರಾವ್ ಅವರ ಮೇಲೆ ಶಂಕಿತ ಆಸ್ತಿ ಪತ್ತೆ ಹಚ್ಚುವ ಸಲುವಾಗಿ, ಬೆಳ್ಳಂಬೆಳಗ್ಗೆ ಕಾರ್ಕಳದ ಪುಲ್ಕೇರಿಯಲ್ಲಿರುವ ಅವರ ನಿವಾಸ, ವ್ಯಾಪಾರ ಸಂಕೀರ್ಣ ಸೇರಿ ಐದು ಕಡೆ ಲೋಕಾಯುಕ್ತದ ಡಿವೈಎಸ್ಪಿ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿದೆ.
ದಾಳಿಯಲ್ಲಿ ಹಲವಾರು ದಾಖಲೆಗಳು, ಆಸ್ತಿ ವಿವರಗಳು ಮತ್ತು ಹಣದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ . ಸದ್ಯದಲ್ಲೇ ಲಭ್ಯವಿರುವ ದಾಖಲೆಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.