spot_img

ಬಾಬಾ ಸಾಹೆಬ್ ಅಂಬೇಡ್ಕರ್ ಬಗ್ಗೆ ಅಮಿತ್ ಶಾ ನೀಡಿದ ಹೇಳಿಕೆ ಖಂಡನೀಯ.

Date:

ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ಸಿನ ಕುತಂತ್ರವನ್ನು ಬಯಲಿಗೆಳೆದಿದ್ದಾರೆಯೇ ಹೊರತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರನ್ನು ಅವಮಾನಿಸಿಲ್ಲ ಎಂದು ತನ್ನ ಸಚಿವನ ಪರವಾಗಿ ಪ್ರಧಾನಿ ಮೋದಿ ನೀಡಿರುವ ಹೇಳಿಕೆ ಪ್ರಧಾನಿ ಹುದ್ದೆಗೆ ಭೂಷಣವಲ್ಲ. ಬಾಬಾ ಸಾಹೆಬ್ ಅಂಬೇಡ್ಕರ್ ಬಗ್ಗೆ ಅಮಿತ್ ಶಾ ನೀಡಿದ ಹೇಳಿಕೆ ಖಂಡನೀಯ. ಇದು ಬಿಜೆಪಿ ನಾಯಕರ ಸಂವಿಧಾನ ವಿರೋಧಿ ನೀತಿಯನ್ನು ಪ್ರತಿಪಾದಿಸುತ್ತದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಇತಿಹಾಸ ಅರಿಯದವರು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ಊರ ಹೊರಗಿರ ಬೇಕಾದವನನ್ನು ಊರೊಳಗೆ ಕರೆದು ಊರನ್ನು ಆಳುವ ಅವಕಾಶ ಮಾಡಿ ಕೊಟ್ಟದ್ದೇ ಅಂಬೇಡ್ಕರ್ ನೇತೃತ್ವ ದಲ್ಲಿ ರಚನೆಗೊಂಡ ಸಂವಿಧಾನ. ಅಂತಹ ಸಂವಿಧಾನವನ್ನೇ ಬದಲಿಸಲು ಹೊರಟವರಿಗೆ ಅಂಬೇಡ್ಕರ್ ಹೆಸರಿನ ಉಲ್ಲೇಖ ಅಪತ್ಯ ಆಗುವುದರಲ್ಲಿ ಆಶ್ಚರ್ಯ ಇಲ್ಲ. ದೇಶದಲ್ಲಿ ಶತಶತಮಾನ ಗಳಿಂದ ಸಾಮಾಜಿಕ ಸಮಾನತೆಯ ಸಮಸಮಾಜ ನಿರ್ಮಾಣಕ್ಕಾಗಿ ಮನುವಾದಿ ಸಂಸ್ಕೃತಿ ವರ್ಣಭೇದ ಲಿಂಗ ತಾರತಮ್ಯದ ವಿರುದ್ಧ ಹೋರಾಡುತ್ತಲೇ ಬಂದ ಪುಳೆ ಪೆರಿಯಾರ್ ನಾರಾಯಣಗುರು ಬಸವಾದಿ ಶರಣರ ಸಂತರ ಹೆಸರನ್ನು ಇತಿಹಾಸದ ಪುಟಗಳಿಂದ ಅಳಿಸಿ ಹಾಕಲು ಷಢ್ಯಂತ್ರ ನಡೆಸಿದವರು ಯಾರು ಎನ್ನುವುದನ್ನು ಅದೇ ಇತಿಹಾಸ ದಾಖಲಿಸಿಕೊಂಡಿದೆ. ದೆಹಲಿ ರಾಜಪಥ ಪರೇಡಿನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಣೆ ಇದಕ್ಕೊಂದು ಇತ್ತೀಚಿನ ಉದಾಹರಣೆ ಎಂದು ಕಾಂಗ್ರೆಸ್ ಹೇಳಿದೆ.
ಅಂಬೇಡ್ಕರ್ ರಚಿಸಿದ ಸಂವಿಧಾನದ ಮಾರ್ಗಸೂಚಿ ಮೌಲ್ಯದಡಿಯಲ್ಲಿ ಕಳೆದ ಸುಮಾರು 6 ದಶಕಗಳ ಕಾಲ ಪ್ರಧಾನಿ ನೆಹರೂ ಇಂದಿರಾ ಆದಿಯಾಗಿ ಪ್ರಧಾನಿ ಮನಮೋಹನ ಸಿಂಗ್ ವರೆಗಿನ ಆಡಳಿತಾವದಿಯಲ್ಲಿ ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 3 ನೇ ಸ್ಥಾನದಲ್ಲಿತ್ತು. ಆದರೆ ಕಳೆದ 10ವರ್ಷಗಳ ಪ್ರಧಾನಿ ಮೋದಿ ನೇತೃತ್ವದ ಸಂವಿಧಾನವನ್ನೇ ಬದಲಿಸಲು ಹೊರಟ ಆಡಳಿತ ದೇಶವನ್ನು ಆರ್ಥಿಕವಾಗಿ 164 ನೇ ಸ್ಥಾನಕ್ಕೆ ಇಳಿಸಿತಷ್ಟೇ ಅಲ್ಲ 55ಲಕ್ಷ ಕೋಟಿ ಇದ್ದ ಸಾಲವನ್ನು ಸುಮಾರು 150 ಲಕ್ಷ ಕೋಟಿಗೆ‌ ಏರಿಸಿ ಯುವಜನರಲ್ಲಿ ನಿರುಧ್ಯೋಗ ತಾಂಡವವಾಡುವಂತೆ ಮಾಡಿತು. ಬಹು:ಶ ಇದನ್ನೇ ಅಭಿವೃದ್ಧಿ ಎಂದು ವ್ಯಾಖ್ಯಾನಿಸುವ ಮೋದಿ ಶಾ ಪರಿವಾರಕ್ಕೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ಉಲ್ಲೇಖ ಒಂದು ಹುಚ್ಚು ಮನಸ್ಥಿತಿಯಾಗಿ ಕಂಡು ಬಂದಿರುವುದರಲ್ಲಿ ಅಶ್ಚರ್ಯವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಕಟಣೆಗಾಗಿ:
Bipinchandra Pal Nakre,
Spokesperson,
Udupi District Congress,
UDUPI-Dist.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಆರ್‌ಸಿಬಿ ಅಭಿಮಾನಿ ಮೂಲ್ಕಿ ಮೂಲದ ಅಕ್ಷತಾ ಕಾಲ್ತುಳಿತದಿಂದ ಸಾವು: ಟೀಶರ್ಟ್‌ನಿಂದ ಗುರುತು ಹಚ್ಚಿದ ಪತಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಸಿದ್ದಾಪುರದ ಅಕ್ಷತಾ (27) ಮೃತಪಟ್ಟಿದ್ದಾರೆ. ಆರ್‌ಸಿಬಿ ಟೀಶರ್ಟ್‌ನಿಂದ ಪತ್ನಿಯ ಗುರುತನ್ನು ಗಂಡ ಆಶಯ್ ಪತ್ತೆ ಹಚ್ಚಿದರು.

ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ11 ಮಂದಿ ಮೃತ್ಯು : ಸಿಎಂ ಸಿದ್ದರಾಮಯ್ಯರವರಿಂದ ₹10 ಲಕ್ಷ ಪರಿಹಾರ ಘೋಷಣೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದು, ಸಿದ್ದರಾಮಯ್ಯಮೃತಪಟ್ಟ 11 ಮಂದಿ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ.

“ಇನ್ನು ಕೆಲದಿನ ಸಾಮಾಜಿಕ ಜಾಲತಾಣದಿಂದ ದೂರವಿರುತ್ತೇನೆ” : ಅಭಿಮಾನಿಗಳಿಗೆ ಶಾಕ್ ಕೊಟ್ಟ ಶೋಭಾ ಶೆಟ್ಟಿ

ಬಿಗ್ ಬಾಸ್ ಖ್ಯಾತಿಯ ನಟಿ ಹಾಗೂ ಕನ್ನಡ-ತೆಲುಗು ಚಿತ್ರರಂಗದಲ್ಲಿ ಚಿರಪರಿಚಿತರಾದ ಶೋಭಾ ಶೆಟ್ಟಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ “ನಾನು ಕೆಲವು ದಿನಗಳವರೆಗೆ ಸಾಮಾಜಿಕ ಜಾಲತಾಣದಿಂದ ದೂರವಿರುತ್ತೇನೆ” ಎಂಬ ಪೋಸ್ಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಆರ್‌ಸಿಬಿ ವಿಜಯೋತ್ಸವ ದುರಂತ: ಕಾಲ್ತುಳಿತದಲ್ಲಿ 11 ಅಭಿಮಾನಿಗಳ ಸಾವು – ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿಯಿಂದ ಸಂತಾಪ

ಆರ್‌ಸಿಬಿ ವಿಜಯೋತ್ಸವ ದುರಂತದ ಕುರಿತು ಪ್ರತಿಕ್ರಿಯಿಸಿರುವ ಆರ್‌ಸಿಬಿ ತಾರೆ ವಿರಾಟ್ ಕೊಹ್ಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಶೋಕದ ಭಾವನೆ ಹಂಚಿಕೊಂಡಿದ್ದು, “ಈ ದುಃಖದ ಸುದ್ದಿ ಕೇಳಿ ನಾನು ಶಬ್ದವಿಲ್ಲದವನಾಗಿದ್ದೇನೆ. ಹೃದಯ ಒಡೆದುಹೋಗಿದೆ” ಎಂದು ಬರೆದುಕೊಂಡಿದ್ದಾರೆ.