spot_img

‘ಸೌಜನ್ಯ ಹೆಲ್ಪ್ ಲೈನ್’ ಹೆಸರಿನಲ್ಲಿ 3.20 ಲಕ್ಷ ವಂಚನೆ ಆರೋಪ

Date:

ಮಂಗಳೂರು : ‘ಸೌಜನ್ಯ ಹೆಲ್ಪ್ ಲೈನ್’ ಹೆಸರಿನಲ್ಲಿ ಸಾವಿರಾರು ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ ಎಂಬುವವರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್‌ನ ಮಾಲಾಡಿ ನಿವಾಸಿ ಗಾಯಕರಾದ ಕೆ.ರಾಜೇಶ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಫೇಸ್‌ಬುಕ್ ಮೂಲಕ ಪರಿಚಯವಾದ ಸಂಧ್ಯಾ ಅವರ ಮೇಲೆ ನಂಬಿಕೆ ಇಟ್ಟು, ಹಂತ ಹಂತವಾಗಿ 3.20 ಲಕ್ಷ ರೂಪಾಯಿ ನೀಡಿದ್ದಾರೆ. ಈ ಹಣವನ್ನು ಹೈಕೋರ್ಟ್‌ನಲ್ಲಿ ಪ್ರಕರಣ ಬಗೆಹರಿಸಲು ಬೇಕೆಂದು ಸಂಧ್ಯಾ ಮನವೊಲಿಸಿದ್ದಳು ಎನ್ನಲಾಗಿದೆ.

ಆದರೆ, ಯಾವುದೇ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ರಾಜೇಶ್ ಅವರು ಸಂಧ್ಯಾಗೆ ಪ್ರಶ್ನಿಸಿದಾಗ, ಮತ್ತಷ್ಟು ಹಣ ನೀಡುವಂತೆ ಒತ್ತಾಯಿಸಿದಳು. ಕೊನೆಗೆ ಕೋರ್ಟ್ ದಾಖಲೆ ಕೇಳಿದಾಗ ಬೆದರಿಕೆ ಹಾಕಿ “ಕೈಕಾಲು ಮುರಿಸ್ತೀನಿ” ಎಂದು ಬೆದರಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ರಾಜೇಶ್ ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, IPC ಸೆಕ್ಷನ್ 318(4) ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆದಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ 6 ದೇಸಿ ಸೂಪರ್‌ಫುಡ್‌ಗಳು

ಮಳೆಗಾಲ ಬಂತೆಂದರೆ ಸಣ್ಣಗೆ ತಂಪು, ಶೀತ, ಕೆಮ್ಮು, ಜೀರ್ಣಕ್ರಿಯೆಯ ತೊಂದರೆಗಳು ನಿತ್ಯ ಸಂಗಾತಿಯಂತೆ ಬಂದುಬಿಡುತ್ತವೆ. ಈ ಸೋಂಕುಗಳು ಬಾಕ್ಟೀರಿಯಾ, ವೈರಸ್ ಹಾಗೂ ಶಿಲೀಂಧ್ರಗಳ ಕಾರಣದಿಂದ ಹೆಚ್ಚಾಗಿ ಹರಡುತ್ತವೆ. ಇಂತಹ ಸಮಯದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಅತ್ಯಂತ ಅಗತ್ಯ.

ವಿಶ್ವದರ್ಶನ ಪಡೆದ ಯೋಗ ದಿನ: ವಿಶಾಖಪಟ್ಟಣಂನಲ್ಲಿ ಮೋದಿ ಜೊತೆಗೆ 3 ಲಕ್ಷ ಮಂದಿ ಯೋಗ

11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ವಿಶಾಖಪಟ್ಟಣಂನಲ್ಲಿ ಭಾರೀ ಜನಸಂದಣಿ ಮಧ್ಯೆ ಅದ್ಧೂರಿ ಯೋಗ ಕಾರ್ಯಕ್ರಮ ನಡೆದಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸುಮಾರು 3 ಲಕ್ಷಕ್ಕೂ ಹೆಚ್ಚು ಜನರೊಂದಿಗೆ ಯೋಗಾಭ್ಯಾಸ ನಡೆಸಿದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.

ದಿನ ವಿಶೇಷ – ವಿಶ್ವ ಮಳೆಕಾಡು ದಿನ

ಈ ದಿನದ ಪ್ರಮುಖ ಉದ್ದೇಶವೆಂದರೆ ಪ್ರಪಂಚದ ಜೀವವೈವಿಧ್ಯತೆಯ ಹೃದಯವಂತಿರುವ ಮಳೆಕಾಡುಗಳ ಸಂರಕ್ಷಣೆ ಮತ್ತು ಮಹತ್ವವನ್ನು ಜಾಗೃತಗೊಳಿಸುವುದು

ಮಳೆಗಾಲದ ರಜೆ ಪೂರೈಕೆ: ಉಡುಪಿ ಶಾಲೆಗಳಲ್ಲಿ ಶನಿವಾರ ಪಾಠ ನಡೆಸಲು ಆದೇಶ

ಮಳೆಯ ಆರ್ಭಟ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ನೀಡಲಾಗಿದ್ದ ಐದು ದಿನಗಳ ರಜೆಯನ್ನು ಇದೀಗ ಶನಿವಾರಗಳಲ್ಲಿ ಪೂರೈಸುವಂತೆ ಸೂಚನೆ ನೀಡಲಾಗಿದೆ.