
ಒಂದು ವೇಳೆ ಉಡುಪಿಯಲ್ಲಿ ವಾದಿರಾಜರು ಎನ್ನುವ ಹಿಂದೂ ಸನ್ಯಾಸಿ ಇರುತ್ತಿಲ್ಲಲ್ಲವಾಗಿದ್ದರೆ ನಾನು ಗೋವಾ ದಿಂದ ಹಿಡಿದು ಇಡೀ ದಕ್ಷಿಣವನ್ನು ವ್ಯಾಪಿಸುತ್ತಿದ್ದೆ ಎಂದು ಕ್ಸೇವಿಯರ್ ಎಂಬ ಮಾತಾಂಧ ಕ್ರೈಸ್ತ ಪಾದ್ರಿ ಹೇಳಿದ್ದಾನೆಂದು ಉಲ್ಲೇಖವಿದೆ. ಆ ಮಟ್ಟಿನಲ್ಲಿ ವಾದಿರಾಜರ ಸಾಮಾಜಿಕ ಸಾಂಸ್ಕೃತಿಕ ಚಳುವಳಿಗಳು ಹಿಂದೂ ಧರ್ಮವನ್ನು ರಕ್ಷಿಸುತ್ತಿದ್ದವು ಎಂದು ತಿಳಿದುಕೊಳ್ಳಬಹುದು. ಸೋದೆ ಮಠದ ಪರಂಪರೆಯಲ್ಲಿ ಬಂದು ಸುಧೀರ್ಘವಾದ 120 ವರ್ಷಗಳಷ್ಟು ಕಾಲ ಬಾಳಿ ಬದುಕಿ ಉಡುಪಿಯ ಇತಿಹಾಸದಲ್ಲಿ ಅಜರಾಮರ ರಾಗಿ, ಗುರುತಿಸಿಕೊಳ್ಳುವ ಕೆಲವೇ ಕೆಲವು ಯತಿಗಳಲ್ಲಿ ವಾದಿರಾಜರು ಅಗ್ರಗಣ್ಯರು. ಅವರ ಸಾಧನೆ, ಜ್ಞಾನ, ಹಾಗೂ ತತ್ವ ಪ್ರಚಾರದ ನಿಷ್ಠೆ ಅನ್ಯಾದೃಶ. ದಿನಕ್ಕೊಂದು ಸ್ವಯಂ ಸ್ತೋತ್ರವನ್ನು ರಚಿಸಿ ಭಗವಂತನಿಗೆ ಅರ್ಪಿಸುತ್ತಿದ್ದರು.ರುಕ್ಮಿಣೀಶ ವಿಜಯ ಎಂಬ ಮಹಾ ಕಾವ್ಯವನ್ನು ಬರೆದಿದ್ದಾರೆ. ಅವರ ಜೀವನ ಸಂದೇಶ ನಮಗೆ ಸ್ಪೂರ್ತಿಯಾದರೆ ಅವರ ಜಯಂತಿ ಸಾರ್ಥಕವಾಗುತ್ತದೆ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ