spot_img

ಮನೆಯ ದೇವರ ಕೋಣೆಯಲ್ಲಿ ಮಾವಿನ ಎಲೆ ಇಡುವದೇಕೆ?

Date:

ಬೆಂಗಳೂರು: ಹಬ್ಬ, ಹುಣ್ಣಿಮೆ, ಶುಭ ಕಾರ್ಯ – ಮನೆ ಮುಂಭಾಗದ ತೋರಣ, ದೇವರ ಕೋಣೆಯ ಕಲಶ, ಅಥವಾ ಪೂಜಾ ವೇದಿಕೆಯಲ್ಲಿ ಮಾವಿನ ಎಲೆಗಳ ಅನುಪಸ್ಥಿತಿ ಕನಿಷ್ಠ ಕೂಡ ಇರುವುದಿಲ್ಲ. ಆದರೆ ಈ ಮಾವಿನ ಎಲೆಗಳ ಅಸ್ತಿತ್ವದ ಹಿಂದೆ ಕೇವಲ ಸಂಪ್ರದಾಯ ಮಾತ್ರವಲ್ಲದೆ, ಪವಿತ್ರ ಶಕ್ತಿಯ ಆಕರ್ಷಣೆಯೂ ಇದೆ.

ಮಾವಿನ ಎಲೆಗಳನ್ನು ದೇವರ ಕೋಣೆಯಲ್ಲಿ ಇಡುವ ಮೂಲಕ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರವೇಶ ಹೆಚ್ಚುತ್ತದೆ. ಇದು ಮನೆಗೆ ನಕಾರಾತ್ಮಕ ಶಕ್ತಿಗಳನ್ನು ನಿವಾರಿಸಿ ಶುದ್ಧತೆಯನ್ನು ತರುತ್ತದೆ. ಶಾಂತಿ, ನೆಮ್ಮದಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ದಾರಿ ತೋರುತ್ತದೆ ಎಂದು ಭಾರತೀಯ ಶಾಸ್ತ್ರಗಳಲ್ಲಿ ನಂಬಿಕೆಯಿದೆ.

ಈ ಎಲೆಗಳು ಶ್ರೀ ಮಹಾಲಕ್ಷ್ಮಿ ಮತ್ತು ಶ್ರೀಮಹಾವಿಷ್ಣುವಿಗೆ ಪ್ರಿಯವಾದ್ದರಿಂದ, ಈ ದೇವತೆಗಳ ಕೃಪೆ ಮನೆಯಲ್ಲಿ ನೆಲೆಸುತ್ತದೆ. ಇದರ ಪರಿಣಾಮವಾಗಿ ಕುಟುಂಬದಲ್ಲಿ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ, ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ.

ಅಷ್ಟೇ ಅಲ್ಲದೆ, ಮಾವಿನ ಎಲೆಗಳು ಗ್ರಹ ದೋಷ ನಿವಾರಣೆಗೂ ಸಹಾಯಮಾಡುತ್ತವೆ ಎಂಬ ನಂಬಿಕೆವಿದೆ. ಮನೆಗೆ ಬರುವ ಅಹಿತಕರ ವಿದ್ಯಮಾನಗಳು, ಕಲಹಗಳು, ಮನಸ್ಥಾಪಗಳೆಲ್ಲವೂ ನಿಯಂತ್ರಣಕ್ಕಿಳಿದಂತೆ ಮನೆಯಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ.

ಈ ಎಲೆಗಳನ್ನು ಬಳಸುವಾಗ ಸ್ವಚ್ಛವಾಗಿ ತೊಳೆಯಬೇಕು ಹಾಗೂ ಅರಸಿನ ಕುಂಕುಮವನ್ನಿಟ್ಟು ಕಲಶದ ಮೇಲೆ ಅಥವಾ ಕೆಂಪು ಬಣ್ಣದ ಬಟ್ಟೆಯ ಮೇಲೆ ಇಡುವುದು ಶ್ರೇಷ್ಠ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮದುವೆಯಾಗದ ಹತಾಶೆಯಲ್ಲಿ ಇಬ್ಬರು ಸಹೋದರರು ವಿಷ ಸೇವಿಸಿ ಆತ್ಮಹತ್ಯೆ

ಮದುವೆಯಾಗದ ಕಾರಣದಿಂದ ಹತಾಶರಾದ ಇಬ್ಬರು ಸಹೋದರರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು

ಆದಾಯಕ್ಕೆ ಮೀರಿದ ಸಂಪತ್ತು! ಕಾರ್ಕಳದ ಅಧಿಕಾರಿ ಗಿರೀಶ್ ರಾವ್ ಗೆ ಲೋಕಾಯುಕ್ತರ ಶಾಕ್

ಮಂಗಳೂರು ಲೋಕಾಯುಕ್ತ ಪೊಲೀಸರು ಕಾರ್ಕಳ ಮೆಸ್ಕಾಂ ಸಂಸ್ಥೆಯ ಅಕೌಂಟೆಂಟ್ ಆಫೀಸರ್ ಗಿರೀಶ್ ರಾವ್ ವಿರುದ್ಧ ದೊಡ್ಡ ಪ್ರಮಾಣದ ದಾಳಿ ನಡೆಸಿದ್ದಾರೆ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ರೂ. 24 ಇಳಿಕೆ

ವಾಣಿಜ್ಯ ಬಳಕೆಯ ಎಲ್‌ಪಿಜಿ (ಅಡುಗೆ ಅನಿಲ) ಸಿಲಿಂಡರ್‌ಗಳ ಬೆಲೆಯನ್ನು ತೈಲ ಕಂಪನಿಗಳು ರೂ. 24 ಕಡಿಮೆ ಮಾಡಿವೆ.

ಬಿಹಾರದ ಸಿಎಂ ನಿತೀಶ್ ಕುಮಾರ್ ರ‍್ಯಾಲಿಯಲ್ಲಿ ಮೋದಿಯವರ ಹೆಸರನ್ನು ತಪ್ಪಾಗಿ ಉಚ್ಚರಿಸಿದ ವಿಡಿಯೋ ವೈರಲ್

ನಿತೀಶ್ ಕುಮಾರ್ ರ‍್ಯಾಲಿಯೊಂದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.