
ಬೆಂಗಳೂರು: ಹಬ್ಬ, ಹುಣ್ಣಿಮೆ, ಶುಭ ಕಾರ್ಯ – ಮನೆ ಮುಂಭಾಗದ ತೋರಣ, ದೇವರ ಕೋಣೆಯ ಕಲಶ, ಅಥವಾ ಪೂಜಾ ವೇದಿಕೆಯಲ್ಲಿ ಮಾವಿನ ಎಲೆಗಳ ಅನುಪಸ್ಥಿತಿ ಕನಿಷ್ಠ ಕೂಡ ಇರುವುದಿಲ್ಲ. ಆದರೆ ಈ ಮಾವಿನ ಎಲೆಗಳ ಅಸ್ತಿತ್ವದ ಹಿಂದೆ ಕೇವಲ ಸಂಪ್ರದಾಯ ಮಾತ್ರವಲ್ಲದೆ, ಪವಿತ್ರ ಶಕ್ತಿಯ ಆಕರ್ಷಣೆಯೂ ಇದೆ.
ಮಾವಿನ ಎಲೆಗಳನ್ನು ದೇವರ ಕೋಣೆಯಲ್ಲಿ ಇಡುವ ಮೂಲಕ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರವೇಶ ಹೆಚ್ಚುತ್ತದೆ. ಇದು ಮನೆಗೆ ನಕಾರಾತ್ಮಕ ಶಕ್ತಿಗಳನ್ನು ನಿವಾರಿಸಿ ಶುದ್ಧತೆಯನ್ನು ತರುತ್ತದೆ. ಶಾಂತಿ, ನೆಮ್ಮದಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ದಾರಿ ತೋರುತ್ತದೆ ಎಂದು ಭಾರತೀಯ ಶಾಸ್ತ್ರಗಳಲ್ಲಿ ನಂಬಿಕೆಯಿದೆ.

ಈ ಎಲೆಗಳು ಶ್ರೀ ಮಹಾಲಕ್ಷ್ಮಿ ಮತ್ತು ಶ್ರೀಮಹಾವಿಷ್ಣುವಿಗೆ ಪ್ರಿಯವಾದ್ದರಿಂದ, ಈ ದೇವತೆಗಳ ಕೃಪೆ ಮನೆಯಲ್ಲಿ ನೆಲೆಸುತ್ತದೆ. ಇದರ ಪರಿಣಾಮವಾಗಿ ಕುಟುಂಬದಲ್ಲಿ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ, ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ.
ಅಷ್ಟೇ ಅಲ್ಲದೆ, ಮಾವಿನ ಎಲೆಗಳು ಗ್ರಹ ದೋಷ ನಿವಾರಣೆಗೂ ಸಹಾಯಮಾಡುತ್ತವೆ ಎಂಬ ನಂಬಿಕೆವಿದೆ. ಮನೆಗೆ ಬರುವ ಅಹಿತಕರ ವಿದ್ಯಮಾನಗಳು, ಕಲಹಗಳು, ಮನಸ್ಥಾಪಗಳೆಲ್ಲವೂ ನಿಯಂತ್ರಣಕ್ಕಿಳಿದಂತೆ ಮನೆಯಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ.

ಈ ಎಲೆಗಳನ್ನು ಬಳಸುವಾಗ ಸ್ವಚ್ಛವಾಗಿ ತೊಳೆಯಬೇಕು ಹಾಗೂ ಅರಸಿನ ಕುಂಕುಮವನ್ನಿಟ್ಟು ಕಲಶದ ಮೇಲೆ ಅಥವಾ ಕೆಂಪು ಬಣ್ಣದ ಬಟ್ಟೆಯ ಮೇಲೆ ಇಡುವುದು ಶ್ರೇಷ್ಠ.