spot_img

ಮಧುಮೇಹಿಗಳಿಗೆ ಎಚ್ಚರಿಕೆ! ಈ ಹಣ್ಣುಗಳು ಶುಗರ್ ಲೆವೆಲ್ ಹೆಚ್ಚಿಸಬಹುದು

Date:

ಮಧುಮೇಹವು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು, ರಕ್ತದಲ್ಲಿನ ಶುಗರ್ ಲೆವೆಲ್ ನಿಯಂತ್ರಣದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಸಿಹಿತಿಂಡಿಗಳಷ್ಟೇ ಅಲ್ಲ, ಕೆಲವೊಂದು ಹಣ್ಣುಗಳಲ್ಲೂ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶವಿರುವುದರಿಂದ ಮಧುಮೇಹಿಗಳಿಗೆ ಅಪಾಯಕಾರಿಯಾಗಿದೆ.

ಮಧುಮೇಹಿಗಳು ತಪ್ಪಿಸಬೇಕಾದ ಹಣ್ಣುಗಳು:

ಮಾವಿನ ಹಣ್ಣು: ಈ ಹಣ್ಣಿನ ಸಿಹಿಯು ರಕ್ತದಲ್ಲಿನ ಶುಗರ್ ಲೆವೆಲ್ ಅನ್ನು ವೇಗವಾಗಿ ಹೆಚ್ಚಿಸಬಹುದು.
ದ್ರಾಕ್ಷಿ: ನೈಸರ್ಗಿಕ ಸಕ್ಕರೆಯ ಅಂಶದಿಂದ ಮಧುಮೇಹಿಗಳಿಗೆ ಇದನ್ನು ತಿನ್ನುವುದು ಸೂಕ್ತವಲ್ಲ.
ಲಿಚಿ: ಸಕ್ಕರೆಯ ಅಂಶ ಹೆಚ್ಚಿರುವುದರಿಂದ ಇದೂ ಅಪಾಯಕಾರಿ.
ಕಲ್ಲಂಗಡಿ: ನೀರಿನ ಕೊರತೆಯನ್ನು ನೀಗಿಸುತ್ತದಾದರೂ ಶುಗರ್ ಲೆವೆಲ್ ಏರಿಸಬಹುದು.
ಅನಾನಸ್: ಕಾರ್ಬೋಹೈಡ್ರೇಟ್ ಹಾಗೂ ಶುಗರ್ ಪ್ರಮಾಣ ಹೆಚ್ಚು ಇದ್ದುದರಿಂದ ಮುಂಜಾಗ್ರತೆ ಅಗತ್ಯ.
ಬಾಳೆ ಹಣ್ಣು: ಮಧ್ಯಮ ಗಾತ್ರದ ಬಾಳೆ ಹಣ್ಣಿನಲ್ಲಿ 27 ಗ್ರಾಂ ಕಾರ್ಬೋಹೈಡ್ರೇಟ್ ಹಾಗೂ 14 ಗ್ರಾಂ ಸಕ್ಕರೆ ಇರುವುದರಿಂದ ಮಧುಮೇಹಿಗಳಿಗೆ ತಕ್ಷಣ ಶುಗರ್ ಲೆವೆಲ್ ಹೆಚ್ಚಿಸುವ ಸಾಧ್ಯತೆ ಇರುತ್ತದೆ.
ಮಧುಮೇಹಿಯರು ಈ ಹಣ್ಣುಗಳ ಸೇವನೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಜಾತಿಗಣತಿ ವರದಿ ಬಗ್ಗೆ ನಂಬಿಕೆ ಇಲ್ಲದಿದ್ದರೆ ಜಯಪ್ರಕಾಶ ಹೆಗ್ಡೆ ಬಳಿ ಕೇಳಿ: ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

“ಜಾತಿಗಣತಿ ವರದಿ ಸಿದ್ದರಾಮಯ್ಯ ಮನೆಯಲ್ಲಿ ಇದೆ” ಎನ್ನುವ ಆರ್. ಅಶೋಕ್ ಆರೋಪಕ್ಕೆ ಡಿಕೆಶಿ ತಿರುಗೇಟಾಗಿ ಜಯಪ್ರಕಾಶ ಹೆಗ್ಡೆಯವರ ಬಳಿ ಕೇಳಬಹುದು ಎಂದರು.

ಚಿನ್ನದ ದರ ಇತಿಹಾಸದ ಗರಿಷ್ಠ ಮಟ್ಟಕ್ಕೆ: ದೆಹಲಿಯಲ್ಲಿ 10 ಗ್ರಾಂ ಚಿನ್ನ ₹99,800, ಬೆಳ್ಳಿಯೂ ಏರಿಕೆ

ದೇಶದ ಚಿನ್ನ ಮಾರುಕಟ್ಟೆಯಲ್ಲಿ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಸೋಮವಾರ ಚಿನ್ನದ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

ಮುಂಬೈದಿಂದ ಮಂಗಳೂರಿಗೆ ಸಾಗುತ್ತಿದ್ದ ಐರಾವತ ಬಸ್ಸಿನ ಸೀಟಿನಲ್ಲೇ ಪ್ರಾಣಬಿಟ್ಟ ಪ್ರಯಾಣಿಕ

ಮುಂಬೈನಿಂದ ಮಂಗಳೂರಿಗೆ ತೆರಳುತ್ತಿದ್ದ KSRTC ಐರಾವತ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವರು ಸೀಟಿನಲ್ಲಿ ಕುಳಿತಲ್ಲಿಯೇ ಮೃತಪಟ್ಟ ಘಟನೆ ಏಪ್ರಿಲ್ 21 ರಂದು ಮುಂಜಾನೆ ಉಡುಪಿಯಲ್ಲಿ ನಡೆದಿದೆ.

ದಿನ ವಿಶೇಷ – ರಾಷ್ಟ್ರೀಯ ಭೂ ದಿನ

ಭೂಮಿಯನ್ನು ಪ್ರೀತಿಸದೆ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಭೂಮಿಯನ್ನು ಹಾಗೂ ಪರಿಸರವನ್ನು ಪ್ರೀತಿಸಬೇಕು ಎನ್ನುವ ಉದ್ದೇಶದಿಂದ ಪಾಶ್ಚಾತ್ಯರು ಈ ದಿನವನ್ನು ಭೂಮಿಯ ನೆನಪಿನಲ್ಲಿ ಸೀಮಿತವಾಗಿಸಿದ್ದಾರೆ.