spot_img

ಸಾಧಾರಣ ತರಕಾರಿಯಲ್ಲ ಇದು! ಆರೋಗ್ಯದ ಖಜಾನೆಯಾದ ಕೆಸುವಿನ ಗಡ್ಡೆಯ ಉಪಯೋಗಗಳು

Date:

taro root22

ಕೆಸುವಿನ ಗಡ್ಡೆ ಅಂದರೆ ಸಾಮಾನ್ಯವಾಗಿ ಅಡುಗೆ ಮನೆಯ ಸರಾಸರಿ ತರಕಾರಿ ಎಂದು ಭಾವಿಸುವವರು ಹೆಚ್ಚು. ಆದರೆ ಪುಟ್ಟದಾಗಿದ್ದರೂ ಇದರಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ನೀಡುವ ಲಾಭ ಅಪಾರ. ದಿನನಿತ್ಯದ ಆಹಾರದಲ್ಲಿ ಈ ಗಡ್ಡೆಯನ್ನು ಸೇರಿಸಿಕೊಂಡರೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು.

ಮಧುಮೇಹ ನಿಯಂತ್ರಣಕ್ಕೆ ಸಹಾಯ:
ಕೆಸುವಿನ ಗಡ್ಡೆಯಲ್ಲಿರುವ ಫೈಬರ್ ಆಹಾರದ ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ, ಗ್ಲೂಕೋಸ್‌ ಹೀರಿಕೊಳ್ಳುವಿಕೆಯನ್ನು ತಗ್ಗಿಸುತ್ತದೆ. ಇದರ ಪರಿಣಾಮವಾಗಿ ಇನ್ಸುಲಿನ್ ನಿಯಂತ್ರಿತವಾಗಿ ಬಿಡುಗಡೆ ಆಗಿ, ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಹೀಗಾಗಿ ಮಧುಮೇಹಿಗಳು ಇದನ್ನು ನಿಗದಿತವಾಗಿ ಸೇವನೆ ಮಾಡಬಹುದು.

ಹೃದಯ ಆರೋಗ್ಯಕ್ಕೆ ಲಾಭ:
ಇದರಲ್ಲಿರುವ ಪೊಟ್ಯಾಸಿಯಮ್ ದೇಹದಲ್ಲಿ ಸೋಡಿಯಂ ಪ್ರಮಾಣವನ್ನು ಸಮತೋಲನದಲ್ಲಿಟ್ಟುಕೊಳ್ಳುತ್ತವೆ. ಇದರ ಪರಿಣಾಮವಾಗಿ ರಕ್ತದೊತ್ತಡ ನಿಯಂತ್ರಣವಾಗುತ್ತದೆ ಮತ್ತು ಹೃದಯದ ಕಾರ್ಯ ಚಟುವಟಿಕೆ ಉತ್ತಮವಾಗಿರುತ್ತದೆ.

ಕ್ಯಾನ್ಸರ್ ತಡೆಗೆ ಸಹಾಯಕ:
ಆಂಟಿ ಆಕ್ಸಿಡೆಂಟ್ ಅಂಶಗಳಿಂದ ಕೂಡಿರುವ ಕೆಸುವಿನ ಗಡ್ಡೆ ಕ್ಯಾನ್ಸರ್ ಕಾರಕ ಜೀವಕೋಶಗಳ ಬೆಳವಣಿಗೆಯನ್ನು ತಡೆಗಟ್ಟುತ್ತದೆ. ಇದು ವಿಶೇಷವಾಗಿ ಬಾಯಿ ಮತ್ತು ಶ್ವಾಸಕೋಶ ಕ್ಯಾನ್ಸರ್‌ಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ.

ಜೀರ್ಣಕ್ರಿಯೆ ಮತ್ತು ಹೊಟ್ಟೆ ಸಮಸ್ಯೆಗಳಿಗೆ ಪರಿಹಾರ:
ಮಲಬದ್ಧತೆ, ಗ್ಯಾಸ್ಟ್ರಿಕ್, ಆಸಿಡಿಟಿ, ಮೂಲವ್ಯಾಧಿ ಮುಂತಾದ ಹೊಟ್ಟೆ ಸಂಬಂಧಿತ ಸಮಸ್ಯೆಗಳನ್ನು ತೊಡೆದು ಹಾಕಲು ಸಹಾಯಕವಾಗುತ್ತದೆ.

ಹೆಚ್ಚಿನ ಲಾಭ ಪಡೆಯಲು ಹೇಗೆ ಸೇವನೆ ಮಾಡಬೇಕು?
ಕೆಸುವಿನ ಗಡ್ಡೆಯನ್ನು ಚೆನ್ನಾಗಿ ತೊಳೆದು ಬೇಯಿಸಿ ಪಲ್ಯವಾಗಿ ಸೇವಿಸಬಹುದು. ಹಾಗೆಯೇ ರೋಸ್ಟ್ ಮಾಡಿ ಮಸಾಲೆ ಸೇರಿಸಿ ತಿಂದರೂ ಉತ್ತಮ. ನಿತ್ಯ ಆಹಾರದಲ್ಲಿ ಚಿಕ್ಕ ಪ್ರಮಾಣದಲ್ಲಿ ಬಳಸಿದರೂ ಆರೋಗ್ಯದಲ್ಲಿ ಉತ್ತಮ ಫಲಿತಾಂಶವನ್ನು ಕಾಣಬಹುದು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ತೆಲಂಗಾಣ ಭಾರತದ 29ನೇ ರಾಜ್ಯವಾಗಿ ಹುಟ್ಟಿಕೊಂಡ ದಿನ

ಜೂನ್ 2, 2014 ಭಾರತದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಈ ದಿನ, ದಶಕಗಳ ಸಾಮಾಜಿಕ ಹೋರಾಟದ ನಂತರ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಅಸ್ತಿತ್ವಕ್ಕೆ ಬಂತು

40 ವರ್ಷದ ನಂತರ ಮುಖದ ಕಾಂತಿಯನ್ನು ಉಳಿಸಿಕೊಳ್ಳಲು 6 ಸುಲಭ ತಂತ್ರಗಳು!

ಸರಿಯಾದ ಪೋಷಣೆ ಮತ್ತು ಜೀವನಶೈಲಿಯ ಸಣ್ಣ ಸಣ್ಣ ಬದಲಾವಣೆಗಳಿಂದ 40 ನಂತರವೂ ಯುವ ತೇಜಸ್ಸನ್ನು ಕಾಪಾಡಿಕೊಳ್ಳಬಹುದು. ಇಲ್ಲಿ ಅದಕ್ಕಾಗಿ 6 ಪರಿಣಾಮಕಾರಿ ವಿಧಾನಗಳು

ಶಿವರಾಜ್ ಕುಮಾರ್ ಅವರ ಧೃಢ ಹೇಳಿಕೆ: “ಕನ್ನಡದ ಬಗ್ಗೆ ನನ್ನ ನಿಷ್ಠೆ ಅನನ್ಯ, ಕ್ಷಮೆ ಕೇಳುವ ಬಾಧ್ಯತೆ ಕಮಲ್ ಹಾಸನ್ ಅವರದು”

ನಟ ಶಿವರಾಜ್ ಕುಮಾರ್ ಅವರು ಕಮಲ್ ಹಾಸನ್ ಅವರ ಇತ್ತೀಚಿನ ವಿವಾದಾತ್ಮಕ ಹೇಳಿಕೆಗಳಿಗೆ ಸ್ಪಷ್ಟ ಪ್ರತಿಕ್ರಿಯೆ ನೀಡಿದ್ದಾರೆ

ಮುಂಗಾರು ಮಳೆಯ ಅಬ್ಬರ: 6 ಜಿಲ್ಲೆಗಳಿಗೆ ರೆಡ್ ಅಲರ್ಟ್

ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಮುಂಗಾರು ಮಳೆ ತನ್ನ ಪೂರ್ಣ ಶಕ್ತಿಯೊಂದಿಗೆ ಆರಂಭವಾಗಿದೆ