spot_img

ಪ್ರೊಸೆಸ್ಡ್ ಆಹಾರದ ನಿಗೂಢ ನಂಟು: ಆರೋಗ್ಯಕ್ಕೆ ರುಚಿಯೇ ವಿಷವಾಗುತ್ತಿದೆ !

Date:

spot_img

ಇತ್ತೀಚಿನ ದಿನಗಳಲ್ಲಿ ಪ್ಯಾಕ್ಟ್ ಫುಡ್ಸ್, ಇನ್‌ಸ್ಟಂಟ್ ಆಹಾರಗಳು, ಬೀದಿ ಬದಿಯ ಜಂಕ್‌ಫುಡ್ಸ್ ಮತ್ತು ಇತರ ಸಂಸ್ಕರಿಸಿದ ಆಹಾರಗಳ ಬಳಕೆಯು ಗಣನೀಯವಾಗಿ ಹೆಚ್ಚಾಗಿದೆ. ಆಕರ್ಷಕ ಪ್ಯಾಕಿಂಗ್ ಮತ್ತು ಸುಲಭ ಪ್ರಾಪ್ಯತೆಯಿಂದಾಗಿ ಹಲವರು ಈ ಆಹಾರಗಳತ್ತ ಸೆಳೆಯಲ್ಪಡುತ್ತಿದ್ದಾರೆ. ಆದರೆ ಈ ಆಹಾರಗಳಲ್ಲಿ ಉಪ್ಪು, ಸಕ್ಕರೆ, ಕೃತಕ ಬಣ್ಣ, ರಾಸಾಯನಿಕ ಅಡಿಟಿವ್‌ಗಳು ಮತ್ತು ಹಾನಿಕಾರಕ ಕೊಬ್ಬಿನ ಅಂಶಗಳು ಹೆಚ್ಚು ಅಂಶದಲ್ಲಿದ್ದು, ದೀರ್ಘಕಾಲದ ಬಳಕೆ ಆರೋಗ್ಯಕ್ಕೆ ಮಾರಕವಾಗಬಹುದು.

ಉದಾಹರಣೆಗೆ ಆಲೂಗಡ್ಡೆ ಚಿಪ್ಸ್‌ನಂತಹ ಆಹಾರದಲ್ಲಿ ಅತಿಯಾಗಿ ಕಾರ್ಬೋಹೈಡ್ರೇಟು, ಉಪ್ಪು, ಕೊಬ್ಬು ಇರುತ್ತದೆ. ಈ ಆಹಾರಗಳು ದೇಹಕ್ಕೆ ಅಗತ್ಯವಲ್ಲದ ಡೋಪಮೈನ್ ರಿಲೀಸ್ ಅನ್ನು ಹೆಚ್ಚಿಸಿ, ಆಹಾರದ ವ್ಯಸನಕ್ಕೆ ಕಾರಣವಾಗುತ್ತವೆ. ಇದು ನಿತ್ಯದ ಆಹಾರದ ಮೇಲೆ ಬೇಸರ ಉಂಟುಮಾಡಿ, ಇನ್ನಷ್ಟು ಜಂಕ್‌ಫುಡ್‌ಗಳ ಬಳಕೆಗೆ ದಾರಿ ತೆರೆದೀತು.

ಅಷ್ಟೆ ಅಲ್ಲದೆ, ಈ ಸಂಸ್ಕರಿತ ಆಹಾರಗಳಿಂದ ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳು, ತೂಕ ಹೆಚ್ಚಳ ಮತ್ತು ರಕ್ತದೊತ್ತಡದಂತಹ ದೀರ್ಘಕಾಲಿಕ ಕಾಯಿಲೆಗಳ ಭೀತಿಯೂ ಇದೆ. ಆದ್ದರಿಂದ, ಫುಡ್ ಲೇಬಲಿಂಗ್‌ ಬಗ್ಗೆ ತಿಳುವಳಿಕೆ ಇರಬೇಕು. ಪ್ರತಿಯೊಂದು ಉತ್ಪನ್ನದಲ್ಲಿ ಇರುವ ಪೋಷಕಾಂಶ, ಉಪ್ಪು, ಸಕ್ಕರೆ, ಟ್ರಾನ್ಸ್ ಫ್ಯಾಟ್ ಪ್ರಮಾಣಗಳನ್ನು ಗಮನಿಸಿ ಸೇವನೆ ಮಾಡುವುದು ಆರೋಗ್ಯಕರ ಜೀವನ ಶೈಲಿಗೆ ಅವಶ್ಯಕ.

ಪೀನಟ್ ಬಟರ್, ಪನ್ನೀರ್, ಟೊಫು ಇಂತಹ ಸಂಸ್ಕರಿತ ಪದಾರ್ಥಗಳು ಕೆಲವೊಮ್ಮೆ ಉಪಯುಕ್ತವಾದರೂ, ಅವುಗಳ ಬಳಕೆ ಮಿತಿಯಲ್ಲಿರಬೇಕೆಂಬುದೇ ಉತ್ತಮ. ನೈಸರ್ಗಿಕ ಆಹಾರವಸ್ತುಗಳು, ಕಡಿಮೆ ಸಂಸ್ಕರಣೆಯೊಂದಿಗೆ ನಮ್ಮ ಆಹಾರ ಪಟ್ಟಿಯಲ್ಲಿರಬೇಕು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಡುಪಿ ಜಿಲ್ಲೆಗೆ ವರುಣನ ಆರ್ಭಟ: ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಮತ್ತು ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ, ಉಡುಪಿ ಜಿಲ್ಲಾಡಳಿತವು ಮಹತ್ವದ ನಿರ್ಧಾರ ಕೈಗೊಂಡಿದೆ.

ಸಿಂಗಾಪುರಕ್ಕೆ ಚೀನಾ ಮೂಲದ ಸೈಬರ್ ಭೀತಿ: ರಾಷ್ಟ್ರೀಯ ಮಹತ್ವದ ಮೂಲಸೌಕರ್ಯಗಳ ಮೇಲೆ ಗುರಿ

ಸಿಂಗಾಪುರ ಪ್ರಸ್ತುತ ಅತಿ ಸಂಕೀರ್ಣವಾದ ಸೈಬರ್ ಆಕ್ರಮಣವನ್ನು ಎದುರಿಸುತ್ತಿದೆ, ಇದು ದೇಶದ ಭದ್ರತೆ ಮತ್ತು ಪ್ರಮುಖ ಸೇವೆಗಳ ವ್ಯವಸ್ಥೆಗಳಿಗೆ ತೀವ್ರ ಅಪಾಯವನ್ನುಂಟುಮಾಡಿದೆ

ಕಾರ್ಕಳ ಕಾಂಗ್ರೆಸ್ ನಿಂದ ಕೀಳು ಮಟ್ಟದ ರಾಜಕೀಯ – ದಿನೇಶ್ ಪೂಜಾರಿ ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷರು

ಗ್ರಾಮ ಪಂಚಾಯತ್ ಸದಸ್ಯರ ವಿರುದ್ಧ ಕಾರ್ಕಳ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬೋಳ ಗ್ರಾಮ ಪಂಚಾಯತ್ ಮುಂಬಾಗ ಮಾಡಿರುವ ಪ್ರತಿಭಟನೆಯು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಸರಣಿ ವೈಫಲ್ಯವನ್ನು ಮರೆಮಾಚಲು ಮಾಡಿರುವ ನಾಟಕವಾಗಿದೆ.

“ನೀವೇ ದುಡಿಯಬಹುದಲ್ಲ?”: ₹12 ಕೋಟಿ ಜೀವನಾಂಶ ಕೋರಿದ್ದ ಮಹಿಳೆಗೆ ಸುಪ್ರೀಂ ತರಾಟೆ!

ವೈವಾಹಿಕ ವಿವಾದ ಪ್ರಕರಣವೊಂದರಲ್ಲಿ ₹12 ಕೋಟಿ ಜೀವನಾಂಶ, ಬಿಎಂಡಬ್ಲ್ಯೂ ಕಾರು ಮತ್ತು ಮುಂಬೈನಲ್ಲಿ ಮನೆಯನ್ನು ಪರಿಹಾರವಾಗಿ ನೀಡಬೇಕೆಂದು ಕೋರಿದ್ದ ಮಹಿಳೆಯೊಬ್ಬರಿಗೆ, "ತಾವೇ ದುಡಿಯಬಹುದಲ್ಲವೇ?" ಎಂದು ಸುಪ್ರೀಂ ಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ.