spot_img

ಪ್ರೊಸೆಸ್ಡ್ ಆಹಾರದ ನಿಗೂಢ ನಂಟು: ಆರೋಗ್ಯಕ್ಕೆ ರುಚಿಯೇ ವಿಷವಾಗುತ್ತಿದೆ !

Date:

ಇತ್ತೀಚಿನ ದಿನಗಳಲ್ಲಿ ಪ್ಯಾಕ್ಟ್ ಫುಡ್ಸ್, ಇನ್‌ಸ್ಟಂಟ್ ಆಹಾರಗಳು, ಬೀದಿ ಬದಿಯ ಜಂಕ್‌ಫುಡ್ಸ್ ಮತ್ತು ಇತರ ಸಂಸ್ಕರಿಸಿದ ಆಹಾರಗಳ ಬಳಕೆಯು ಗಣನೀಯವಾಗಿ ಹೆಚ್ಚಾಗಿದೆ. ಆಕರ್ಷಕ ಪ್ಯಾಕಿಂಗ್ ಮತ್ತು ಸುಲಭ ಪ್ರಾಪ್ಯತೆಯಿಂದಾಗಿ ಹಲವರು ಈ ಆಹಾರಗಳತ್ತ ಸೆಳೆಯಲ್ಪಡುತ್ತಿದ್ದಾರೆ. ಆದರೆ ಈ ಆಹಾರಗಳಲ್ಲಿ ಉಪ್ಪು, ಸಕ್ಕರೆ, ಕೃತಕ ಬಣ್ಣ, ರಾಸಾಯನಿಕ ಅಡಿಟಿವ್‌ಗಳು ಮತ್ತು ಹಾನಿಕಾರಕ ಕೊಬ್ಬಿನ ಅಂಶಗಳು ಹೆಚ್ಚು ಅಂಶದಲ್ಲಿದ್ದು, ದೀರ್ಘಕಾಲದ ಬಳಕೆ ಆರೋಗ್ಯಕ್ಕೆ ಮಾರಕವಾಗಬಹುದು.

ಉದಾಹರಣೆಗೆ ಆಲೂಗಡ್ಡೆ ಚಿಪ್ಸ್‌ನಂತಹ ಆಹಾರದಲ್ಲಿ ಅತಿಯಾಗಿ ಕಾರ್ಬೋಹೈಡ್ರೇಟು, ಉಪ್ಪು, ಕೊಬ್ಬು ಇರುತ್ತದೆ. ಈ ಆಹಾರಗಳು ದೇಹಕ್ಕೆ ಅಗತ್ಯವಲ್ಲದ ಡೋಪಮೈನ್ ರಿಲೀಸ್ ಅನ್ನು ಹೆಚ್ಚಿಸಿ, ಆಹಾರದ ವ್ಯಸನಕ್ಕೆ ಕಾರಣವಾಗುತ್ತವೆ. ಇದು ನಿತ್ಯದ ಆಹಾರದ ಮೇಲೆ ಬೇಸರ ಉಂಟುಮಾಡಿ, ಇನ್ನಷ್ಟು ಜಂಕ್‌ಫುಡ್‌ಗಳ ಬಳಕೆಗೆ ದಾರಿ ತೆರೆದೀತು.

ಅಷ್ಟೆ ಅಲ್ಲದೆ, ಈ ಸಂಸ್ಕರಿತ ಆಹಾರಗಳಿಂದ ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳು, ತೂಕ ಹೆಚ್ಚಳ ಮತ್ತು ರಕ್ತದೊತ್ತಡದಂತಹ ದೀರ್ಘಕಾಲಿಕ ಕಾಯಿಲೆಗಳ ಭೀತಿಯೂ ಇದೆ. ಆದ್ದರಿಂದ, ಫುಡ್ ಲೇಬಲಿಂಗ್‌ ಬಗ್ಗೆ ತಿಳುವಳಿಕೆ ಇರಬೇಕು. ಪ್ರತಿಯೊಂದು ಉತ್ಪನ್ನದಲ್ಲಿ ಇರುವ ಪೋಷಕಾಂಶ, ಉಪ್ಪು, ಸಕ್ಕರೆ, ಟ್ರಾನ್ಸ್ ಫ್ಯಾಟ್ ಪ್ರಮಾಣಗಳನ್ನು ಗಮನಿಸಿ ಸೇವನೆ ಮಾಡುವುದು ಆರೋಗ್ಯಕರ ಜೀವನ ಶೈಲಿಗೆ ಅವಶ್ಯಕ.

ಪೀನಟ್ ಬಟರ್, ಪನ್ನೀರ್, ಟೊಫು ಇಂತಹ ಸಂಸ್ಕರಿತ ಪದಾರ್ಥಗಳು ಕೆಲವೊಮ್ಮೆ ಉಪಯುಕ್ತವಾದರೂ, ಅವುಗಳ ಬಳಕೆ ಮಿತಿಯಲ್ಲಿರಬೇಕೆಂಬುದೇ ಉತ್ತಮ. ನೈಸರ್ಗಿಕ ಆಹಾರವಸ್ತುಗಳು, ಕಡಿಮೆ ಸಂಸ್ಕರಣೆಯೊಂದಿಗೆ ನಮ್ಮ ಆಹಾರ ಪಟ್ಟಿಯಲ್ಲಿರಬೇಕು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಸೇವಾನಿರತ ಹಾಗೂ ನಿವೃತ್ತ ಶಿಕ್ಷಕರನ್ನು ಗೌರವಿಸಿದ ಉಪಾಧ್ಯಾಯ ಕಲಾ ಪ್ರತಿಷ್ಠಾನ: ಶಿಕ್ಷಕರ ದಿನಕ್ಕೆ ಮಾದರಿ ಕಾರ್ಯಕ್ರಮ

ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಮೂಡುಬೆಳ್ಳೆಯ ಉಪಾಧ್ಯಾಯ ಕಲಾ ಪ್ರತಿಷ್ಠಾನವು ಇಬ್ಬರು ಹಿರಿಯ ಶಿಕ್ಷಕರನ್ನು ಅವರವರ ಮನೆಗೇ ಹೋಗಿ ಗೌರವಿಸಿತು.

ಯುವಶಕ್ತಿ ಬೆಳುವಾಯಿ ಬಳಗಕ್ಕೆ‌ 12ನೆ ವಾರ್ಷಿಕೋತ್ಸವದ ಸಂಭ್ರಮ.

ಯುವಶಕ್ತಿ ಬೆಳುವಾಯಿ ವಾಟ್ಸಾಪ್ ಬಳಗ ಇದರ 12 ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಯೋಗದೊಂದಿಗೆ ಆಧಾರ್ ನೊಂದಣಿ, ತಿದ್ದುಪಡಿ ಹಾಗೂ ಅಂಚೆ ಇಲಾಖೆ-ಸಮಗ್ರ ರಕ್ಷಣಾ ಯೋಜನೆ

ಉಡುಪಿಯಲ್ಲಿ ಆತಂಕ: ಕಾಲೇಜು ಶುಲ್ಕ ಪಾವತಿಗೆ ತೆರಳಿದ ಯುವತಿ ನಾಪತ್ತೆ

ವಿದ್ಯಾರ್ಥಿನಿಯೊಬ್ಬಳು ಕಾಲೇಜು ಶುಲ್ಕ ಪಾವತಿಸಲು ತೆರಳಿದ್ದ ವೇಳೆ ಕಾಣೆಯಾಗಿರುವ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೈಲೂರು ಮೇನ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ: ಎಸ್.ಡಿ.ಎಂ.ಸಿ ಮತ್ತು ವಿದ್ಯಾರ್ಥಿಗಳಿಂದ ಅದ್ಧೂರಿ ಆಯೋಜನೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಮೇನ್ ಇಲ್ಲಿ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು