spot_img

ಹಾಗಲಕಾಯಿಯ ಆರೋಗ್ಯ ರಹಸ್ಯ!

Date:

ಆಹಾರ ಪಟ್ಟಿಯಿಂದ ಬಹುತೇಕ ಜನರು ದೂರ ಇಡುವ ತರಕಾರಿ ಎಂದರೆ ಹಾಗಲಕಾಯಿ. ತೀಕ್ಷ್ಣ ಕಹಿತನದಿಂದ ಜನರಲ್ಲಿ ಅದನ್ನು ಸೇವಿಸುವ ಆಸಕ್ತಿ ಕಡಿಮೆ ಇದ್ದರೂ, ಅದರಲ್ಲಿರುವ ಆರೋಗ್ಯ ಲಾಭಗಳು ವೈಜ್ಞಾನಿಕವಾಗಿ ಸಾಬೀತಾಗಿದೆ. ಅಧ್ಯಯನಗಳ ಪ್ರಕಾರ, ಮಧುಮೇಹ ನಿಯಂತ್ರಣ, ರಕ್ತ ಶುದ್ಧೀಕರಣ, ಹೃದಯ ಆರೋಗ್ಯ, ಚರ್ಮ-ಕೂದಲು ಕಾಳಜಿಗೆ ಹಾಗಲಕಾಯಿ ಮಹತ್ವದ ಪಾತ್ರ ವಹಿಸುತ್ತದೆ.

ಹಾಗಲಕಾಯಿಯಿಂದ ಲಭ್ಯವಾಗುವ ಮುಖ್ಯ ಪ್ರಯೋಜನಗಳು:

  • ಮಧುಮೇಹ ನಿಯಂತ್ರಣ: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 30 ಮಿ.ಲೀ. ಹಾಗಲಕಾಯಿ ಜ್ಯೂಸ್ ಸೇವನೆಯಿಂದ ಬಹುತೇಕ ಫಲವತ್ತಾದ ಪರಿಣಾಮ.
  • ರಕ್ತ ಶುದ್ಧೀಕರಣ: ಟಾಕ್ಸಿನ್‌ಗಳನ್ನು ದೇಹದಿಂದ ಹೊರಹಾಕಿ, ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
  • ಯಕೃತ್ ಸುರಕ್ಷೆ: ಆಲ್ಕೋಹಾಲ್ ಸೇವನೆಯಿಂದ ಉಂಟಾಗುವ ಯಕೃತ್ ಹಾನಿಯನ್ನು ತಡೆಯುತ್ತದೆ.
  • ಕೊಲೆಸ್ಟ್ರಾಲ್ ನಿಯಂತ್ರಣ: ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯಾಘಾತ, ಪಾರ್ಶ್ವವಾಯು ಅಪಾಯದಿಂದ ರಕ್ಷಿಸುತ್ತದೆ.
  • ರೋಗ ನಿರೋಧಕ ಶಕ್ತಿ: ಸೋಂಕುಗಳಿಗೆ ತಡೆ ನೀಡುವ ರಕ್ಷಕ ಶಕ್ತಿ ಹೆಚ್ಚಿಸುತ್ತದೆ.
  • ಚರ್ಮ-ಕೂದಲು ಆರೋಗ್ಯ: ಮೊಡವೆ, ಬೊಕ್ಕೆ ನಿವಾರಣೆ ಹಾಗೂ ಕೂದಲು ಉದುರುವಿಕೆಗೆ ಶಮನ ನೀಡುತ್ತದೆ.

ಹಾಗಲಕಾಯಿ ಜ್ಯೂಸ್ ತಯಾರಿಸುವ ವಿಧಾನ:

ಹಾಗಲಕಾಯಿ ತೊಳೆಯಿರಿ, ಸಿಪ್ಪೆ ತೆಗೆಯಿರಿ, ಬೀಜ ತೆಗೆದು ತುಂಡು ಮಾಡಿ.

ಸ್ವಲ್ಪ ಉಪ್ಪು ಹಾಕಿ ನೀರಿನಲ್ಲಿ 10 ನಿಮಿಷ ನೆನೆಸಿಡಿ.

ನಂತರ ಮಿಕ್ಸರ್‌ನಲ್ಲಿ ನೀರು ಸೇರಿಸಿ ಚೆನ್ನಾಗಿ ರುಬ್ಬಿ ಜ್ಯೂಸ್ ತಯಾರಿಸಬಹುದು.

ಎಚ್ಚರಿಕೆ:

  • ಒಂದು ದಿನಕ್ಕೆ 30 ಮಿ.ಲೀ.ಗಿಂತ ಹೆಚ್ಚು ಸೇವನೆ ಬೇಡ.
  • ಗರ್ಭಿಣಿಯರು ಸೇವನೆ ಮಾಡುವ ಮುನ್ನ ವೈದ್ಯರ ಸಲಹೆ ಪಡೆಯಬೇಕು.
  • ಅತಿಯಾದ ಸೇವನೆಯಿಂದ ಹೊಟ್ಟೆನೋವು, ಅತಿಸಾರ ಉಂಟಾಗಬಹುದು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಬಚೇಂದ್ರಿ ಪಾಲ್

ಬಚೇಂದ್ರಿ ಪಾಲ್ 1984ರ ಮೇ 23ರಂದು, ಪ್ರಪಂಚದ ಅತ್ಯುನ್ನತ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು ಏರುವ ಮೂಲಕ ಇವರು ಇತಿಹಾಸ ಸೃಷ್ಟಿಸಿದರು.

ಸರಕಾರಿ ಶಾಲೆಗಳಲ್ಲಿ ಜೂನ್ 30ರೊಳಗೆ ವಿದ್ಯಾರ್ಥಿ ದಾಖಲಾತಿ ಪೂರ್ಣಗೊಳಿಸಿ: ಶಿಕ್ಷಣ ಇಲಾಖೆಯಿಂದ ಮುಖ್ಯ ಶಿಕ್ಷಕರಿಗೆ ನಿರ್ದೇಶನ

ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ಶಾಲಾ ಶಿಕ್ಷಣ ಇಲಾಖೆ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದೆ.

ಪಬ್ ಮುಂದೆ ಕುಡಿದ ಮತ್ತಿನಲ್ಲಿ ಯುವತಿಯರ ಮಾರಾಮಾರಿ

ಮಧ್ಯಪ್ರದೇಶದ ಇಂದೋರ್‌ನ ವಿಜಯನಗರ ಪ್ರದೇಶದಲ್ಲಿ ಪಬ್‌ನಿಂದ ಹೊರಬಂದ ನಂತರ ಕುಡಿದ ಮತ್ತಿನಲ್ಲಿ ಯುವತಿಯರು ಹೊಡೆದಾಡಿದ ಪ್ರಕರಣವು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

‘ಕೊತ್ತಲವಾಡಿ’ ಟೀಸರ್ ಬಿಡುಗಡೆ: ಸೊಸೆ ರಾಧಿಕಾಳ ಬಗ್ಗೆ ಯಶ್ ತಾಯಿ ಪುಷ್ಪಾರವರ ಮನದಾಳದ ಮೆಚ್ಚುಗೆ

ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅವರು ಸಿನಿಮಾ ನಿರ್ಮಾಣದ ಕ್ಷೇತ್ರದಲ್ಲಿ ಹೆಜ್ಜೆ ಇಟ್ಟಿದ್ದಾರೆ.