spot_img

ಹಾಗಲಕಾಯಿಯ ಆರೋಗ್ಯ ರಹಸ್ಯ!

Date:

spot_img

ಆಹಾರ ಪಟ್ಟಿಯಿಂದ ಬಹುತೇಕ ಜನರು ದೂರ ಇಡುವ ತರಕಾರಿ ಎಂದರೆ ಹಾಗಲಕಾಯಿ. ತೀಕ್ಷ್ಣ ಕಹಿತನದಿಂದ ಜನರಲ್ಲಿ ಅದನ್ನು ಸೇವಿಸುವ ಆಸಕ್ತಿ ಕಡಿಮೆ ಇದ್ದರೂ, ಅದರಲ್ಲಿರುವ ಆರೋಗ್ಯ ಲಾಭಗಳು ವೈಜ್ಞಾನಿಕವಾಗಿ ಸಾಬೀತಾಗಿದೆ. ಅಧ್ಯಯನಗಳ ಪ್ರಕಾರ, ಮಧುಮೇಹ ನಿಯಂತ್ರಣ, ರಕ್ತ ಶುದ್ಧೀಕರಣ, ಹೃದಯ ಆರೋಗ್ಯ, ಚರ್ಮ-ಕೂದಲು ಕಾಳಜಿಗೆ ಹಾಗಲಕಾಯಿ ಮಹತ್ವದ ಪಾತ್ರ ವಹಿಸುತ್ತದೆ.

ಹಾಗಲಕಾಯಿಯಿಂದ ಲಭ್ಯವಾಗುವ ಮುಖ್ಯ ಪ್ರಯೋಜನಗಳು:

  • ಮಧುಮೇಹ ನಿಯಂತ್ರಣ: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 30 ಮಿ.ಲೀ. ಹಾಗಲಕಾಯಿ ಜ್ಯೂಸ್ ಸೇವನೆಯಿಂದ ಬಹುತೇಕ ಫಲವತ್ತಾದ ಪರಿಣಾಮ.
  • ರಕ್ತ ಶುದ್ಧೀಕರಣ: ಟಾಕ್ಸಿನ್‌ಗಳನ್ನು ದೇಹದಿಂದ ಹೊರಹಾಕಿ, ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
  • ಯಕೃತ್ ಸುರಕ್ಷೆ: ಆಲ್ಕೋಹಾಲ್ ಸೇವನೆಯಿಂದ ಉಂಟಾಗುವ ಯಕೃತ್ ಹಾನಿಯನ್ನು ತಡೆಯುತ್ತದೆ.
  • ಕೊಲೆಸ್ಟ್ರಾಲ್ ನಿಯಂತ್ರಣ: ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯಾಘಾತ, ಪಾರ್ಶ್ವವಾಯು ಅಪಾಯದಿಂದ ರಕ್ಷಿಸುತ್ತದೆ.
  • ರೋಗ ನಿರೋಧಕ ಶಕ್ತಿ: ಸೋಂಕುಗಳಿಗೆ ತಡೆ ನೀಡುವ ರಕ್ಷಕ ಶಕ್ತಿ ಹೆಚ್ಚಿಸುತ್ತದೆ.
  • ಚರ್ಮ-ಕೂದಲು ಆರೋಗ್ಯ: ಮೊಡವೆ, ಬೊಕ್ಕೆ ನಿವಾರಣೆ ಹಾಗೂ ಕೂದಲು ಉದುರುವಿಕೆಗೆ ಶಮನ ನೀಡುತ್ತದೆ.

ಹಾಗಲಕಾಯಿ ಜ್ಯೂಸ್ ತಯಾರಿಸುವ ವಿಧಾನ:

ಹಾಗಲಕಾಯಿ ತೊಳೆಯಿರಿ, ಸಿಪ್ಪೆ ತೆಗೆಯಿರಿ, ಬೀಜ ತೆಗೆದು ತುಂಡು ಮಾಡಿ.

ಸ್ವಲ್ಪ ಉಪ್ಪು ಹಾಕಿ ನೀರಿನಲ್ಲಿ 10 ನಿಮಿಷ ನೆನೆಸಿಡಿ.

ನಂತರ ಮಿಕ್ಸರ್‌ನಲ್ಲಿ ನೀರು ಸೇರಿಸಿ ಚೆನ್ನಾಗಿ ರುಬ್ಬಿ ಜ್ಯೂಸ್ ತಯಾರಿಸಬಹುದು.

ಎಚ್ಚರಿಕೆ:

  • ಒಂದು ದಿನಕ್ಕೆ 30 ಮಿ.ಲೀ.ಗಿಂತ ಹೆಚ್ಚು ಸೇವನೆ ಬೇಡ.
  • ಗರ್ಭಿಣಿಯರು ಸೇವನೆ ಮಾಡುವ ಮುನ್ನ ವೈದ್ಯರ ಸಲಹೆ ಪಡೆಯಬೇಕು.
  • ಅತಿಯಾದ ಸೇವನೆಯಿಂದ ಹೊಟ್ಟೆನೋವು, ಅತಿಸಾರ ಉಂಟಾಗಬಹುದು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ನೆಲದ ಮೇಲೆ ಕುಳಿತು ಊಟ ಮಾಡುವುದರ ಅದ್ಭುತ ಪ್ರಯೋಜನಗಳು

ಇತ್ತೀಚಿನ ಜೀವನಶೈಲಿ ಬದಲಾವಣೆಗಳ ನಡುವೆ, ಹಿಂದಿನ ಉತ್ತಮ ಅಭ್ಯಾಸಗಳು ಮರೆಯಾಗುತ್ತಿವೆ. ಕೆಲ ವರ್ಷಗಳ ಹಿಂದೆ ಕುಟುಂಬದವರೆಲ್ಲಾ ಒಟ್ಟಿಗೆ ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದ ದೃಶ್ಯ ಈಗ ವಿರಳ.

ಕೆಜಿಎಫ್ ಬಾಬು ಮನೆಗೆ R.T.O ದಾಳಿ: ಐಷಾರಾಮಿ ಕಾರುಗಳ ತೆರಿಗೆ ಪರಿಶೀಲನೆ!

ರಾಜಕೀಯ ಮುಖಂಡ ಕೆಜಿಎಫ್ ಬಾಬು ಅವರ ಮನೆಗೆ ಇಂದು ಬೆಳ್ಳಂಬೆಳಗ್ಗೆ ಆರ್ಟಿಓ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಐಷಾರಾಮಿ ಕಾರುಗಳ ತೆರಿಗೆ ಪಾವತಿ ಕುರಿತು ಪರಿಶೀಲನೆ ನಡೆಸಲು ಈ ದಾಳಿ ನಡೆಸಲಾಗಿದೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಉಡುಪಿ ಯೋಜನಾ ಕಚೇರಿಯಲ್ಲಿ ವಾತ್ಸಲ್ಯ ವಿದ್ಯಾನಿಧಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪರಿಸರ ಸಂರಕ್ಷಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅತ್ರಾಡಿಯಲ್ಲಿ ಗಿಡನಾಟಿ ಮತ್ತು ಮಾಹಿತಿ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ .ಸಿ.ಟ್ರಸ್ಟ್ (ರಿ) ಉಡುಪಿ ತಾಲೂಕು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮಣಿಪಾಲ ವಲಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ರಾಡಿ ಇವರ ಸಹಯೋಗದೊಂದಿಗೆ ಗಿಡ ನಾಟಿ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿಯಲ್ಲಿ ನಡೆಯಿತು.