spot_img

ಪ್ರಹ್ಲಾದನ ಭಕ್ತಿಗೆ ಮೆಚ್ಚಿ ನರಸಿಂಹ ಪ್ರಕಟ ಪ್ರಕಟಗೊಂಡ ಸುದಿನ

Date:

ನರಸಿಂಹ ದ್ವಾದಶಿ

ಇಂದು ಪ್ರಹ್ಲಾದನ ಭಕ್ತಿಗೆ ಮೆಚ್ಚಿ ಅವನು ತೋರಿಸಿದ ಕಡೆ ನರಸಿಂಹ ಪ್ರಕಟಕೊಂಡ ಸುದಿನ. ಹಿರಣ್ಯಕಶ್ಯಪನನ್ನು ಕೊಂದು ಪ್ರಹ್ಲಾದನ ಬಳಿ ಬೇಕಾದ ವರವನ್ನು ಕೇಳಲು ಹೇಳುತ್ತಾನೆ. ಭಗವನ್, ನಿನ್ನ ಬಳಿ ನನ್ನ ಅಪೇಕ್ಷೆಯನ್ನು ಹೇಳಿಕೊಂಡರೆ ನಾನು ಭಕ್ತಿಯ ವ್ಯಾಪಾರವನ್ನು ಮಾಡಿದ ಹಾಗೆ ಆಗುತ್ತದೆ ಎಂದು ನಯವಾಗಿ ಭಗವಂತನ ವರವನ್ನು ತಿರಸ್ಕರಿಸುತ್ತಾನೆ. ಆ ಮೂಲಕ ಇತಿಹಾಸದಲ್ಲಿ ಹಾಗೆಯೇ ನಮ್ಮಲ್ಲಿ ಪ್ರಹ್ಲಾದ ಶಾಶ್ವತವಾಗಿ ಉಳಿದಿದ್ದಾನೆ. ಪ್ರಹ್ಲಾದ ಉಳಿದರೆ ಸಾಕಾಗುವುದಿಲ್ಲ ನಮ್ಮೊಳಗೆ ಪ್ರಹ್ಲಾದನನ್ನು ಉಳಿಸಿಕೊಳ್ಳಬೇಕು. ನಾವು ಸಣ್ಣ ಪೂಜೆಯಲ್ಲೂ ಕೂಡ ನೂರಾರು ಬೇಡಿಕೆಗಳನ್ನು ದೇವರ ಮುಂದೆ ಇಟ್ಟು ಭಕ್ತಿಯ ವ್ಯಾಪಾರವನ್ನು ಮಾಡುತ್ತಿದ್ದೇವೆ. ನಮ್ಮೊಳಗಿರುವ ದೇವನಿಗೆ ಚೆನ್ನಾಗಿ ಗೊತ್ತಿದೆ, ನಮಗೆ ಏನು ಕೊಟ್ಟರೆ ನಾವು ಒಳ್ಳೆಯವರಾಗುತ್ತೇವೆ ಎನ್ನುವುದು. ಆದ್ದರಿಂದ ಆರಾಧನೆ ನಮ್ಮ ಕರ್ತವ್ಯ ಅನುಗ್ರಹ ಅವನಿಗೆ ಬಿಟ್ಟದ್ದು ಎಂದುಕೊಂಡು ಬದುಕಬೇಕು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇನ್ಮುಂದೆ ಹಲಸಿನ ಬೀಜ ಬಿಸಾಡಬೇಡಿ! ಆರೋಗ್ಯಕ್ಕೆ ಬೆಟ್ಟದಷ್ಟು ಲಾಭ ನೀಡುವ ಗುಣವಿದೆ

ಈಗ ಹಲಸಿನ ಹಣ್ಣಿನ ಕಾಲ. ರುಚಿ ಮತ್ತು ಸುವಾಸನೆಯಿಂದ ಬಾಯಲ್ಲಿ ನೀರೂರಿಸುವ ಈ ಹಣ್ಣು ಆರೋಗ್ಯಕ್ಕೂ ಅಪಾರ ಲಾಭ ನೀಡುತ್ತದೆ. ಆದರೆ, ಬಹುಪಾಲು ಜನರು ಈ ಹಣ್ಣಿನ ಬೀಜಗಳನ್ನು ಉಪಯೋಗವಿಲ್ಲದ ಅಂಶವೆಂದು ಬಿಸಾಡುತ್ತಾರೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ಈ ಬೀಜಗಳಲ್ಲೂ ಅಮೂಲ್ಯ ಪೌಷ್ಟಿಕಾಂಶಗಳು ಅಡಗಿವೆ.

ಉಡುಪಿಯಲ್ಲಿ ಭೀಕರ ರಸ್ತೆ ಅಪಘಾತ: ಎಂ.ಬಿ.ಎ ವಿದ್ಯಾರ್ಥಿ ಹಾಗೂ ತಬಲ ವಾದಕ ಸಂಕೀರ್ತನ್ ದುರ್ಮರಣ

ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಕಿನ್ನಿಮುಲ್ಕಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಉಡುಪಿ: ಎರಡು ದಿನಗಳ ರೋಚಕ ಕಾರ್ಯಾಚರಣೆ ಬಳಿಕ ಒಂಟಿ ಸಲಗ ಸೆರೆ – ಗ್ರಾಮಸ್ಥರಿಗೆ ನಿಟ್ಟುಸಿರು!

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ, ಕಮಲಶಿಲೆ ಹಾಗೂ ಹೊಸಂಗಡಿ ಭಾಗಗಳಲ್ಲಿ ಎರಡು ದಿನಗಳ ಕಾಲ ಆತಂಕ ಮೂಡಿಸಿದ್ದ ಒಂಟಿ ಕಾಡಾನೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದು, ಸಕ್ರೆಬೈಲಿಗೆ ಕಳುಹಿಸಲಾಗಿದೆ.

ಇರ್ವತ್ತೂರು ಕೊಳಕೆ ಶಾಲೆಯಲ್ಲಿ ಉಚಿತ ನೋಟ್ಸ್ ಪುಸ್ತಕ ವಿತರಣೆ

ಸುಮಾರು 15 ವರ್ಷಗಳಿಂದ ಇರ್ವತ್ತೂರು ಕೊಳಕೆ ಶಾಲೆಗೆ ಶಾಲಾ ಹೆಮ್ಮೆಯ ಹಳೆವಿದ್ಯಾರ್ಥಿ ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಉದಯ ಎಸ್ ಕೋಟ್ಯಾನ್ ಮತ್ತು ಮುಂಬೈ ಉದ್ಯಮಿ ವಿಠ್ಠಲ ಎಸ್ ಅಮೀನ್ ರವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ ನೀಡುತ್ತಿದ್ದು ,ಈ ಬಾರಿಯೂ ಕೊಡುಗೆ ನೀಡಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ.