spot_img

ಮಳೆಗಾಲದಲ್ಲಿ ಚಿಗುರುವ ತಜಂಕ್ ( ತಗತೆ ) ಸೊಪ್ಪು: ರುಚಿಗೂ, ಆರೋಗ್ಯಕ್ಕೂ ಅಮೂಲ್ಯ ಕೊಡುಗೆ

Date:

ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಸ್ವಾಭಾವಿಕವಾಗಿ ಬೆಳೆಯುವ ತಜಂಕ್ ಅಥವಾ ತಗತೆ (ತಗಚೆ/ತಗಟೆ) ಗಿಡವು ಕೇವಲ ಕಳೆಗಿಡವಲ್ಲ, ಔಷಧೀಯ ಮೌಲ್ಯವನ್ನು ಹೊಂದಿರುವ ಅಮೂಲ್ಯ ಸಸ್ಯವಾಗಿದೆ. ಈ ಸೊಪ್ಪು ಆಯುರ್ವೇದದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದು, ಆರೋಗ್ಯ ರಕ್ಷಣೆಯಲ್ಲಿ ಬಹುಪಾಲು ವಹಿಸುತ್ತದೆ.

ತಗತೆ ಸೊಪ್ಪಿನ ಚಿಗುರುಗಳನ್ನು ಆಹಾರ ಮತ್ತು ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಬಾಯಲ್ಲಿ ನೀರು ಬರುತ್ತದೆ ಎನ್ನುವಷ್ಟು ರುಚಿಕರವಾದ ಈ ಸೊಪ್ಪು ದೇಹಕ್ಕೆ ತಂಪು ನೀಡುವ ಗುಣವನ್ನೂ ಹೊಂದಿದೆ. ತಜಂಕ್ ನ ಒಣಬೀಜವನ್ನು ಪುಡಿ ಮಾಡಿ ಕಾಫಿಯಾಗಿ ಬಳಸಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ.

ಆಯುರ್ವೇದ ಉಪಯೋಗಗಳು:

  • ಗಾಯಗಳಿಗೆ ಈ ಸೊಪ್ಪಿನ ರಸ ಹಚ್ಚಿದರೆ ಉರಿ ಮತ್ತು ನೋವು ಕಡಿಮೆಯಾಗುತ್ತದೆ
  • ರಕ್ತ ಶುದ್ಧೀಕರಣ, ಮಲಬದ್ಧತೆ, ಕಬ್ಬಿಣದ ಕೊರತೆ, ಬೊಜ್ಜು ಕರಗಿಸುವಲ್ಲಿ ಸಹಕಾರಿ
  • ಚರ್ಮರೋಗ, ಉಗುರು ಸುತ್ತು, ತುರಿಕೆಗಳಿಗೆ ಎಲೆ ಅರೆದು ಹಚ್ಚುವುದು ಪರಿಣಾಮಕಾರಿ
  • ಜ್ವರ, ಕೆಮ್ಮು, ಅಜೀರ್ಣ, ಹಸಿವಿನ ಕೊರತೆ ಮತ್ತು ಋತುಚಕ್ರದ ತೊಂದರೆಗಳಿಗೆ ಇದು ಉತ್ತಮ ಔಷಧ

ಅನ್ನದೊಂದಿಗೆ ತಗತೆ:
ತಗತೆ ಸೊಪ್ಪನ್ನು ವಿವಿಧ ವಿಧದ ಖಾದ್ಯಗಳಲ್ಲಿ ಬಳಸಲಾಗುತ್ತದೆ – ತಜಂಕ್ ಪತ್ರೋಡೆ, ತಜಂಕ್ ನೀರ್‌ದೋಸೆ, ತಜಂಕ್ ವಡೆ, ತಜಂಕ್ ಸುಕ್ಕ, ತಜಂಕ್ ಸಾರು ಮುಂತಾದವುಗಳಲ್ಲಿ ಈ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ರುಚಿಯ ಜೊತೆಗೆ ಆರೋಗ್ಯವನ್ನೂ ರಕ್ಷಿಸುವ ಈ ಸೊಪ್ಪಿನ ಬಳಕೆಯನ್ನು ಮನೆಮನೆಗೂ ತಲುಪಿಸಲು ಪ್ರಚಾರ ಅಗತ್ಯವಾಗಿದೆ.

ತಜಂಕ್ ( ತಗತೆ )– ಪ್ರಕೃತಿಯ ಕೊಡುಗೆ, ಆಯುರ್ವೇದದ ಆಶೀರ್ವಾದ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕರ್ನಾಟಕದಲ್ಲಿ ‘ಥಗ್ ಲೈಫ್’ ಬಿಡುಗಡೆಗೆ ತಡೆ: ಕಮಲ್ ಹಾಸನ್‌ಗೆ ಹೈಕೋರ್ಟ್ ಆದೇಶ

ನಟ ಕಮಲ್ ಹಾಸನ್ ಅಭಿನಯದ 'ಥಗ್ ಲೈಫ್' ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದ್ದು, ವಿವಾದ ಇತ್ಯರ್ಥವಾಗುವವರೆಗೆ ಸಿನಿಮಾ ಬಿಡುಗಡೆಗೆ ಅವಕಾಶವಿಲ್ಲ ಎಂದು ಆದೇಶಿಸಿದೆ.

ಅತ್ರಾಡಿ ರಿಕ್ಷಾ ಚಾಲಕನಿಗೆ ಹಲ್ಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಶರತ್ತುಬದ್ಧ ಜಾಮೀನು

ಅತ್ರಾಡಿ ಶೇಡಿಗುಡ್ಡೆ ಬಳಿ ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಕೊರೊನಾ ಸೋಂಕಿನಿಂದ ಪೀಟರ್ ಮಥಾಯಸ್ ನಿಧನ: ತಹಶೀಲ್ದಾರ್ ಭೇಟಿನೀಡಿ ಸಾಂತ್ವನ

ಕಾಪು ತಾಲೂಕಿನ ಬೆಳ್ಳೆ ಗ್ರಾಮದ ನಿವಾಸಿ ಪೀಟರ್ ಮಥಾಯಸ್ (65) ಅವರು ಕೋವಿಡ್-19 ಪಾಸಿಟಿವ್ ದೃಢಪಟ್ಟ ಬಳಿಕ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಜೂನ್ 2 ರಂದು ನಿಧನರಾದರು.

ಯೂರಿಕ್ ಆಸಿಡ್ ನಿಯಂತ್ರಣಕ್ಕೆ ಹಸಿ ಪಪ್ಪಾಯಿ – ನೈಸರ್ಗಿಕ ಮನೆಮದ್ದು!

ಅಧಿಕ ಯೂರಿಕ್ ಆಮ್ಲ ಸಮಸ್ಯೆ ಇತ್ತೀಚೆಗೆ ಸಾಮಾನ್ಯವಾಗಿದ್ದು, ಇದು ತಡವಾಗಿ ಗೋಚರಿಸುವ ಸಮಸ್ಯೆಯಾಗಿರುವುದರಿಂದ ಹೆಚ್ಚು ಮಂದಿಗೆ ಆರೋಗ್ಯದಲ್ಲಿ ಕಿರಿಕಿರಿ ಉಂಟುಮಾಡುತ್ತಿದೆ. ಈಗ, ಈ ಸಮಸ್ಯೆಗೆ ಹಸಿ ಪಪ್ಪಾಯಿ ಉತ್ತಮ ಮನೆಮದ್ದಾಗಿದೆ.