spot_img

ದಿನ ವಿಶೇಷ – ವಿಶ್ವ ಉತ್ಸವ ದಿನ (World Party Day)

Date:

ಏಪ್ರಿಲ್ 3 ರಂದು ಆಚರಿಸಲಾಗುವ ವರ್ಲ್ಡ್ ಪಾರ್ಟಿ ಡೇ ಎಂಬುದು ಸಂತೋಷ, ಶಾಂತಿ ಮತ್ತು ಏಕತೆಯನ್ನು ಉತ್ತೇಜಿಸುವ ವಿಶ್ವಮಟ್ಟದ ಹಬ್ಬವಾಗಿದೆ. 1995ರಲ್ಲಿ ಪ್ರಕಟವಾದ ವನ್ನಾ ಬೊಂಟಾ ಅವರ Flight: A Quantum Fiction Novel ಕಾದಂಬರಿಯಿಂದ ಪ್ರೇರಿತವಾದ ಈ ದಿನ, ವಿಶ್ವ ಪಾರ್ಟಿ ದಿನದ ಮುಖ್ಯ ಉದ್ದೇಶವೆಂದರೆ, ವಿಶ್ವದ ಎಲ್ಲ ಜನರು ಒಂದು ದಿನವಂತೂ ಯುದ್ಧ, ದ್ವೇಷ ಮತ್ತು ಬೇಧಭಾವವನ್ನು ಮರೆತು ಸಂತೋಷವನ್ನು ಹಂಚಿಕೊಳ್ಳಬೇಕು ಎಂಬುದು. ಈ ದಿನವನ್ನು ಆಚರಿಸುವ ವೇಳೆ, ಪ್ರತಿಯೊಬ್ಬರೂ ತಮ್ಮ ಅನುಭವಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಂಡು, ಹೊಸ ಸ್ನೇಹಗಳನ್ನು ಬೆಳೆಸಿ, ಜೀವನವನ್ನು ಹಬ್ಬದಂತೆಯೇ ಕಾಣಲು ಉತ್ತೇಜಿಸಲ್ಪಡುತ್ತಾರೆ. ಸಂಸ್ಕೃತಿ, ಭಾಷೆ, ಮತ ಮತ್ತು ರಾಷ್ಟ್ರಭೇದವಿಲ್ಲದೆ ಎಲ್ಲರೂ ಒಂದೇ ಸಮಾನತೆಯಿಂದ ಈ ಸಂಭ್ರಮದಲ್ಲಿ ಪಾಲ್ಗೊಳ್ಳಬಹುದು.

ಇದು ಕೇವಲ ಸಾಮಾನ್ಯ ಪಾರ್ಟಿಯ ದಿನವಲ್ಲ, ವಿಶ್ವಶಾಂತಿ ಮತ್ತು ಸೌಹಾರ್ದತೆಯನ್ನು ಹಬ್ಬಿಸುವ ಒಂದು ಅಭಿಯಾನವೂ ಆಗಿದೆ. ಸಾಮಾಜಿಕ ಜಾಲತಾಣಗಳು, ಸಮುದಾಯ ಕಾರ್ಯಕ್ರಮಗಳು, ಸಂಗೀತ ಕಚೇರಿಗಳು ಮತ್ತು ಸ್ನೇಹಿತರೊಂದಿಗೆ ವಿಶೇಷ ಸಮಯ ಕಳೆಯುವುದರಿಂದ ಈ ದಿನವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಮಾಡಬಹುದು. ಒಟ್ಟಾರೆ, ವಿಶ್ವ ಪಾರ್ಟಿ ದಿನವು ‘ನಾನು ಸಂತೋಷವಾಗಿದ್ದರೆ, ಜಗತ್ತೂ ಸಂತೋಷವಾಗಿರಬಹುದು’ ಎಂಬ ಆಶಯವನ್ನು ಜನರ ಮನಸ್ಸಿನಲ್ಲಿ ಬೇರೂರಿಸಲು ಸಹಾಯಕವಾಗಿದೆ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬೇಸಿಗೆಯಲ್ಲಿ ವಾಲ್ನಟ್ ಸೇವಿಸುವುದರ ಪ್ರಯೋಜನಗಳು!

ಬೇಸಿಗೆಯಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರಿನಾಂಶದಿಂದ ಕೂಡಿದ ಹಣ್ಣುಗಳು ಮತ್ತು ತರಕಾರಿಗಳಷ್ಟೇ ಪ್ರಾಮುಖ್ಯತೆ ಡ್ರೈ ಫ್ರೂಟ್ಸ್‌ಗೂ ಇದೆ

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ನಿಷೇಧ: ವಿದ್ಯಾರ್ಥಿಗಳಿಗೆ ಅವಮಾನ, ನ್ಯಾಯಾಲಯದ ಮುಂದೆ ಪ್ರಕರಣ

ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಯಜ್ಞೋಪವೀತ (ಜನಿವಾರ) ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ ಪ್ರಕರಣಗಳು ರಾಜ್ಯವ್ಯಾಪಿ ವಿವಾದವಾಗಿ ಪರಿಣಮಿಸಿದೆ.

ಸುಪ್ರೀಂಕೋರ್ಟ್ ಕಾನೂನು ರಚಿಸಿದರೆ ಸಂಸತ್ತಿನ ಅಗತ್ಯವೇನು? – ಬಿಜೆಪಿ ಸಂಸದ ನಿಶಿಕಾಂತ್ ದುಬೆಯ ವಿವಾದಾತ್ಮಕ ಹೇಳಿಕೆ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ನಿಶಿಕಾಂತ್ ದುಬೆ ಅವರು ಸುಪ್ರೀಂಕೋರ್ಟ್ ಕಾನೂನು ರಚನೆಯಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಿದರೆ ಸಂಸತ್ತನ್ನು ಮುಚ್ಚಿಬಿಡಬೇಕು ಎಂದು ವಾದಿಸಿದ್ದಾರೆ

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ವಿಚಿತ್ರ ವಿನಂತಿ: “ಪಾಸ್ ಮಾಡಿ ಸರ್, ನನ್ನ LOVE ನಿಮ್ಮ ಕೈಯಲ್ಲಿ!”

ಸ್ಎಸ್ಎಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನದ ಸಂದರ್ಭದಲ್ಲಿ ಒಂದು ವಿಚಿತ್ರ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ.