spot_img

ದಿನ ವಿಶೇಷ – ಯುಗಾದಿ ಹಬ್ಬ

Date:

ಯುಗಾದಿ ಹಬ್ಬ

“ನವಪ್ರಕಾಶಂ ನವ ಚೈತನ್ಯಂ
ನವಹರ್ಷಮ್ ನವ ಸಾಮರ್ಥ್ಯಮ್
ಆಯಾತು ನವ ವರ್ಷಃ
ಏಷಃ ಗೃಹೀತ್ವಾ ನವಮಾಂಗಲ್ಯಮ್

ಮೇಷ ಮಾಸದ ಮೊದಲ ದಿವಸ ಈ ವರ್ಷದ ಮೊದಲ ದಿವಸ. ಸೌರಮಾನದ ಪ್ರಕಾರ ಇವತ್ತು ಯುಗಾದಿಯ ಹಬ್ಬ. ಯುಗದ ಪ್ರಾರಂಭ ಎನ್ನುವುದು ಪೌರಾಣಿಕ ಹಿನ್ನೆಲೆಯಾದರೆ ನವ ಜೀವನದ ಪ್ರಾರಂಭ ಎನ್ನುವುದು ಜೀವನದ ಸತ್ಯ. ಪ್ರತಿದಿನವೂ ಬೆಳಗ್ಗೆ ಹೇಳುವಾಗ ಹೊಸತರಲ್ಲಿ ಹೇಳುವ ನಾವು ಹೊಸ ವರುಷವನ್ನು ಮತ್ತಷ್ಟು ಆನಂದಿಸುತ್ತೇವೆ. ನಮಗೆ ನಮ್ಮ ಸಾಧನೆಗೆ ಇನ್ನೊಂದು ವರ್ಷ ಸೇರಿತು ಎನ್ನುವ ಹರ್ಷವಾದರೆ, ಕಳೆದ ಸಮಯದ ವ್ಯರ್ಥತೆಯ ಬಗ್ಗೆ ಬೇಸರವೂ ಕೂಡ ಸಣ್ಣದಾಗಿ ಮೂಡಿರುತ್ತದೆ. ಅದನ್ನು ಸರಿಪಡಿಸಿಕೊಂಡು ಸಾಗುವ ಅಗತ್ಯ ಹೊಸ ವರ್ಷದಲ್ಲಿರುತ್ತದೆ.

ಆದ್ದರಿಂದಲೇ ಯುಗಯುಗ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಎನ್ನುವ ಸಂದೇಶ ನಮಗೆ ನವ ಜೀವನದ ಉತ್ಸಾಹವನ್ನು ತಂದುಕೊಡುತ್ತದೆ. ದೇಶದ ಬಹಳಷ್ಟು ಕಡೆ ಸೂರ್ಯನ ಗತಿಯ ಮೂಲಕ ದಿನ ಚಿಂತನೆ ನಡೆಯುವುದರಿಂದ ಈ ದಿವಸ ಯುಗಾದಿಯನ್ನು ಆಚರಿಸುವ ಸಂಖ್ಯೆ ಬಹಳಷ್ಟಿದೆ. ಬೇವು ಬೆಲ್ಲದ ಮೂಲಕ ಕಹಿ ಸಿಹಿ ಜೀವನ ಎನ್ನುವ ಅನುಸಂಧಾನವನ್ನು ಇಟ್ಟುಕೊಂಡು ಅದರೊಟ್ಟಿಗೆ ಕಹಿಸಾಮಾನ್ಯವಾಗಿ ಸಿಗುತ್ತದೆ ಆದರೆ ಸಿಹಿಯನ್ನು ಪ್ರಯತ್ನ ಪೂರ್ವಕವಾಗಿ ಪಡೆದುಕೊಳ್ಳಬೇಕು ಎನ್ನುವ ಇದರ ಹಿಂದಿನ ಕಾರಣದೊಂದಿಗೆ ಬದುಕು ಸಾಗಲಿ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ವಿಧಾನ ಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವ: 15 ಕೋಟಿ ರೂಪಾಯಿ ಖರ್ಚು

ಸತತ 18 ವರ್ಷಗಳ ನಿರೀಕ್ಷೆಯ ನಂತರ ತಂಡವು ಈ ಬಾರಿ ಚಾಂಪಿಯನ್‌ಶಿಪ್‌ ಗೆದ್ದಿದ್ದು, ಅಭಿಮಾನಿಗಳು ಮುಕ್ತಾಯದಿಂದ ಸಂಭ್ರಮಿಸಿದರು

ರಾಮ ಮಂದಿರಕ್ಕೆ 11 ಕಿರೀಟಗಳು ಮತ್ತು ಬಂಗಾರದ ಬಿಲ್ಲು-ಬಾಣಗಳು

11 ಕಿರೀಟಗಳು, ಚಿನ್ನದ ಬಿಲ್ಲು-ಬಾಣಗಳು ಮತ್ತು ಇತರ ಬಹುಮೂಲ್ಯ ಆಭರಣಗಳನ್ನು ದಾನ ಮಾಡಿದ್ದಾರೆ.

ಇನ್ಮುಂದೆ ಹಲಸಿನ ಬೀಜ ಬಿಸಾಡಬೇಡಿ! ಆರೋಗ್ಯಕ್ಕೆ ಬೆಟ್ಟದಷ್ಟು ಲಾಭ ನೀಡುವ ಗುಣವಿದೆ

ಈಗ ಹಲಸಿನ ಹಣ್ಣಿನ ಕಾಲ. ರುಚಿ ಮತ್ತು ಸುವಾಸನೆಯಿಂದ ಬಾಯಲ್ಲಿ ನೀರೂರಿಸುವ ಈ ಹಣ್ಣು ಆರೋಗ್ಯಕ್ಕೂ ಅಪಾರ ಲಾಭ ನೀಡುತ್ತದೆ. ಆದರೆ, ಬಹುಪಾಲು ಜನರು ಈ ಹಣ್ಣಿನ ಬೀಜಗಳನ್ನು ಉಪಯೋಗವಿಲ್ಲದ ಅಂಶವೆಂದು ಬಿಸಾಡುತ್ತಾರೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ಈ ಬೀಜಗಳಲ್ಲೂ ಅಮೂಲ್ಯ ಪೌಷ್ಟಿಕಾಂಶಗಳು ಅಡಗಿವೆ.

ಉಡುಪಿಯಲ್ಲಿ ಭೀಕರ ರಸ್ತೆ ಅಪಘಾತ: ಎಂ.ಬಿ.ಎ ವಿದ್ಯಾರ್ಥಿ ಹಾಗೂ ತಬಲ ವಾದಕ ಸಂಕೀರ್ತನ್ ದುರ್ಮರಣ

ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಕಿನ್ನಿಮುಲ್ಕಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ವರದಿಯಾಗಿದೆ.