spot_img

ದಿನ ವಿಶೇಷ – ಯುಗಾದಿ ಹಬ್ಬ

Date:

spot_img

ಯುಗಾದಿ ಹಬ್ಬ

“ನವಪ್ರಕಾಶಂ ನವ ಚೈತನ್ಯಂ
ನವಹರ್ಷಮ್ ನವ ಸಾಮರ್ಥ್ಯಮ್
ಆಯಾತು ನವ ವರ್ಷಃ
ಏಷಃ ಗೃಹೀತ್ವಾ ನವಮಾಂಗಲ್ಯಮ್

ಮೇಷ ಮಾಸದ ಮೊದಲ ದಿವಸ ಈ ವರ್ಷದ ಮೊದಲ ದಿವಸ. ಸೌರಮಾನದ ಪ್ರಕಾರ ಇವತ್ತು ಯುಗಾದಿಯ ಹಬ್ಬ. ಯುಗದ ಪ್ರಾರಂಭ ಎನ್ನುವುದು ಪೌರಾಣಿಕ ಹಿನ್ನೆಲೆಯಾದರೆ ನವ ಜೀವನದ ಪ್ರಾರಂಭ ಎನ್ನುವುದು ಜೀವನದ ಸತ್ಯ. ಪ್ರತಿದಿನವೂ ಬೆಳಗ್ಗೆ ಹೇಳುವಾಗ ಹೊಸತರಲ್ಲಿ ಹೇಳುವ ನಾವು ಹೊಸ ವರುಷವನ್ನು ಮತ್ತಷ್ಟು ಆನಂದಿಸುತ್ತೇವೆ. ನಮಗೆ ನಮ್ಮ ಸಾಧನೆಗೆ ಇನ್ನೊಂದು ವರ್ಷ ಸೇರಿತು ಎನ್ನುವ ಹರ್ಷವಾದರೆ, ಕಳೆದ ಸಮಯದ ವ್ಯರ್ಥತೆಯ ಬಗ್ಗೆ ಬೇಸರವೂ ಕೂಡ ಸಣ್ಣದಾಗಿ ಮೂಡಿರುತ್ತದೆ. ಅದನ್ನು ಸರಿಪಡಿಸಿಕೊಂಡು ಸಾಗುವ ಅಗತ್ಯ ಹೊಸ ವರ್ಷದಲ್ಲಿರುತ್ತದೆ.

ಆದ್ದರಿಂದಲೇ ಯುಗಯುಗ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಎನ್ನುವ ಸಂದೇಶ ನಮಗೆ ನವ ಜೀವನದ ಉತ್ಸಾಹವನ್ನು ತಂದುಕೊಡುತ್ತದೆ. ದೇಶದ ಬಹಳಷ್ಟು ಕಡೆ ಸೂರ್ಯನ ಗತಿಯ ಮೂಲಕ ದಿನ ಚಿಂತನೆ ನಡೆಯುವುದರಿಂದ ಈ ದಿವಸ ಯುಗಾದಿಯನ್ನು ಆಚರಿಸುವ ಸಂಖ್ಯೆ ಬಹಳಷ್ಟಿದೆ. ಬೇವು ಬೆಲ್ಲದ ಮೂಲಕ ಕಹಿ ಸಿಹಿ ಜೀವನ ಎನ್ನುವ ಅನುಸಂಧಾನವನ್ನು ಇಟ್ಟುಕೊಂಡು ಅದರೊಟ್ಟಿಗೆ ಕಹಿಸಾಮಾನ್ಯವಾಗಿ ಸಿಗುತ್ತದೆ ಆದರೆ ಸಿಹಿಯನ್ನು ಪ್ರಯತ್ನ ಪೂರ್ವಕವಾಗಿ ಪಡೆದುಕೊಳ್ಳಬೇಕು ಎನ್ನುವ ಇದರ ಹಿಂದಿನ ಕಾರಣದೊಂದಿಗೆ ಬದುಕು ಸಾಗಲಿ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗೂಗಲ್ ಮ್ಯಾಪ್​ನ ತಪ್ಪು ನಿರ್ದೇಶನ: ಮುಂಬೈನ ಕಂದಕಕ್ಕೆ ಜಾರಿದ ಕಾರು

ತಂತ್ರಜ್ಞಾನದ ಮುಂದುವರಿದ ಬೆಳವಣಿಗೆಗಳು ಜೀವನವನ್ನು ಸರಳಗೊಳಿಸಿರುವ ಜೊತೆಗೆ, ಕೆಲವು ಅನಿರೀಕ್ಷಿತ ಅಪಾಯಗಳಿಗೂ ಕಾರಣವಾಗುತ್ತಿವೆ.

ಜಾರ್ಖಂಡ್ ನ ಗುಮ್ಲಾ ಕಾಡಿನಲ್ಲಿ ಮೂವರು PLFI ನಕ್ಸಲರ ಎನ್‌ಕೌಂಟರ್, ಶಸ್ತ್ರಾಸ್ತ್ರ ವಶಕ್ಕೆ

ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಭದ್ರತಾ ಪಡೆಗಳು ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ನಡೆಸಿದ ಭೀಕರ ಕಾರ್ಯಾಚರಣೆಯಲ್ಲಿ PLFI ಸಂಘಟನೆಯ ಮೂವರು ನಕ್ಸಲರನ್ನು ಹತ್ಯೆ ಮಾಡುವಲ್ಲಿ ಯಶಸ್ವಿ

ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್‌ಗೆ ನೂತನ ಸಾರಥಿ: ಉಷಾ ಅಂಚನ್‌ಗೆ ಅಧ್ಯಕ್ಷ ಪಟ್ಟ

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರಾಗಿ ನೆಲ್ಯಾಡಿಯ ಹಿರಿಯ ಕಾಂಗ್ರೆಸ್ ನಾಯಕಿ, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯೆ ಹಾಗೂ ಪ್ರಸ್ತುತ ದ.ಕ. ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಉಷಾ ಅಂಚನ್ ಅವರನ್ನು ನೇಮಕ ಮಾಡಲಾಗಿದೆ.

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ: ಕಾಸರಗೋಡಿನ ಖ್ಯಾತ ಯೂಟ್ಯೂಬರ್ “ಸಾಲು ಕಿಂಗ್” ಬಂಧನ

ಕಾಸರಗೋಡು ಮೂಲದ ಜನಪ್ರಿಯ ಯೂಟ್ಯೂಬರ್ ಒಬ್ಬನನ್ನು ಅಪ್ರಾಪ್ತ ಬಾಲಕಿಗೆ ವಿವಾಹದ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೋಝಿಕ್ಕೋಡ್‌ನ ಕೊಯಿಲಾಂಡಿ ಪೊಲೀಸರು ಬಂಧಿಸಿದ್ದಾರೆ