spot_img

ದಿನ ವಿಶೇಷ – ಕ್ಷಯ ರೋಗದ ದಿನ

Date:

spot_img

ಕ್ಷಯ ಎನ್ನುವ ಹೆಸರೇ ನಾಶವನ್ನು ಸೂಚಿಸುತ್ತದೆ.ಉಸಿರಾಟಕ್ಕೆ ತೊಂದರೆ ಕೊಡುವ ಮೂಲಕ ಈ ರೋಗ ನಮ್ಮನ್ನು ಸಾವಿನತ್ತ ಕೊಂಡುಯ್ಯುತ್ತದೆ. 2017ರಲ್ಲಿ ಈ ರೋಗಕ್ಕೆ ತುತ್ತಾಗಿ ಸುಮಾರು ಐದು ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಂದೂವರೆ ಕೋಟಿಗೂ ಮಿಕ್ಕಿ ಬಳಲಿದ್ದಾರೆ. ಆದರೆ 150 ವರ್ಷದ ಹಿಂದೆಯೇ ಡಾಕ್ಟರ್ ರಾಬರ್ಟ್ ಕೋಚ್ ಈ ರೋಗದ ಬಗ್ಗೆ ಸಂಶೋಧನೆ ಮಾಡಿ ಒಂದು ಮಟ್ಟಿನ ಔಷಧಿಯನ್ನು ಕಂಡು ಹಿಡಿದಿದ್ದಾನೆ ಆ ನೆನಪಿನಲ್ಲಿ 1882 ರಿಂದ ಈ ದಿವಸವನ್ನು ಕ್ಷಯ ರೋಗದ ದಿವಸ ಎಂದು ಎಂದು ಆಚರಿಸಿ ಆ ರೋಗದ ಬಗ್ಗೆ ತಿಳುವಳಿಕೆಯನ್ನು ಮೂಡಿಸುತ್ತಿದ್ದಾರೆ. ಉಸಿರಾಟಕ್ಕೆ ಇರುವ ತೊಂದರೆಗಳಿಗೆ ಮೂಲ ಈ ರೋಗ.

ಸುಪ್ತಕ್ಷಯ ಹಾಗೂ ಸಕ್ರಿಯ ಕ್ಷಯ ಎನ್ನುವ ಎರಡು ರೀತಿಗಳಿವೆ. ಏನಿದ್ದರೂ ಕೂಡ ಗೊತ್ತು ಮಾಡಿಕೊಂಡು ಕನಿಷ್ಠ ಒಂದು ವರ್ಷಗಳಷ್ಟು ಕಾಲ ಔಷಧಿ ಸೇವನೆ ಹಾಗೂ ಪತ್ಯಾದಿಗಳನ್ನು ಮಾಡಿದರೆ ಮಾತ್ರ ಈ ರೋಗ ಗುಣವಾಗುತ್ತದೆ.ಈ ದೇಶದಲ್ಲಿ ಸುಮಾರು 400 ವರ್ಷಗಳ ಹಿಂದೆಯೇ ಈ ರೋಗದ ಕುರಿತು ಉಲ್ಲೇಖವಿದೆ. ಜನ್ಮಾಂತರದಲ್ಲಿ ಮಾಡಿದ ಗುರು ನಿಂದೆ, ಗುರು ದ್ರೋಹ, ಗುರು ದ್ವೇಷ ಹಾಗೂ ಸ್ತ್ರೀ ಪರವಾದ ಪಾಪ ಕೃತ್ಯಗಳಿಂದ ಈ ರೋಗ ಬರುತ್ತದೆ ಅದಕ್ಕೆ ಸರಿಯಾದ ಪ್ರಾಯಶ್ಚಿತವನ್ನು ಮಾಡಿಕೊಂಡು ಔಷಧವನ್ನು ಸ್ವೀಕಾರ ಮಾಡಿದರೆ ಈ ರೋಗ ಗುಣಮುಖವಾಗುತ್ತದೆ ಎನ್ನುವ ಬಗ್ಗೆ ಕರ್ಮ ವಿಪಾಕ ಎನ್ನುವ ಗ್ರಂಥದಲ್ಲಿ ನಿರ್ದೇಶನವಿದೆ. ರೋಗಗಳು ಯಾವುದೇ ಇರಲಿ ಅನುಭವಿಸುವ ಕಾಲ ಬಂದಾಗ ಅದು ಹತ್ತಿರವಾಗುತ್ತದೆ ಅನುಭವಿಸಲೇ ಬೇಕಾಗುತ್ತದೆ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಳೆದ 5 ವರ್ಷಗಳಲ್ಲಿ 9 ಲಕ್ಷಕ್ಕೂ ಹೆಚ್ಚು ಭಾರತೀಯರಿಂದ ಪೌರತ್ವ ತ್ಯಾಗ! : ವಿದೇಶಾಂಗ ಸಚಿವರಿಂದ ಮಾಹಿತಿ

ಕಳೆದ ಐದು ವರ್ಷಗಳಲ್ಲಿ 9 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

ಅತ್ಯಾಚಾರ ಆರೋಪ: ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ!

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಕಾರವಾರದಲ್ಲಿ ಎನ್‌ಐಟಿಕೆಯ ಬಿ.ಟೆಕ್ ವಿದ್ಯಾರ್ಥಿನಿ ಆತ್ಮಹತ್ಯೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ತಾಲೂಕು ವೈದ್ಯಾಧಿಕಾರಿಯ ಪುತ್ರಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ನಡೆದಿದೆ.

ಮೋದಿ ಆಳ್ವಿಕೆಯಲ್ಲಿ ಹೊಸ ಇತಿಹಾಸ: ಇಂದಿರಾ ಗಾಂಧಿಯವರ ದಾಖಲೆ ಮುರಿದು ದೇಶದ 2ನೇ ದೀರ್ಘಾವಧಿ ಪ್ರಧಾನಿ!

ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತದ ಇತಿಹಾಸದಲ್ಲಿ ಎರಡನೇ ಅತಿ ದೀರ್ಘಾವಧಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮಹತ್ವದ ದಾಖಲೆಯನ್ನು ಮಾಡಿದ್ದಾರೆ.