spot_img

ದಿನ ವಿಶೇಷ – ಕ್ಷಯ ರೋಗದ ದಿನ

Date:

ಕ್ಷಯ ಎನ್ನುವ ಹೆಸರೇ ನಾಶವನ್ನು ಸೂಚಿಸುತ್ತದೆ.ಉಸಿರಾಟಕ್ಕೆ ತೊಂದರೆ ಕೊಡುವ ಮೂಲಕ ಈ ರೋಗ ನಮ್ಮನ್ನು ಸಾವಿನತ್ತ ಕೊಂಡುಯ್ಯುತ್ತದೆ. 2017ರಲ್ಲಿ ಈ ರೋಗಕ್ಕೆ ತುತ್ತಾಗಿ ಸುಮಾರು ಐದು ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಂದೂವರೆ ಕೋಟಿಗೂ ಮಿಕ್ಕಿ ಬಳಲಿದ್ದಾರೆ. ಆದರೆ 150 ವರ್ಷದ ಹಿಂದೆಯೇ ಡಾಕ್ಟರ್ ರಾಬರ್ಟ್ ಕೋಚ್ ಈ ರೋಗದ ಬಗ್ಗೆ ಸಂಶೋಧನೆ ಮಾಡಿ ಒಂದು ಮಟ್ಟಿನ ಔಷಧಿಯನ್ನು ಕಂಡು ಹಿಡಿದಿದ್ದಾನೆ ಆ ನೆನಪಿನಲ್ಲಿ 1882 ರಿಂದ ಈ ದಿವಸವನ್ನು ಕ್ಷಯ ರೋಗದ ದಿವಸ ಎಂದು ಎಂದು ಆಚರಿಸಿ ಆ ರೋಗದ ಬಗ್ಗೆ ತಿಳುವಳಿಕೆಯನ್ನು ಮೂಡಿಸುತ್ತಿದ್ದಾರೆ. ಉಸಿರಾಟಕ್ಕೆ ಇರುವ ತೊಂದರೆಗಳಿಗೆ ಮೂಲ ಈ ರೋಗ.

ಸುಪ್ತಕ್ಷಯ ಹಾಗೂ ಸಕ್ರಿಯ ಕ್ಷಯ ಎನ್ನುವ ಎರಡು ರೀತಿಗಳಿವೆ. ಏನಿದ್ದರೂ ಕೂಡ ಗೊತ್ತು ಮಾಡಿಕೊಂಡು ಕನಿಷ್ಠ ಒಂದು ವರ್ಷಗಳಷ್ಟು ಕಾಲ ಔಷಧಿ ಸೇವನೆ ಹಾಗೂ ಪತ್ಯಾದಿಗಳನ್ನು ಮಾಡಿದರೆ ಮಾತ್ರ ಈ ರೋಗ ಗುಣವಾಗುತ್ತದೆ.ಈ ದೇಶದಲ್ಲಿ ಸುಮಾರು 400 ವರ್ಷಗಳ ಹಿಂದೆಯೇ ಈ ರೋಗದ ಕುರಿತು ಉಲ್ಲೇಖವಿದೆ. ಜನ್ಮಾಂತರದಲ್ಲಿ ಮಾಡಿದ ಗುರು ನಿಂದೆ, ಗುರು ದ್ರೋಹ, ಗುರು ದ್ವೇಷ ಹಾಗೂ ಸ್ತ್ರೀ ಪರವಾದ ಪಾಪ ಕೃತ್ಯಗಳಿಂದ ಈ ರೋಗ ಬರುತ್ತದೆ ಅದಕ್ಕೆ ಸರಿಯಾದ ಪ್ರಾಯಶ್ಚಿತವನ್ನು ಮಾಡಿಕೊಂಡು ಔಷಧವನ್ನು ಸ್ವೀಕಾರ ಮಾಡಿದರೆ ಈ ರೋಗ ಗುಣಮುಖವಾಗುತ್ತದೆ ಎನ್ನುವ ಬಗ್ಗೆ ಕರ್ಮ ವಿಪಾಕ ಎನ್ನುವ ಗ್ರಂಥದಲ್ಲಿ ನಿರ್ದೇಶನವಿದೆ. ರೋಗಗಳು ಯಾವುದೇ ಇರಲಿ ಅನುಭವಿಸುವ ಕಾಲ ಬಂದಾಗ ಅದು ಹತ್ತಿರವಾಗುತ್ತದೆ ಅನುಭವಿಸಲೇ ಬೇಕಾಗುತ್ತದೆ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇನ್ಮುಂದೆ ಹಲಸಿನ ಬೀಜ ಬಿಸಾಡಬೇಡಿ! ಆರೋಗ್ಯಕ್ಕೆ ಬೆಟ್ಟದಷ್ಟು ಲಾಭ ನೀಡುವ ಗುಣವಿದೆ

ಈಗ ಹಲಸಿನ ಹಣ್ಣಿನ ಕಾಲ. ರುಚಿ ಮತ್ತು ಸುವಾಸನೆಯಿಂದ ಬಾಯಲ್ಲಿ ನೀರೂರಿಸುವ ಈ ಹಣ್ಣು ಆರೋಗ್ಯಕ್ಕೂ ಅಪಾರ ಲಾಭ ನೀಡುತ್ತದೆ. ಆದರೆ, ಬಹುಪಾಲು ಜನರು ಈ ಹಣ್ಣಿನ ಬೀಜಗಳನ್ನು ಉಪಯೋಗವಿಲ್ಲದ ಅಂಶವೆಂದು ಬಿಸಾಡುತ್ತಾರೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ಈ ಬೀಜಗಳಲ್ಲೂ ಅಮೂಲ್ಯ ಪೌಷ್ಟಿಕಾಂಶಗಳು ಅಡಗಿವೆ.

ಉಡುಪಿಯಲ್ಲಿ ಭೀಕರ ರಸ್ತೆ ಅಪಘಾತ: ಎಂ.ಬಿ.ಎ ವಿದ್ಯಾರ್ಥಿ ಹಾಗೂ ತಬಲ ವಾದಕ ಸಂಕೀರ್ತನ್ ದುರ್ಮರಣ

ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಕಿನ್ನಿಮುಲ್ಕಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಉಡುಪಿ: ಎರಡು ದಿನಗಳ ರೋಚಕ ಕಾರ್ಯಾಚರಣೆ ಬಳಿಕ ಒಂಟಿ ಸಲಗ ಸೆರೆ – ಗ್ರಾಮಸ್ಥರಿಗೆ ನಿಟ್ಟುಸಿರು!

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ, ಕಮಲಶಿಲೆ ಹಾಗೂ ಹೊಸಂಗಡಿ ಭಾಗಗಳಲ್ಲಿ ಎರಡು ದಿನಗಳ ಕಾಲ ಆತಂಕ ಮೂಡಿಸಿದ್ದ ಒಂಟಿ ಕಾಡಾನೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದು, ಸಕ್ರೆಬೈಲಿಗೆ ಕಳುಹಿಸಲಾಗಿದೆ.

ಇರ್ವತ್ತೂರು ಕೊಳಕೆ ಶಾಲೆಯಲ್ಲಿ ಉಚಿತ ನೋಟ್ಸ್ ಪುಸ್ತಕ ವಿತರಣೆ

ಸುಮಾರು 15 ವರ್ಷಗಳಿಂದ ಇರ್ವತ್ತೂರು ಕೊಳಕೆ ಶಾಲೆಗೆ ಶಾಲಾ ಹೆಮ್ಮೆಯ ಹಳೆವಿದ್ಯಾರ್ಥಿ ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಉದಯ ಎಸ್ ಕೋಟ್ಯಾನ್ ಮತ್ತು ಮುಂಬೈ ಉದ್ಯಮಿ ವಿಠ್ಠಲ ಎಸ್ ಅಮೀನ್ ರವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ ನೀಡುತ್ತಿದ್ದು ,ಈ ಬಾರಿಯೂ ಕೊಡುಗೆ ನೀಡಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ.