spot_img

ದಿನ ವಿಶೇಷ – ರಾಷ್ಟ್ರೀಯ ಸಾಮರಸ್ಯ ದಿನ

Date:

ಒಂದು ಪರಿವಾರ ವಾಗಲಿ ಅಥವಾ ಒಂದು ಗೆಳೆತನವಾಗಲಿ ಅದು ಸಾಮರಸ್ಯದಿಂದ ಕೂಡಿದ್ದರೆ ಮಾತ್ರ ಅದಕ್ಕೆ ಮಹತ್ವ ಹಾಗೂ ಅದಕ್ಕೊಂದು ಅರ್ಥವನ್ನು ತರುತ್ತದೆ. ಸಾಮರಸ್ಯವಿಲ್ಲದಿದ್ದರೆ ಯಾರೂ ಕೂಡ ನಯಾಪೈಸೆ ಪ್ರಯೋಜನವಿಲ್ಲ. ಅದರ ಸಂದೇಶವನ್ನು ಕೊಡುವ ಸಲುವಾಗಿ ಈ ದಿವಸವನ್ನು ಮೀಸಲಿಟ್ಟಿದ್ದಾರೆ. ನಮ್ಮ ವೇದದಲ್ಲಿ ಒಂದು ಮಾತಿದೆ, ಎರಡು ಕೈಗಳು ಹಾಗೂ ಕಾಲ್ಗಳು ಒಂದಕ್ಕೊಂದು ಹಿಂದೆ ಮುಂದೆ ಸಾಗುವ ಹಾಗೆ ನಮ್ಮ ಪರಿವಾರಗಳು ಇರಲಿ ಎನ್ನುವ ಪ್ರಾರ್ಥನೆಯಿದೆ.

ಹೇಗೆ ದೇವತೆಗಳು ಪರಸ್ಪರ ಒಬ್ಬರಿಗೊಬ್ಬರು ಪೂರಕವಾಗಿರುತ್ತಾರೋ ಅದೇ ರೀತಿಯಾಗಿ ಸಾಮರಸ್ಯದಿಂದ ನಮ್ಮ ಒಟ್ಟಿಗೆ ಇರುವವರು ನಮ್ಮೊಂದಿಗೆ ಹಾಗೂ ಅವರೊಂದಿಗೆ ನಾವು ಇರುವ ಹಾಗೆ ನಮ್ಮ ಬದುಕು ಸಾಗಲಿ ಎನ್ನುವ ಆಶಯವನ್ನು ಜಗತ್ತಿಗೆ ಕೊಟ್ಟ ಮೊದಲ ಕೀರ್ತಿ ನಮ್ಮ ವೇದಕ್ಕೆ ಸಲ್ಲುತ್ತದೆ. ಆದ್ದರಿಂದ ಸಾಮರಸ್ಯ ದಿನವನ್ನು ಯಾರೇ ಗುರುತಿಸಿರಲಿ ಅದರ ಮಹತ್ವವನ್ನು ಮೊದಲು ಸಾರಿದ್ದು ಸನಾತನ ಧರ್ಮ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬೇಸಿಗೆಯಲ್ಲಿ ವಾಲ್ನಟ್ ಸೇವಿಸುವುದರ ಪ್ರಯೋಜನಗಳು!

ಬೇಸಿಗೆಯಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರಿನಾಂಶದಿಂದ ಕೂಡಿದ ಹಣ್ಣುಗಳು ಮತ್ತು ತರಕಾರಿಗಳಷ್ಟೇ ಪ್ರಾಮುಖ್ಯತೆ ಡ್ರೈ ಫ್ರೂಟ್ಸ್‌ಗೂ ಇದೆ

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ನಿಷೇಧ: ವಿದ್ಯಾರ್ಥಿಗಳಿಗೆ ಅವಮಾನ, ನ್ಯಾಯಾಲಯದ ಮುಂದೆ ಪ್ರಕರಣ

ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಯಜ್ಞೋಪವೀತ (ಜನಿವಾರ) ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ ಪ್ರಕರಣಗಳು ರಾಜ್ಯವ್ಯಾಪಿ ವಿವಾದವಾಗಿ ಪರಿಣಮಿಸಿದೆ.

ಸುಪ್ರೀಂಕೋರ್ಟ್ ಕಾನೂನು ರಚಿಸಿದರೆ ಸಂಸತ್ತಿನ ಅಗತ್ಯವೇನು? – ಬಿಜೆಪಿ ಸಂಸದ ನಿಶಿಕಾಂತ್ ದುಬೆಯ ವಿವಾದಾತ್ಮಕ ಹೇಳಿಕೆ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ನಿಶಿಕಾಂತ್ ದುಬೆ ಅವರು ಸುಪ್ರೀಂಕೋರ್ಟ್ ಕಾನೂನು ರಚನೆಯಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಿದರೆ ಸಂಸತ್ತನ್ನು ಮುಚ್ಚಿಬಿಡಬೇಕು ಎಂದು ವಾದಿಸಿದ್ದಾರೆ

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ವಿಚಿತ್ರ ವಿನಂತಿ: “ಪಾಸ್ ಮಾಡಿ ಸರ್, ನನ್ನ LOVE ನಿಮ್ಮ ಕೈಯಲ್ಲಿ!”

ಸ್ಎಸ್ಎಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನದ ಸಂದರ್ಭದಲ್ಲಿ ಒಂದು ವಿಚಿತ್ರ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ.