spot_img

ದಿನ ವಿಶೇಷ – ಹುತಾತ್ಮರ ದಿನ

Date:

ಹುಟ್ಟು ಸಾಮಾನ್ಯವಾಗಿರುತ್ತದೆ. ಆದರೆ ಸಾವು ಅಸಾಮಾನ್ಯವಾಗಿರಬೇಕು ಎನ್ನುವುದನ್ನು ತೋರಿಸಿಕೊಟ್ಟವ ಭಗತ್ ಸಿಂಗ್. 1931ರ ಇದೇ ದಿವಸ ಗಲ್ಲು ಶಿಕ್ಷೆಗೆ ಒಳಗಾದದ್ದು.ಇವರ ಒಟ್ಟಿಗೆ ಗೆಳೆತನದ ಪ್ರಭಾವಕ್ಕೆ ಒಳಗಾದ ಸುಖದೇವ್, ಹಾಗೂ ರಾಜಗುರು ಕೂಡ ಇತಿಹಾಸವಾಗಿದ್ದಾರೆ. ಯಾರ ಒಟ್ಟಿಗೆ ನಮ್ಮ ಗೆಳೆತನ ಸಾಗುತ್ತದೆಯೋ ಆ ದಿಕ್ಕಿನಲ್ಲಿ ನಮ್ಮ ಜೀವನ ಸಾಗುತ್ತದೆ ಎನ್ನುವುದಕ್ಕೆ ಇವರುಗಳು ಸಾಕ್ಷಿ. ಬೆಳ್ಳ ಬೆಳಗ್ಗೆ ಎಲ್ಲರೂ ಏಳುವುದಕ್ಕೆ ಮುಂಚೆ ಬ್ರಿಟಿಷರು ಇವರಿಗೆ ಗಲ್ಲು ಶಿಕ್ಷೆಯನ್ನು ಕೊಟ್ಟು ಸೇಟ್ಲೇಜ್ ನದಿಯ ದಡದಲ್ಲಿ ಶವ ಸಂಸ್ಕಾರ ಬಂದು ಮಾಡುತ್ತಿದ್ದರು. ಅಷ್ಟರಲ್ಲಿ ಜನಗಳಿಗೆ ಗೊತ್ತಾಗಿ ಗುಂಪು ಗುಂಪಾಗಿ ಬರತೊಡಗಿದ್ದನ್ನು ಕಂಡು ಅಲ್ಲಿಂದ ಕೂಡಲೆ ಕಾಲ್ಕಿತ್ತರು. ಸಾಯುವಾಗ ಯಾರು ಇಲ್ಲದಿದ್ದರೂ ಕೂಡ ಸತ್ತ ಮೇಲೆ ಇಡೀ ದೇಶ ಕಣ್ಣೀರಿಟ್ಟಿತು.

ಕೊನೆಯ ಕ್ಷಣದಲ್ಲಿ ನಾಲ್ಕು ಜನರಾದರೂ ನಮ್ಮೊಂದಿಗಿರಬೇಕು ಎನ್ನುವಂತೆ ಬದುಕಬೇಕು ಎನ್ನುವ ಮಾತನ್ನು ಕೇಳಿದ್ದೇವೆ, ಆದರೆ ಕೊನೆಯ ಕ್ಷಣದಲ್ಲಿ ಯಾರು ಇಲ್ಲದಿದ್ದರೂ ಕೂಡ ಸತ್ತ ಮೇಲೆ ವಿಷಯ ತಿಳಿದು ಇಡೀ ದೇಶ ಇವತ್ತಿಗೂ ಬೇಸರಿಸುತ್ತಿದೆ. ಸಾಯುವ ಕ್ಷಣದಲ್ಲಿರುವ ಜನ ಮುಖ್ಯವಲ್ಲ, ಸತ್ತ ಮೇಲೆ ಎಷ್ಟು ಜನ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎನ್ನುವುದು ಮುಖ್ಯ. 24ನೇ ವಯಸ್ಸಿನಲ್ಲಿ ಭಗತ್ ಸಿಂಗ್ ತನ್ನ ಹೋರಾಟವನ್ನು ಮಾತ್ರವಲ್ಲ ಜೀವನವನ್ನೇ ಮುಕ್ತಾಯಗೊಳಿಸಿದ್ದು. ಆದರೆ ಭಾರತದ ಸ್ವಾತಂತ್ರ್ಯದ ಚರಿತ್ರೆಯಲ್ಲಿ ಆತ ಅಮರ. ಆ ಕಾರಣಕ್ಕಾಗಿ ಈ ದಿವಸ ಹುತಾತ್ಮರ ದಿನ ಎಂದು ಈ ದೇಶ ಆಚರಿಸುತ್ತಿದೆ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಇಂಗ್ಲಿಷ್ ದಿನ

ಪ್ರಪಂಚದ ಬಹುತೇಕ ಭಾಗವನ್ನು ಈ ಭಾಷೆ ಬಸವಾಗಿಸಿಕೊಂಡಿದೆ. ಅಷ್ಟರಮಟ್ಟಿಗೆ ಪ್ರಸಿದ್ಧವಾಗಿದೆ ಹಾಗೂ ಸಂವಹನನಕ್ಕೆ ಮಾಧ್ಯಮವಾಗಿದೆ.

ಹಿರಿಯಡ್ಕದ ಡಾ. ಶೋಭಿತಾ ಅವರಿಗೆ ‘ಕರ್ನಾಟಕ ಮಹಿಳಾ ರತ್ನ’ ಪ್ರಶಸ್ತಿ!

ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಮಹತ್ವದ ಸೇವೆಗಾಗಿ ಹಿರಿಯಡ್ಕದ ಸೌಮ್ಯ ಕ್ಲಿನಿಕ್ ನ ಡಾ. ಶೋಭಿತಾ ಅವರು ಈ ವರ್ಷ 'ಕರ್ನಾಟಕ ಮಹಿಳಾ ರತ್ನ' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಹಿಂದೂ ವಿರೋಧಿ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ : ಕಿಶೋರ್ ಕುಮಾರ್ ಕುಂದಾಪುರ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಆಡಳಿತಾವಧಿಯ ಹಲವಾರು ವಿದ್ಯಮಾನಗಳು ಕಾಂಗ್ರೆಸ್ ಹಿಂದೂ ವಿರೋಧಿ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಭೇಟಿಯಾದ ರಾಕಿ ರೈ: ಮುತ್ತಪ್ಪ ರೈ ಪುತ್ರನ ರಾಜಕೀಯ ನಂಟು ?

ಅಂಡರ್‌ವಲ್ಡ್ ಹಿನ್ನೆಲೆ ಹೊಂದಿದ್ದ ಮಾಜಿ ಡಾನ್ ಮುತ್ತಪ್ಪ ರೈ ಅವರ ಹಿರಿಯ ಪುತ್ರ ರಾಕಿ ರೈ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಖಾಸಗಿ ಭೇಟಿಗೆ ಆಗಮಿಸಿದ್ದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.