ದಿನ ವಿಶೇಷ – ಮಹಾವೀರ ಜಯಂತಿ

Date:

spot_img

ಮಹಾವೀರ ಜಯಂತಿ

ಜೈನ ಧರ್ಮದ 24 ತೀರ್ಥಂಕರರಲ್ಲಿ ಕೊನೆಯವರಾಗಿ ಗುರುತಿಸಿಕೊಂಡವರು ಮಹಾವೀರರು. ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶಿಯಂದು ಮಹಾವೀರನ ಜನನವಾಯಿತು. ಕ್ರಿಸ್ತಪೂರ್ವ 599 ಅಥವಾ 615 ಎನ್ನುವ ವಾದವಿದೆ. ಈ ಬಗ್ಗೆ ನಿಖರವಾದ ದಾಖಲೆಗಳಿಲ್ಲ. ಜೈನ ಧರ್ಮದಲ್ಲಿ ತೀರ್ಥಂಕರರಿಗೆ ವಿಶೇಷವಾದ ಸ್ಥಾನಮಾನವಿದೆ. ಅದರಲ್ಲಿ ಋಷಭನಾಥನಿಂದ ಮೊದಲ್ಗೊಂಡು 22 ತೀರ್ಥಂಕರರು ಪೌರಾಣಿಕ ಪುರುಷರಾಗಿದ್ದಾರೆ. . ಕೊನೆಯ ಇಬ್ಬರು ಪಾರ್ಶ್ವನಾಥ ಹಾಗೂ ಮಹಾವೀರರು ಇತಿಹಾಸ ಪುರುಷರಾಗಿದ್ದಾರೆ. ಭಾರತದಲ್ಲಿ ಋಷಿಮುನಿಗಳಿಗೆ ಮಾತ್ರ ಸೀಮಿತವಾಗಿದ್ದ ಸಸ್ಯಹಾರವನ್ನು ಸಾರ್ವತ್ರಿಕವಾಗಿಸಿದ್ದು ಜೈನರು.

ಆದ್ದರಿಂದ ಸನಾತನದ ಪುರಾಣಕ್ಕೂ ಜೈನರ ತೀರ್ಥಂಕರರಿಗೂ ಬಹಳಷ್ಟು ಸಾಮ್ಯತೆಗಳು ಕಾಣುತ್ತದೆ. ಅದರಲ್ಲೂ ಭಾಗವತದಲ್ಲಿ ಭಗವಂತನ ಅವತಾರವಾದ ಋಷಭ ದೇವನೇ ವೃಷಭನಾಥ ಎನ್ನುವ ಹೆಸರಿನಲ್ಲಿ ಗುರುತಿಸಿಕೊಂಡಿದ್ದಾನೆ. ಆದ್ದರಿಂದ ಸಾವಿರಾರು ವರ್ಷಗಳಿಂದಲೂ ಕೂಡ ಭಾರತದಲ್ಲಿ ಜೈನರು ಹಾಗೂ ಹಿಂದೂಗಳು ಸಮಾನಮಸ್ಕಾರಾಗಿ ಬೆರೆತು ಸಾಗುತ್ತಿದ್ದಾರೆ. ನಮಗೆ ಸಾಕ್ಷಿಯಾಗಿ ಧರ್ಮಸ್ಥಳ ಒಂದೇ ಸಾಕಾಗುತ್ತದೆ. ಜೈನರ ಆಳ್ವಿಕೆಯಲ್ಲಿದ್ದರೂ ಕೂಡ ಹಿಂದು ಧರ್ಮದ ರೀತಿಯಲ್ಲಿ ನಡೆಯುವ ಪೂಜೆ ಪುರಸ್ಕಾರಗಳಿಗೆ ಧರ್ಮಸ್ಥಳಕ್ಕೆ ಸಾಟಿಯಾಗಬಲ್ಲ ಕ್ಷೇತ್ರವಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರೆಡ್ಮಿ ಪ್ರಿಯರಿಗೆ ಭರ್ಜರಿ ಸುದ್ದಿ: ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ‘ರೆಡ್ಮಿ ಟರ್ಬೊ 5’

ಭಾರತದಲ್ಲಿ ರೆಡ್ಮಿ ಟರ್ಬೊ 5 ಬಿಡುಗಡೆ ದಿನಾಂಕ ಸೋರಿಕೆ! ಜೂನ್ 16 ರಂದು ಅನಾವರಣಗೊಳ್ಳಲಿರುವ ಹೊಸ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ಆಕ್ರಮಣಶೀಲತೆಗೆ ಒಳಗಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನ

ಜೂನ್ 4 ರಂದು ಆಚರಿಸಲಾಗುವ ಆಕ್ರಮಣಶೀಲತೆಗೆ ಒಳಗಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನದ ಮಹತ್ವ, ಇತಿಹಾಸ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತಾದ ಮಾಹಿತಿ.

ಹಲಸಿನ ಹಣ್ಣು ತಿಂದ ಮೇಲೆ ಬೀಜ ಬಿಸಾಡ್ತೀರಾ? ತಡಿರಿ… ಅದರಲ್ಲಿದೆ ‘ಬಾದಾಮಿ’ಗಿಂತಲೂ ಹೆಚ್ಚಿನ ಶಕ್ತಿ

ಹಲಸಿನ ಹಣ್ಣಿನ ಬೀಜಗಳನ್ನು ಬಿಸಾಡುವ ಮುನ್ನ ಈ ಲೇಖನ ಓದಿ. ಇದರಲ್ಲಿರುವ ಪೋಷಕಾಂಶಗಳು ಮತ್ತು ಆರೋಗ್ಯದ ಲಾಭಗಳ ವಿವರ ಇಲ್ಲಿದೆ.

ಪೆರ್ಣಂಕಿಲ ದೇವಸ್ಥಾನದ ವ್ಯವಸ್ಥಾಪಕ ಸುರೇಶ್ ತಂತ್ರಿ ನಿಧನ

ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪಕ ಸುರೇಶ್ ತಂತ್ರಿಯವರು ದೈವಾಧೀನರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ